ರೈತರಿಗೆ ಕೃಷಿ ಸೌಕರ್ಯ ನೀಡುತ್ತಿರುವ 'ಸಿಂಗಲ್ ವಿಂಡೋ ರಿಜಿಸ್ಟ್ರೇಷನ್' ಸಾಫ್ಟ್ವೇರ್
ಬೆಂಗಳೂರು ಜೂ.15: ಸರ್ಕಾರಿ ಸೌಲಭ್ಯಗಳನ್ನು ನಾಡಿನ ಜನರಿಗೆ ತ್ವರಿತಗತಿಯಲ್ಲಿ ತಲುಪಿಸುವ ಸಲುವಾಗಿ ರಾಜ್ಯ ಸರ್ಕಾರ ಬದಲಾದ ಕಾಲಘಟ್ಟದಲ್ಲಿ ಡಿಜಿಟಲ್ ವ್ಯವಸ್ಥೆಗೆ ಹೆಚ್ಚು ಆದ್ಯತೆ ಕೊಡುತ್ತಿದೆ. ಕೃಷಿ ಕ್ಷೇತ್ರದ ಹತ್ತಾರು ಯೋಜನೆಗಳು ರೈತರಿಗೆ ತಲುಪಿಸಲು ಆಧಾರ್ ಸಂಖ್ಯೆ ಆಧಾರಿತವಾದ 'ಸಿಂಗಲ್ ವಿಂಡೋ ರಿಜಿಸ್ಟ್ರೇಷನ್' ಎಂಬ ಸಾಫ್ಟ್ವೇರ್ ಅನ್ನು ಕೃಷಿ ಇಲಾಖೆ ಇತ್ತೀಚೆಗೆ ಲೋಕಾರ್ಪಣೆಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಸರ್ಕಾರ, ಅನೇಕ ಭೂರಹಿತ ರೈತರು ಅಂದರೆ ಕೋಳಿ ಸಾಕಾಣಿಕೆ, ಹೈನುಗಾರಿಕೆ ಯಂತಹ ಕೃಷಿಕರು ಡಿಜಿಟಲ್ ವೇದಿಕೆಗಳತ್ತ ಮುಖ ಮಾಡಿದ್ದಾರೆ. ಕೃಷಿ ಇಲಾಖೆ ಅಥವಾ ಸಂಬಂಧಿಸಿದ ಕೆಲವು ಸಂಘ ಸಂಸ್ಥೆಗಳಿಗೆ ಆನ್ ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕ ಹಾಲು ಉತ್ಪಾದಕರ ಸಂಘ (ಕೆಎಂಎಫ್) ಪ್ರತಿ ಲೀಟರ್ ಹಾಲಿಗೆ 4ರೂ. ಸಹಾಯಧನ ನೀಡುವ ಮೂಲಕ ರೈತರಿಗೆ ನೆರವಾಗಿದೆ ಎಂದು ತಿಳಿಸಿದೆ.
ಅರ್ಹರಿಗೆ ವಿವಿಧ ಯೋಜನೆಗಳ ಲಾಭ ತಲುಪಿಸಬಹುದು
ರೈತರು ಸರ್ಕಾರದ ಯಾವ ಯಾವ ಯೋಜನೆಗಳ ಲಾಭ ಪಡೆದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಹೀಗಾಗಿ ಆಧಾರ್ ಸಂಖ್ಯೆ ನೀಡಿ ಸರಳವಾಗಿ ನೋಂದಣಿಯಾಗುವಂತೆ ರೂಪಿಸಲಾದ ಸಾಪ್ಟ್ ವೇರ್ ಗೆ ಈಗಾಗಲೇ ಚಾಲನೆ ದೊರೆತಿದೆ. ಇದರಿಂದ ರೈತರಿಗೆ ಕೃಷಿ ಇಲಾಖೆ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಆಹಾರ ಸರಬರಾಜು, ಹೈನುಗಾರಿಕೆ, ರೇಷ್ಮೆ ಕೃಷಿ ಸೇರಿದಂತೆ ಹಲವಾರು ಯೋಜನೆಗಳು ಸರ್ಕಾರದ ಈ ಸಾಪ್ಟವೇರ್ ಯೋಜನೆ ವ್ಯಾಪ್ತಿಗೆ ಒಳಪಡುತ್ತವೆ. ಅರ್ಹರಿಗೆ ಯೋಜನೆಗಳ ಲಾಭ ತಲುಪಿರುವ ಬಗ್ಗೆ ಈ ಸಾಪ್ಟವೇರ್ ನಿಂದ ಮಾಹಿತಿ ಸಿಗಲಿದೆ.

