ಮಗನ ಮೇಲೆ ಆಣೆ ಮಾಡಿ ರೈತರಲ್ಲಿ ಭರವಸೆ ಮೂಡಿಸಿದ ಕುಮಾರಸ್ವಾಮಿ
ಬಾಗಲಕೋಟೆ, ಡಿಸೆಂಬರ್ 28: ಇರುವ ಒಬ್ಬ ಮಗನ ಮೇಲೆ ಆಣೆ ಮಾಡಿ ಹೇಳುತ್ತೇನೆ ಸಾಲಮನ್ನಾ ಮಾಡಿಯೇ ತೀರುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಕಲಾಭವನದಲ್ಲಿ ರೈತರಿಗೆ ಋಣಮುಕ್ತ ಪತ್ರ ವಿತರಿಸಿ ಮಾತನಾಡಿದ ಅವರು, ಸಾಲಮನ್ನಾ ಮಾಡುವ ವಿಷಯದಲ್ಲಿ ಯಾರಿಗೂ ಮೋಸ ಮಾಡುವುದಿಲ್ಲ ಎಂದು ಅವರು ಹೇಳಿದರು.
ಸರ್ಕಾರ ನಡೆಸುವ ಶಕ್ತಿಯನ್ನು ನೀವು ಕೊಟ್ಟಿದ್ದೀರಿ, ಅದೇ ಶಕ್ತಿಯನ್ನು ನಾನು ನಿಮಗೆ ಪುನಃ ಧಾರೆ ಎರೆಯುತ್ತೇನೆ ಎಂದರು. ಮಗನ ಮೇಲೆ ಆಣೆ ಇರಿಸಿದ ಕುಮಾರಸ್ವಾಮಿ, ಸಾಲಮನ್ನಾ ಮಾಡುವುದು ಪಕ್ಕಾ ಎಂದರು.

ಇತ್ತೀಚೆಗೆ ಮುಗಿದ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯು ಸಾಲಮನ್ನಾ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಾರಣ ಕುಮಾರಸ್ವಾಮಿ ಅವರು, ಸಾಲಮನ್ನಾ ಮಾಡುವುದು ಪಕ್ಕಾ ಎಂದು ಪದೇ-ಪದೇ ಹೇಳುತ್ತಿದ್ದಾರೆ.












Click it and Unblock the Notifications