ಸಾವಿನ ಮನೆಯಲ್ಲೂ ಲಂಚಾವತಾರ, ಇದೆಂಥ ವಿಪರ್ಯಾಸ!

ರೈತನ ಸಾವಿನಿಂದ ಇಡೀ ಕುಟುಂಬವೂ ಕಂಗೆಟ್ಟಿದ್ದರೆ ಆತನ ಶವ ಸಾಗಿಸುವುದಕ್ಕೆ ಸಾವಿನ ಮನೆಯಲ್ಲೇ ಪಿ ಎಸ್ ಐ ಲಂಚ ಕೇಳಿರುವುದು ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ವಿಜಯಪುರ, ಏಪ್ರಿಲ್ 11: ಸಾಲ ಬಾಧೆ ತಾಳಲಾರದೆ ಇಂದು ಆತ್ಮಹತ್ಯೆ ಮಾಡಿಕೊಂಡ ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಚಟ್ಟರಕಿ ಗ್ರಾಮದ ರೈತ ಸಂತೋಷ್ ಕುಲಕರ್ಣಿ(43) ಅವರ ಕಳೇಬರ ಸಾಗಿಸುವುದಕ್ಕೆ ಪಿ ಎಸ್ ಐ ಲಂಚಕೇಳಿದ ಘಟನೆ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ.

ರೈತನ ಸಾವಿನಿಂದಾಗಿ ಇಡೀ ಕುಟುಂಬವೂ ಕಂಗೆಟ್ಟು, ಶೋಕ ಸಾಗರದಲ್ಲಿ ಮುಳುಗಿದ್ದರೆ, ದೇವರಹಿಪ್ಪರಗಿ ಠಾಣೆಯ ಪಿ ಎಸ್ ಐ ಕೆ.ಪಡೇಕನೂರ್ ಮೃತರ ಶವ ಸಾಗಿಸುವುದಕ್ಕೆ ಮತ್ತು ಶವದ ಮರಣೋತ್ತರ ಪರೀಕ್ಷೆಗೆ ಲಂಚ ನೀಡುವಂತೆ ಕುಟುಂಬಸ್ಥರನ್ನು ಕೇಳಿದ್ದಾರೆ![ವಿಜಯಪುರದಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ]

PSI in Vijayapura demands money to shift deadbody of a farmer

ಈ ಮೂಲಕ ಲಂಚಾವತಾರಕ್ಕೆ ಸಾವಿನ ಮನೆಯೆಂಬ ಭೇದವೇನಿಲ್ಲ ಎಂಬುದನ್ನು ಈ ಪೊಲೀಸ್ ಅಧಿಕಾರಿ ತೋರಿಸಿಕೊಟ್ಟಿದ್ದಾರೆ!

ಬೆಳೆ ಹಾನಿ ಮತ್ತು ಸಾಲಭಾದೆಯಿಂದ ಕಂಗೆಟ್ಟಿದ್ದ ಸಂತೋಷ್ ಕುಲಕರ್ಣಿ 'ನನ್ನ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ' ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+