'ಒನ್ ವಿಂಡೋ ರಿಜಿಸ್ಟ್ರೇಷನ್' ಪ್ರಯೋಜನ ಹೇಗೆ?:
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ತೋಟಗಾರಿಕೆ ಜಂಟಿ ನಿರ್ದೇಶಕ ಶಕೀಲ್ ಅಹ್ಮದ್ ಅವರು, ಒನ್ ವಿಂಡೋ ಸಾಫ್ಟ ವೇರ್ ಮೂಲಕ ತೋಟಗಾರಿಕಾ ಬೆಳೆಯಾದ ಹಣ್ಣುಗಳಿಗೆ ಇಲ್ಲವೇ ಅವುಗಳ ಪ್ರಕಾರಗಳಿಗೆ ಸಿಂಗಲ್ ಡಿಜಿಟ್ ರೂಪದಲ್ಲಿ ಗುರುತಿಸಬಹುದು. ತೋಟಗಾರಿಕೆ ಯೋಜನೆಗಳ ಲಾಭವನ್ನು ಪಿಎಂ ಕಿಸಾನ್ ಯೋಜನೆಯಡಿ ನೇರವಾಗಿ ರೈತರಿಗೆ ತಲಪಿಸಬಹುದು.
ಕನಿಷ್ಠ ಬೆಂಬಲ ಬೆಲೆ ಪಾವಿತಿಸುವಿಕೆ, ವಿಶೇಷ ಆರ್ಥಿಕ ನೆರವು, ಜಾತಿ ಪ್ರಮಾಣಪತ್ರ ದೃಢೀಕರಣ, ಪಡೀತರ ಚೀಟಿ ಯೋಜನೆಗಳಿಗೆ ಲಭ್ಯವಾಗುವ ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ತಲುಪಿಸಲು ಸಾಫ್ಟವೇರ್ ಸಹಕಾರಿಯಾಗುತ್ತದೆ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಕೂಡ ಇದರಲ್ಲೇ ಮಾಹಿತಿ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಉದ್ದೇಶಿತ ಯೋಜನೆಯ ಕೆಲವು ಅಂಶಗಳು ಹೀಗಿವೆ...
1. ತೋಟಗಾರಿಕೆ ಬೆಳೆಯ ದತ್ತಾಂಶ, ಇಳುವರಿ ಕುರಿತು ಹಾಗೂ ಮಳೆಗಾಲ, ಬೇಸಿಗೆ ಮತ್ತು ಚಳಿಗಾಲಕ್ಕೆ ತಕ್ಕಂತೆ ವಸ್ತುಸ್ಥಿತಿಗಳನ್ನು ಮೊಬೈಲ್ ಅಪ್ಲಿಕೇಷನ್ ಮೂಲಕ ತಲುಪಿಸಲು ಇದು ನೆರವಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2. ರಾಜ್ಯದಲ್ಲಿ ಕೃಷಿ ಸಂಬಂಧಿ ಮೊಬೈಲ್ ಅಪ್ಲಿಕೇಷನ್ ಬಳಸುವಲ್ಲಿ ತರಬೇತಿ ಪಡೆದ ಸ್ಥಳಿಯ ಯುವ ಸಮೂಹಗಳನ್ನು ಗುರುತಿಸಿ 2.1 ಕೋಟಿ ಪ್ಲಾಟ್ ಗಳನ್ನಾಗಿ ಮಾಡಲಾಗಿದೆ. ಇದು ಸರಳ ದತ್ತಾಂಶ ಸಂಗ್ರಹಣೆ ಸಾಧ್ಯವಾಗಿಸುತ್ತದೆ.

