Get Updates
Get notified of breaking news, exclusive insights, and must-see stories!

ಉದ್ಘಾಟನೆಗೂ ಮೊದಲೇ ಕೊಚ್ಚಿ ಹೋದ ಬ್ರಿಡ್ಜ್ ಕಂ ಬಾಂದಾರ್

ಬೆಳಗಾವಿ, ಜೂನ್.12: ಜಿಲ್ಲೆಯಲ್ಲಿ ಮುಂದುವರಿದ ಮಳೆರಾಯನ ಆರ್ಭಟಕ್ಕೆ ಉದ್ಘಾಟನೆಗೂ ಮೊದಲೇ ಬ್ರಿಡ್ಜ್ ಕಂ ಬಾಂದಾರ್ ಕೊಚ್ಚಿ ಹೋಗಿದೆ.

ಸಂಗೊಳ್ಳಿ ಮತ್ತು ಬೇವಿನಕೊಪ್ಪ ಗ್ರಾಮಗಳ ನಡುವೆ ಇದ್ದ ಬ್ರಿಡ್ಜ್ ಕಂ ಬಾಂದಾರ್ ಮಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಇದನ್ನು ಮಲಪ್ರಭಾ ನದಿಯ ನೀರು ಶೇಖರಣೆಗೆ ಕಟ್ಟಿಸಲಾಗಿತ್ತು.

ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಿಡ್ಜ್ ಕಮ್ ಬಾಂದಾರ್ ಇದೀಗ ನಿರ್ಮಾಣ ಹಂತದಲ್ಲಿರುವಾಗಲೇ ಕೊಚ್ಚಿಹೋಗಿದೆ. ಕಳೆದ 5 ತಿಂಗಳ ಹಿಂದೆಯಷ್ಟೇ ಇದನ್ನು ನಿರ್ಮಿಸಲಾಗಿತ್ತು.

Bridge Cum Bandar floated by the continuous rain in belgaum

ಇನ್ನು ನಿರ್ಮಾಣ ಹಂತದಲ್ಲಿಯೇ ಇದ್ದ ಬ್ರಿಡ್ಜ್ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವುದನ್ನು ಕಂಡು ಸ್ಥಳೀಯರು ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

Bridge Cum Bandar floated by the continuous rain in belgaum

ರಾಜ್ಯದೆಲ್ಲೆಡೆ ವರುಣನ ಆರ್ಭಟ ಹೆಚ್ಚಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಇತ್ತ ಮಲೆನಾಡು, ಕರಾವಳಿಯ ಕೆಲವು ಭಾಗಗಳಲ್ಲಿ ಗುಡ್ಡಗಳು ಕುಸಿಯುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಇದೆಲ್ಲದರ ನಡುವೆ ಮುಂಗಾರು ಮಳೆ ರೈತನ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+