Arecanut & Copra Price: ಕೊಬ್ಬರಿ ಬೆಲೆ ₹18,000; ಅಡಿಕೆ ಬೆಲೆ ಕೂಡ ಏರಿಕೆ
ಹಲವು ತಿಂಗಳ ಕಾಯುವಿಕೆ ನಂತರ ಕೊಬ್ಬರಿ ಬೆಳೆಗಾರರಲ್ಲಿ ಸಂತಸ ಮೂಡಿದೆ. ಅಕ್ಟೋಬರ್ ತಿಂಗಳ ಆರಂಭದಲ್ಲೇ ಕೊಬ್ಬರಿ ಬೆಲೆಯಲ್ಲಿ ವರ್ಷದ ಹೊಸ ದಾಖಲೆ ಬರೆದಿದೆ. 16000-17000 ದಲ್ಲಿ ಮಾರಾಟವಾಗುತ್ತಿದ್ದ ಕೊಬ್ಬರಿ ಬೆಲೆ ಗುರುವಾರ 18,000 ರೂಪಾಯಿಗೆ ಏರಿಕೆಯಾಗಿದ್ದು, ತೆಂಗು ಬೆಳೆಗಾರರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.
ತೆಂಗು ಬೆಳೆಗೆ ಹಲವು ರೋಗಗಳು, ನೀರಾವರಿ ಕೊರತೆ ನಡುವೆಯೂ ರೈತರು ತೆಂಗಿನ ತೋಟಗಳನ್ನು ಕಾಪಾಡಿಕೊಂಡಿದ್ದರು. ಆದರೆ ಕೊಬ್ಬರಿಗೆ ಸೂಕ್ತ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುವ ಆತಂಕವಿತ್ತು. ಆದರೆ ಕೆಲವು ದಿನಗಳಿಂದ ಕೊಬ್ಬರಿ ಬೆಲೆ ಏಕಾಏಕಿ ಏರಿಕೆಯಾಗುತ್ತಿದೆ.

ಗುರುವಾರ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಕನಿಷ್ಠ 16,500 ರೂಪಾಯಿ ಇದ್ದರೆ, ಗರಿಷ್ಠ 18,000 ರೂಪಾಯಿಗೆ ಮಾರಾಟವಾಗಿದ್ದು ಈ ವರ್ಷದಲ್ಲಿ ಮತ್ತೊಂದು ದಾಖಲೆ ಮಾಡಿದೆ. ಹುಳಿಯಾರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕನಿಷ್ಠ 15,950 ರೂಪಾಯಿ ಇದ್ದರೆ ಗರಿಷ್ಠ 16,200 ರೂಪಾಯಿಗೆ ಏರಿಕೆಯಾಗಿದೆ.
ಕೊಬ್ಬರಿ ಮಾತ್ರವಲ್ಲದೆ ಎಳನೀರು ಮತ್ತು ತೆಂಗಿನ ಕಾಯಿಗೂ ಬಂಪರ್ ಬೆಲೆ ಬಂದಿದೆ. ಸದ್ಯ ಎಳನೀರು ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ 45-55 ರೂಪಾಯಿಗಳಷ್ಟಿದೆ. ತೆಂಗಿನ ಕಾಯಿ ಬೆಲೆ ಕೂಡ ದಿನೇ ದಿನೇ ಏರಿಕೆಯಾಗುತ್ತಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ 25-30 ರೂಪಾಯಿಯಂತೆ ಮಾರಾಟವಾಗುತ್ತಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬಂಟ್ವಾಳ | ಕೋಕಾ | ₹19,000 | ₹28,500 | ₹25,000 |
| 2 | ಬಂಟ್ವಾಳ | ಹೊಸ ವೆರೈಟಿ | ₹30,500 | ₹31,500 | ₹31,000 |
| 3 | ಚಿತ್ರದುರ್ಗ | ಅಪಿ | ₹48,619 | ₹49,059 | ₹48,849 |
| 4 | ಚಿತ್ರದುರ್ಗ | ಬೆಟ್ಟೆ | ₹32,629 | ₹33,079 | ₹32,899 |
| 5 | ಚಿತ್ರದುರ್ಗ | ರಾಶಿ | ₹48,139 | ₹48,569 | ₹48,389 |
| 6 | ಕುಮಟಾ | ಚಿಪ್ಪು | ₹18,209 | ₹26,969 | ₹24,629 |
| 7 | ಕುಮಟಾ | ಕೋಕಾ | ₹5,500 | ₹24,769 | ₹21,869 |
| 8 | ಮಡಿಕೇರಿ | ಕಚ್ಚಾ | ₹38,006 | ₹38,773 | ₹38,281 |
