ಸಾಮಾಜಿಕ ಆರ್ಥಿಕ ಸ್ಥಿತಿ ಮೇಲೆ ಕೃಷಿ ಸಾಲ ಮನ್ನಾ ಪರಿಣಾಮ: ಉಪನ್ಯಾಸ
ಬೆಂಗಳೂರು, ಜೂನ್ 8: ರಾಜ್ಯಗಳಂತೆ ಕರ್ನಾಟಕದ ರೈತರು ಕೂಡ ಸಮಸ್ಯೆಯ ಸುಳಿಯಲ್ಲಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಆಗಾಗ ಚರ್ಚೆಗೆ ಬರುತ್ತಿರುವ ವಿಷಯ ಸಾಲಮನ್ನಾ, ಇದು ನಿಜಕ್ಕೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡುವುದೇ ಎನ್ನುವುದರ ಕುರಿತು ಒಂದು ಚರ್ಚೆ ಬೆಂಗಳೂರಿನಲ್ಲಿ ನಡೆಯಲಿದೆ.
ಈ ಸಾಲಮನ್ನಾ ವಿಚಾರ ಕುರಿತು ಲೇಖಕ ವಸಂತ ಶೆಟ್ಟಿ ಅವರ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ಒಂದು ಚರ್ಚೆಯನ್ನು ಜೂನ್ 17ರಂದು ಭಾನುವಾರ ಬೆಳಗ್ಗೆ 11.30ಕ್ಕೆ ಆಯೋಜಿದೆ, ಐಐಎಂ ಪ್ರಾಧ್ಯಾಪಕರಾದ ಎಂ.ಎಸ್. ಶ್ರೀರಾಮ್ ಅವರು ಈ ಕುರಿತು ಮಾತನಾಡಲಿದ್ದಾರೆ.

ಭಾರತದ ಎಲ್ಲ ದೇಶದಲ್ಲಿ ರೈತರ ಜೀವನ ಅತಂತ್ರ ಸ್ಥಿತಿಯಲ್ಲಿದೆ, ಕೃಷಿಗಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಎಷ್ಟೋ ಘಟನೆಗಳನ್ನು ದಿನನಿತ್ಯ ನೋಡುತ್ತಿದ್ದೇವೆ. ರೈತರ ಸಾಲ ಮನ್ನಾ ಕುರಿತು ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡ ಈ ಕುರಿತು ಭರವಸೆ ನೀಡಿದ್ದಾರೆ.












Click it and Unblock the Notifications