ಇಂದು ದೆಹಲಿಯಲ್ಲಿ ವಿವಿಧ ರಾಜ್ಯಗಳ ರೈತ ಸಂಘಗಳ ಬೃಹತ್ ಪ್ರತಿಭಟನೆ
ನವದೆಹಲಿ, ಸೆಪ್ಟೆಂಬರ್ 05: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶದ ಬೇರೆ ಬೇರೆ ರಾಜ್ಯದ ರೈತರು ಮತ್ತು ಕಾರ್ಮಿಕರು ದೆಹಲಿಗೆ ತೆರಳಿ ಇಂದು(ಸೆ.05) ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಅಖಿಲ ಭಾರತ ಕಿಸಾನ್ ಸಭಾ(AIKS), ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ(AIAWU), ಭಾರತೀಯ ಟ್ರೇಡ್ ಯೂನಿಯನ್ ಕೇಂದ್ರ(CITU)ಗಳು ಸೇರಿ 'ಮಜ್ದೂರ್ ಕಿಸಾನ್ ಸಂಘರ್ಷ rally' ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಒಟ್ಟು 15 ಬೇಡಿಕೆಗಳನ್ನು ಸಂಘಟನೆಗಳು ಸರ್ಕಾರದ ಮುದ್ದಿಟ್ಟಿದ್ದು, ಅವುಗಳಲ್ಲಿ ಪ್ರಮುಖವಾಗಿ ಸಾಲಮನ್ನಾ, ಭೂರಹಿತರಿಗೆ ಭೂಮಿ, ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸುವುದು, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವುದು, ಬೆಂಬಲ ಬೆಲೆ ನೀಡುವುದು ಇತ್ಯಾದಿಗಳು ಸೇರಿವೆ.

ಈ ಪ್ರತಿಭಟನೆಯಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು, ಕೂಲಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ.












Click it and Unblock the Notifications