ದುರ್ಗಕ್ಕೆ ಬಂತು ಮಳೆ
ಬೆಂಗಳೂರು : ಇವರು ಬರುತ್ತಾರೆ... ಬೇಗವಲ್ಲದಿದ್ದರೇನಾಯಿತು ? ನಿಧಾನವಾಗಿಯಾದರೂ...ಬಂದೇ ಬರುತ್ತಾರೆ. ಒಡಕು, ಬಿರುಕಗಳ ನೋವನ್ನೆಲ್ಲಾ ಅಳಿಸಲಿಕ್ಕೆಂದೇ ಬರುತ್ತಾರೆ. ಹಸಿರ ಹರಿಸಲಿಕ್ಕೆ ಉಸಿರಾಗಿ ಬರುತ್ತಾರೆ... ಅಂತೆಲ್ಲಾ ಆಸೆಯಿಟ್ಟುಕೊಂಡು ಮಳೆರಾಯರನ್ನು ಕಾಯುತ್ತಿದ್ದರು... ಚಿತ್ರದುರ್ಗದವರು.
ಅವರು ಬೇಗನೆ ಏನೂ ಬರಲಿಲ್ಲ . ತಡವಾಗಿಯೇ ಬಂದರು. ಸರಿ, ಬಂದರೆಂದು ಸಂಭ್ರಮಿಸುತ್ತಿರುವಾಗಲೇ ಕಳೆದ ಮೂರು ದಿನಗಳಲ್ಲಿ ಚಿತ್ರದುರ್ಗದವರ ಉಸಿರು ಕಟ್ಟಿ ಹೋಗುವಂತೆ ಧೋಗುಟ್ಟಿದ ಮಳೆರಾಯರು ತಾಳೆ, ಬಾಳೆ, ಬೆಳೆಕಳೆಗಳನ್ನು ಕೊಚ್ಚಿಕೊಂಡು ಹೋದರು. ಅಮೃತ ವಿಷವಾಗುವುದಿಲ್ಲ ಎಂದು ಎದೆ ತುಂಬ ನಿರೀಕ್ಷೆ ಇಟ್ಟುಕೊಂಡ ದುರ್ಗದವರು ರಕ್ಷಣೆ ಪಡೆಯಲೊಂದು ಕೋಟೆಯಿಲ್ಲದೆ ತೊಯ್ದು ನಡುಗುತ್ತಿದ್ದಾರೆ. ಕುರುಮರಡಿಕೆರೆ, ಕಾತ್ರಾಳು, ಓಬೇನ ಹಳ್ಳಿಗಳಲ್ಲಿದ್ದ ಕೆರೆಗಳು ಎಲ್ಲಿವೆ ಎಂದು ಪತ್ತೆ ಹಚ್ಚಲಾಗದಷ್ಟು , ಊರು ತುಂಬಾ ನೀರು ಹರಿಯುತ್ತಿದೆ. ತಾಳವಟ್ಟಿಕೆರೆ ಒಂದೇ ದಿನದ ಮಳೆಗೆ ತುಂಬಿ, ಉಕ್ಕಿ ಹರಿಯುತ್ತಿದೆ. ಎಂದರೆ ಬಂದ ಮಳೆಯ ಪ್ರಮಾಣವನ್ನು ನೀವೇ ಲೆಕ್ಕ ಹಾಕಿ. ಮುಗಿಲು ಮಟ್ಟುವ ಅಡಿಕೆ ಮರಗಳ ಬುಡದಲ್ಲಿ ತ್ರಾಣಕುಂದಿದೆ. ಬಡಿಯುತ್ತಿರುವ ಮಳೆರಾಯರ ತಡೆದುಕೊಳ್ಳಲಾಗದೆ ನೆಲಕಚ್ಚುತ್ತಿವೆ.
ಬರಗಾಲ ಬಡಿದವರು ಎಂಬ ಹಣೆ ಪಟ್ಟಿಯನ್ನು ದುರ್ಗಕ್ಕೆ ಹಚ್ಚಲು ಬಿಡದೆ ಬಂದ ಮಳೆರಾಯರತ್ತ ಕೃತಜ್ಞತೆಯಿಂದ, ಕಣ್ತುಂಬಿ ನೋಡುತ್ತಲೇ ದುರ್ಗದವರು ಗದ್ದೆ, ಹೊಲಗಳನ್ನು ಉತ್ತು ಬಿತ್ತಿ ಮನೆ ಸೇರಿಕೊಂಡರು. ಎರಡು 'ಬಿದೆ ನೀರು" ಇಳಿದು ಹೋಗುವ ಮುಂಚೆ ಮಳೆ ರಾಯರು ಎಲ್ಲ ಬೋಳಿಸಿಕೊಂಡು ಹೋದರು. ದೈವವಾಗಿ ಬರುತ್ತಾರೆಂದು ನಂಬಿದವರು ಮೋಸ ಹೋದರು. ಜಿಲ್ಲೆಯಲ್ಲಿಯೇ 50 ಲಕ್ಷ ರೂಪಾಯಿ ಬೆಳೆಯ ಅವಶೇಷವೂ ಕಾಣುವುದಿಲ್ಲ. ಚಿತ್ರದುರ್ಗದಲ್ಲಿ ನಡೆದ ಮಳೆರಾಯರ ರಂಪಾಟಕ್ಕೆ ಎಲ್ಲರೂ ತತ್ತರಿಸಿದ್ದಾರೆ.
ಗುಲ್ಬರ್ಗಾ, ಗುಬ್ಬಿ, ಬಳ್ಳಾರಿಯಲ್ಲಿ 3ರಿಂದ 4 ಸೆಂಟಿ ಮೀಟರ್ ಮಳೆಯಾಗಿದೆ. ಕರಾವಳಿಯವರು ಮಳೆಗೆ ಕಾಯುತ್ತಿದ್ದಾರೆ, ಇಂದು ನಾಳೆಯಲ್ಲಿ ಮಳೆ ಬರಬಹುದು ಎಂದು ಹವಾಮಾನ ಇಲಾಖೆಯವರು ಹೇಳುತ್ತಾರೆ. ಬೆಂಗಳೂರಿನಲ್ಲಿ ಬೆಳಗಿನಿಂದ ಸಂಜೆಯವರೆಗೂ ಮುಸ್ಸಂಜೆಯ ವಾತಾವರಣ .
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications