Get Updates
Get notified of breaking news, exclusive insights, and must-see stories!

ಮಧ್ಯಪ್ರದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿರುವುದೇಕೆ?

ಮಂಡಸೌರ್ (ಮಧ್ಯಪ್ರದೇಶ), ಜೂನ್ 7: ಮಧ್ಯಪ್ರದೇಶದ ಮಂಡಸೌರ್ ಎಂಬಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಪರಿಣಾಮ ಐವರು ಮೃತಪಟ್ಟ ಘಟನೆ ಕೇಳಿ ಒಮ್ಮೆ ಹೃದಯ ಕಸಿವಿಸಿಗೊಂಡಿರಬಹುದು.

ಅನ್ನದಾತೋ ಸುಖೀಭವ ಎನ್ನುವ ನಮ್ಮ ದೇಶದಲ್ಲಿ, ಅನ್ನ ನೀಡುವ ರೈತನನ್ನೇ ಗುಂಡಿಕ್ಕಿ ಕೊಲ್ಲುವುದು ಎಂದರೆ ಅತ್ಯಂತ ಅಮಾನವೀಯವೇ ಸರಿ. ದೇಶದ ಬೆನ್ನೆಲುಬು ಎಂದೇ ಕರೆಸಿಕೊಳ್ಳುವ ರೈತರ ಸಮಸ್ಯೆಗಳಿಗೆ ಕಿವಿಯಾಗಿ, ಅದರ ಪರಿಹಾರಕ್ಕೆ ಸನ್ನದ್ಧವಾಗಬೇಕಾದ ಸರ್ಕಾರವೇ ಅವರ ಸಾವಿಗೆ ಕಾರಣವಾದರೆ ಅದು ನಿಜಕ್ಕೂ ಶೋಚನೀಯ ಸಂಗತಿ.[ಮಧ್ಯಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ್, ಸಾವಿನ ಸಂಖ್ಯೆ 5ಕ್ಕೆ ಏರಿಕೆ]

ಭೂಪಾಲ್ ನಿಂದ 325 ಕಿ.ಮೀ.ದೂರದಲ್ಲಿರುವ ಮಂಡಸೌರ್ ನಲ್ಲಿ ಇದ್ದಕ್ಕಿದ್ದಂತೆಯೇ ಹೋರಾಟದ ಕಿಚ್ಚು ಹತ್ತಿಕೊಂಡಿತ್ತು. ಜೂನ್ 1 ರಿಂದಲೇ ಆರಂಭವಾಗಿರುವ ಈ ಹೋರಾಟ ದಿನೇ ದಿನೇ ಉಗ್ರರೂಪ ತಾಳುತ್ತಿದೆಯೇ ವಿನಃ, ತಹಬಂದಿಗೆ ಬರುವ ಲಕ್ಷಣಗಳು ಮಾತ್ರ ಗೋಚರವಾಗುತ್ತಿಲ್ಲ.

ಅಷ್ಟಕ್ಕೂ ಮಧ್ಯಪ್ರದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದೇಕೆ? ನೇಗಿಲ ಯೋಗಿ ಇದ್ದಕ್ಕಿದ್ದಂತೆ ಬೀದಿಗಳಿದು ಹೋರಾಟಕ್ಕಿಳಿಯುವುದಕ್ಕೆ ಕಾರಣವೇನು? ಸಾತ್ವಿಕ ಹೋರಾಟ ಹಿಂಸೆಯ ರೂಪ ಪಡೆದು, ಕೊನೆಗೆ ಐವರು ಅಮಾಯಕ ರೈತರ ಸಾವಿಗೆ ಕಾರಣವಾಗಿದ್ದೇಕೆ? ಅನ್ನದಾತನ ಹೋರಾಟಕ್ಕೆ ಸರ್ಕಾರ ಏನೆನ್ನುತ್ತದೆ? ಇಲ್ಲಿದೆ ಮಾಹಿತಿ.[ನಾನು ಸಾಲ ಮನ್ನಾ ಮಾಡುತ್ತೇನೆಂದು ಎಲ್ಲಿಯೂ ಹೇಳಿಲ್ಲ- ಸಿದ್ಧರಾಮಯ್ಯ]

ಹೋರಾಟ ಏಕೆ ?

ಹೋರಾಟ ಏಕೆ ?

ಬೆಂಬಲ ಹಿಂಪಡೆದ ಬಿಕೆಎಸ್

ಬೆಂಬಲ ಹಿಂಪಡೆದ ಬಿಕೆಎಸ್

ಎಗ್ಗಿಲ್ಲದೆ ನಡೆಯುತ್ತಿದೆ ರೈತರ ಆತ್ಮಹತ್ಯೆ

ಎಗ್ಗಿಲ್ಲದೆ ನಡೆಯುತ್ತಿದೆ ರೈತರ ಆತ್ಮಹತ್ಯೆ

ಮಧ್ಯಪ್ರದೇಶದಲ್ಲಿ ಕಳೆದ 16 ವರ್ಷಗಳಲ್ಲಿ 21000 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಸಮೀಕ್ಷೆಯೊಂದರ ವರದಿ. ಹಾಗೆಯೇ 2016-17 ನೇ ಸಾಲಿನಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಬರೋಬ್ಬರಿ 1982. ಇಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಕೂಗೂ ಕೇಳಿಬರುತ್ತಿದೆ.

ಮುಖ್ಯಮಂತ್ರಿ ಏನಂತಾರೆ?

ಮುಖ್ಯಮಂತ್ರಿ ಏನಂತಾರೆ?

ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಸಿದ್ಧವಿದೆ. ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಲ್ಲಿಯೂ ಸರ್ಕಾರ ಬದ್ಧವಾಗಿದೆ. ನಮ್ಮದು ಎಂದಿಗೂ ರೈತ ಪರ ಸರ್ಕಾರ. ರೈತರ ಹೋರಾಟ ಹಿಂಸೆಯ ರೂಪ ತಾಳಿರುವಲ್ಲಿ ವಿರೋಧ ಪಕ್ಷದ ಕೈವಾಡವಿದೆ ಎಂಬುದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನುಡಿ.

ಮುಂದುವರಿದ ಗಲಭೆ

ಮುಂದುವರಿದ ಗಲಭೆ

ಶಾಂತ ರೀತಿಯಲ್ಲಿ ಸಾಗುತ್ತಿದ್ದ ರೈತರ ಹೋರಾಟ ಇದ್ದಕ್ಕಿದ್ದಂತೆಯೇ ಹಿಂಸೆಯ ರೂಪ ತಾಳಿದ ಹಿನ್ನೆಲೆಯಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಬೇಕಾಯಿತು. ಇದರಿಂದಾಗಿ ಇದುವರೆಗೂ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಹಲವೆಡೆ ಕರ್ಫೂ ಸಹ ಜಾರಿಗೊಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+