3. ರಾಗಿ, ಭತ್ತ, ಕಡಲೆ, ಜೋಳ, ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಉತ್ಪಾದನೆ ವಾರ್ಷಿಕ ಮತ್ತು ವಲಯವಾರು ಪ್ರಮಾಣ, ಮೌಲ್ಯಮಾಪನ ಮಾಡಬಹುದು.
4. ಅತೀವೃಷ್ಟಿ, ಬರಗಾಲದಂತ ಸನ್ನಿವೇಶದಲ್ಲಿ ಬೆಳೆಗಳ ಮೌಲ್ಯಮಾಪ, ಬೆಳೆ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವಲ್ಲಿ ಸಾಫ್ಟವೇರ್ ಮಹತ್ವ ಪಾತ್ರ ವಹಿಸುತ್ತದೆ.
5. ತೋಟಗಾರಿಕೆ ಇಲಾಖೆ, ಕೃಷಿ ಇನ್ನಿತರ ಎಲ್ಲ ಇಲಾಖೆಗಳ ಯೋಜನೆ ಪಡೆಯಲು ಆಯಾ ಇಲಾಖೆಗಳ ಸಾಫ್ಟವೇರ್ ಇಲ್ಲವೇ ಮೊಬೈಲ್ ಅಪ್ಲಕೇಷನ್ ಗಳಲ್ಲಿ ನೋಂದಣಿ ಆಗಬೇಕಿತ್ತು. ಪ್ರಸ್ತುತ ಈ ಒನ್ ವಿಂಡೋ ಸಾಫ್ಟವೇರ್ ಬಹುನೋಂದಣಿ ತಪ್ಪಿಸಿ ರೈತರಿಗೆ ಒಂದರಲ್ಲಿ ಸಾಕಷ್ಟು ಮಾಹಿತಿ ನೀಡಲಿದೆ.
6. ತೋಟಗಾರಿಕೆ ವ್ಯಾಪ್ತಿಯಲ್ಲಿ ಹಣ್ಣುಗಳನ್ನು ಬೆಳೆಯುವ ರೈತರು 7.8 ದಶಲಕ್ಷಕ್ಕೂ ಅಧಿಕ ಮಂದಿ ಸಾಫ್ಟವೇರ್ ನೋಂದಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
7. ಈ ಸಾಫ್ಟವೇರ್ ಅನ್ನು ರಾಜ್ಯದ ನ್ಯಾಷನಲ್ ಇನ್ ಫ್ಯಾರ್ಮೆಟಿಕ್ ಸೆಂಟರ್ ಘಟಕ ಅಭಿವೃದ್ಧಿಪಡಿಸಿದ್ದು, ಬೆಳೆ ಸಮೀಕ್ಷೆ ಅಪ್ಲಿಕೇಷನ್ ಅನ್ನು ರಾಜ್ಯ ಎಲೆಕ್ಟ್ರನಿಕ್ಸ್ ಡೆವಲಪ್ ಮೆಂಟ್ ಕಾರ್ಪೋರೇಷನ್ ಸಿದ್ಧಪಡಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಜತೆ ಸಂಯೋಜಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)
-
Tamarind Farming: ಹುಣಸೆ ಕೃಷಿಯಲ್ಲಿ ಹೊಸ ಕ್ರಾಂತಿ: ಟ್ರ್ಯಾಕ್ಟರ್ ಸಹಾಯದಿಂದ ಯಂತ್ರ ತಯಾರಿಸಿದ ರೈತ ಚಂದ್ರಶೇಖರ, ವಿಡಿಯೋ -
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ










Click it and Unblock the Notifications