| 9 | ಸಾಗರ | ಚಾಲಿ | ₹29,509 | ₹32,900 | ₹31,899 |
| 10 | ಸಾಗರ | ರಾಶಿ | ₹35,299 | ₹48,509 | ₹47,199 |
| 11 | ಸಾಗರ | ಸಿಪ್ಪೆಗೋಟು | ₹15,509 | ₹16,725 | ₹15,509 |
| 12 | ಸಾಗರ | ಬಿಳೆ ಗೊಟು | ₹21,589 | ₹24,700 | ₹21,589 |
| 13 | ಶಿವಮೊಗ್ಗ | ಬೆಟ್ಟೆ | ₹41,599 | ₹54,699 | ₹53,199 |
| 14 | ಶಿವಮೊಗ್ಗ | ರಾಶಿ | ₹30,009 | ₹49,009 | ₹48,169 |
| 15 | ಶಿವಮೊಗ್ಗ | ಸರಕು | ₹52,069 | ₹74,550 | ₹62,129 |
| 16 | ಸಿದ್ದಾಪುರ | ಬಿಳೆ ಗೊಟು | ₹24,899 | ₹28,599 | ₹26,899 |
| 17 | ಸಿದ್ದಾಪುರ | ಕೋಕಾ | ₹20,099 | ₹25,699 | ₹23,699 |
| 18 | ಸಿದ್ದಾಪುರ | ಕೆಂಪು ಗೋಟು | ₹22,489 | ₹22,489 | ₹22,489 |
| 19 | ಸಿದ್ದಾಪುರ | ರಾಶಿ | ₹41,099 | ₹45,899 | ₹45,399 |
| 20 | ಶಿರಸಿ | ರಾಶಿ | ₹40,299 | ₹44,249 | ₹41,833 |
| 21 | ಯಲ್ಲಾಪುರ | ರಾಶಿ | ₹39,169 | ₹54,699 | ₹47,699 |
ಅಡಿಕೆ ಬೆಲೆ ಎಷ್ಟಿದೆ?
ಅಡಿಕೆ ಬೆಲೆ ಸದ್ಯ ಏರಿಳಿತ ಕಾಣುತ್ತಿದೆ, ಕೆಲವು ದಿನಗಳ ಹಿಂದೆ ಕುಸಿತ ಕಂಡಿದ್ದ ಅಡಿಕೆ ಬೆಲೆ ಸದ್ಯ ನಿಧಾನವಾಗಿ ಹೆಚ್ಚಾಗುತ್ತಿದೆ. ಅಡಿಕೆ ಬೆಲೆ ತೀವ್ರವಾಗಿ ಕುಸಿತ ಕಾಣುತ್ತದೆ ಎಂದು ಕಂಗಾಲಾಗಿದ್ದ ರೈತರಿಗೆ ಸದ್ಯ ಬೆಲೆ ಹೆಚ್ಚಳವಾಗುತ್ತಿರುವುದು ಅಲ್ಪ ಸಮಾಧಾನ ಕೊಟ್ಟಿದೆ.
ಗುರುವಾರ ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಅಡಿಕೆ ಬೆಲೆ ಕನಿಷ್ಠ 48,139 ರೂಪಾಯಿ ಇದ್ದರೆ ಗರಿಷ್ಠ ಬೆಲೆ 49,059 ರೂಪಾಯಿ ಆಗಿದ್ದು 50,000 ರೂಪಾಯಿ ದಾಟುವ ನಿರೀಕ್ಷೆಯಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ 35,299 ರೂಪಾಯಿ ಇದ್ದರೆ ಗರಿಷ್ಠ 48,509 ರೂಪಾಯಿಗೆ ಮಾರಾಟವಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ದಾವಣಗೆರೆ | ಕೊಬ್ಬರಿ | ₹9,450 | ₹9,450 | ₹9,450 |
| 2 | ತಿಪಟೂರು | ಕೊಬ್ಬರಿ | ₹16,500 | ₹18,000 | ₹16,500 |
| 3 | ತುರುವೇಕೆರೆ | ಕೊಬ್ಬರಿ | ₹16,000 | ₹16,500 | ₹16,000 |
| 4 | ಚನ್ನರಾಯಪಟ್ಟಣ | ಸಣ್ಣ | ₹9,000 | ₹9,000 | ₹9,000 |
| 5 | ನಾಗಮಂಗಲ | ಸಣ್ಣ | ₹12,000 | ₹14,000 | ₹12,000 |
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications