ಹಣದುಬ್ಬರದ ಎರಡು ಅಲುಗಿನ ಕತ್ತಿಗೆ ಸಿಕ್ಕು ಅಧಿಕಾರ ಕಳ್ಕೊಂಡ ಬಿಜೆಪಿ
ಚಿಲ್ಲರೆ ಹಣದುಬ್ಬರ ದರದ ಮೇಲೆ ಆಧಾರವಾದ ಗ್ರಾಹಕ ದರ ಸೂಚ್ಯಂಕವು ಎಷ್ಟು ಮುಖ್ಯ ಎಂಬುದನ್ನು ಈ ಹಿಂದೆ ಹಲವು ಸಲ ವಿವರಿಸಲಾಗಿತ್ತು. ಹಾಗೇ ಇದೊಂದು ಬಗೆಯ ಎರಡು ಅಲುಗಿನ ಕತ್ತಿ ಅಂತಲೂ ತಿಳಿಸಲಾಗಿತ್ತು. ಅದೇ ಈಗ ಬಿಜೆಪಿಯ ಸೋಲಿಗೂ ಕಾರಣವಾಗಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
ಈ ಹಿಂದೆಲ್ಲ ಹಣದುಬ್ಬರ ವಿಪರೀತ ಹೆಚ್ಚಾಗಿ ಸರಕಾರಗಳು ಉದುರಿಹೋದ ಉದಾಹರಣೆಗಳಿವೆ. ಆದರೆ ಈ ಬಾರಿ ಕೇಂದ್ರ ಸರಕಾರದ ಸ್ಥಿತಿ ನೋಡಿ, ಗ್ರಾಮೀಣ ಭಾಗದ ಆದಾಯಕ್ಕೆ ಬೆಂಬಲ ನೀಡಲಾರದ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ (2.33%) ಕುಸಿದಿದ್ದರಿಂದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುವಂತಾಗಿದೆ.
ಹಣದುಬ್ಬರಕ್ಕೂ ಆಹಾರ ಧಾನ್ಯಗಳ ಬೆಲೆಗೂ ನೇರವಾದ ಸಂಬಂಧವಿದೆ. ಹಣದುಬ್ಬರ ಕಡಿಮೆ ಇದೆ ಅಂದರೆ ಆಹಾರ ಪದಾರ್ಥಗಳ ಬೆಲೆ ಕಡಿಮೆ ಇದೆ ಅಂತ ಅರ್ಥ. ಇದರಿಂದ ಗ್ರಾಹಕ ದರ ಸೂಚ್ಯಂಕವು ಕಡಿಮೆ ಆಗಿ, ಖರೀದಿದಾರರು ಸಂತೋಷದಿಂದ ಇರುತ್ತಾರೆ. ಆದರೆ ಬೆಳೆಗಾರರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗುತ್ತಾರೆ.

ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಸತತವಾಗಿ ಚಿಲ್ಲರೆ ಹಣದುಬ್ಬರ ಕಡಿಮೆ ಆಗಿತ್ತು. ಅದರಲ್ಲೂ ಆಹಾರ ಪದಾರ್ಥಗಳ ಬೆಲೆ ಕುಸಿದಿತ್ತು. ಇದರಿಂದ ಕೃಷಿ ಆದಾಯಕ್ಕೆ ಹೊಡೆತ ಬಿದ್ದು, ಗ್ರಾಮೀಣ ಭಾಗದ ಒತ್ತಡ ಬಿತ್ತು. ಇದರಿಂದ ಆಡಳಿತಾರೂಢ ಸರಕಾರದ ವಿರುದ್ಧ ಸಿಟ್ಟು ಕಾರಿಕೊಳ್ಳುವಂತಾಯಿತು. ನೆನಪಿಟ್ಟುಕೊಳ್ಳಿ, ಎಲ್ಲರಿಗೂ ಉದ್ಯೋಗ ಭರವಸೆ ನೀಡಿದ್ದ ಸರಕಾರ ಇದಾಗಿತ್ತು.
ಲೋಕಸಭೆ ಚುನಾವಣೆಗೆ ಇನ್ನು ಆರು ತಿಂಗಳು ಇರುವಾಗ ಈ ಸಮಸ್ಯೆಯನ್ನು ನಿವಾರಿಸುವ ಕಡೆಗೆ ಸರಕಾರ ತುರ್ತಾಗಿ ಗಮನ ಹರಿಸಬೇಕಿದೆ. ಚಿಲ್ಲರೆ ಹಣದುಬ್ಬರದ ಇಳಿಕೆಯಾದರೆ ಹಣಕಾಸು ನೀತಿಯ ಹೊಂದಾಣಿ ಮಾಡುವುದು ಆರ್ ಬಿಐಗೆ ಕಷ್ಟವಾಗಲಾರದು. ಆದರೆ ಅದೇ ಹಣದುಬ್ಬರ ಭಾರೀ ಏರಿಕೆಯಾದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕಷ್ಟವಾಗುತ್ತದೆ.
ಆ ಕಾರಣಕ್ಕೆ ರೈತರ ಆದಾಯದಲ್ಲಿ ಬಹಳ ಇಳಿಕೆ ಆಗಿದೆ. ಆದರೆ ಅವರು ಸಾಲ ತೆಗೆದುಕೊಳ್ಳುತ್ತಿದ್ದ ಬಡ್ಡಿ ದರದಲ್ಲಿ ಯಾವುದೇ ಇಳಿಕೆ ಆಗಿಲ್ಲ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications