ಸಾವಿರಾರು ರೈತರ ಕೋಟ್ಯಂತರ ಸಾಲ ತೀರಿಸಿದ ಅಮಿತಾಬ್ ಬಚ್ಚನ್
Recommended Video

ಮುಂಬೈ, ನವೆಂಬರ್ 21: ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ನಿಜ ಜೀವನದಲ್ಲೂ ನಾಯಕರಾಗಿ ಮೆರೆದಿದ್ದಾರೆ. ಅವರು ಸಾವಿರಾರು ರೈತರ ಬೆಳೆ ಸಾಲವನ್ನು ತೀರಿಸಿದ್ದಾರೆ.
ಉತ್ತರ ಪ್ರದೇಶದ 1356 ರೈತರ ಸುಮಾರು 4.05 ಕೋಟಿ ರೂಪಾಯಿ ಮೊತ್ತದ ರೈತರ ಬೆಳೆ ಸಾಲವನ್ನು ನಟ ಅಮಿತಾಬ್ ಬಚ್ಚನ್ ತೀರಿಸಿದ್ದಾರೆ. ಸಾಲ ತೀರಿಸಿರುವ ಮಾಹಿತಿಯನ್ನು ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ರೈತರಿಗೆ ಮುಂಬೈಗೆ ಬರಲು ವ್ಯವಸ್ಥೆಯನ್ನೂ ಅಮಿತಾಬ್ ಅವರು ಮಾಡಿದ್ದು, ರೈತರೊಂದಿಗೆ ಅಮಿತಾಬ್ ಬಚ್ಚನ್ ಮಾತುಕತೆ ನಡೆಸಲಿದ್ದಾರೆ. ಈ ಮುಂಚೆಯೂ ಅಮಿತಾಬ್ ಬಚ್ಚನ್ ಅವರು ಮಹಾರಾಷ್ಟ್ರದ 350 ರೈತರ ಸಾಲವನ್ನು ತೀರಿಸಿದ್ದರು.

ಟ್ವಿಟ್ಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅಮಿತಾಬ್ ಬಚ್ಚನ್ ಅವರು, ಈ ಕಾರ್ಯ ನನಗೆ ನೆಮ್ಮದಿ, ಸಂತಸ ತಂದಿದೆ. ಸಾಧನೆ ಮಾಡಿದ ಹೆಮ್ಮೆಯನ್ನು ಹುಟ್ಟುಹಾಕಿದೆ ಎಂದು ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರ ರೈತರಿಗೆ ಸಹಾಯ
ಈ ಹಿಂದೆ ಅಮಿತಾಬ್ ಬಚ್ಚನ್ ಅವರು ಮಹಾರಾಷ್ಟ್ರ ರೈತರ ಸಾಲ ಮನ್ನಾ ಮಾಡಿದ್ದರು. ಸುಮಾರು 350 ಜನ ರೈತರ ಸಾಲವನ್ನು ಅವರು ಮನ್ನಾ ಮಾಡಿದ್ದರು. ಕೆಲವು ಗ್ರಾಮಗಳನ್ನೂ ಬಚ್ಚನ್ ಕುಟುಂಬ ದತ್ತು ತೆಗೆದುಕೊಂಡು ಸುದ್ದಿಯಾಗಿತ್ತು.

ನಾನಾ ಪಟೇಕರ್ ಕೂಡ ಸಹಾಯ
ಈ ಹಿಂದೆ ಬಾಲಿವುಡ್ ನಟ ನಾನಾ ಪಟೇಕರ್ ಸಹ ರೈತರಿಗೆ ನೆರವಾಗಿದ್ದರು. ಬರದಿಂದ ಒದ್ದಾಡಿದ್ದ ಮಹಾರಾಷ್ಟ್ರ ರೈತರಿಗೆ ಆರ್ಥಿಕ ಸಹಾಯ ಮಾಡಿದ್ದರು ನಾನಾ.

ಅಕ್ಷಯ್ ಕುಮಾರ್ ಸಹಾಯ
ನಟ ಅಕ್ಷಯ್ ಕುಮಾರ್ ಅವರು ಮಹಾರಾಷ್ಟ್ರದ ರೈತರು ನೀರಿಲ್ಲದೆ ವಿಷಮ ಪರಿಸ್ಥಿತಿಯಲ್ಲಿದ್ದಾಗ ಸುಮಾರು ಒಂದು ಕೋಟಿ ಹಣವನ್ನು ನೀರಿಗಾಗಿ ಅಕ್ಷಯ್ ಕುಮಾರ್ ಅವರು ನೀಡಿದ್ದರು.

ಅಮೀರ್ ಖಾನ್ ರ ವಾಟರ್ ಕಪ್
ಅಮೀರ್ ಖಾನ್ ಅವರ ವಾಟರ್ ಕಪ್ ನೀರು ಸಂರಕ್ಷಿಸುವ ಅತ್ಯುತ್ತಮ ಕಾರ್ಯಕ್ರಮವಾಗಿ ಉತ್ತರ ಭಾರತದಲ್ಲಿ ಪ್ರಚಲಿತ. ಕೆಲವು ಹಳ್ಳಿಗಳನ್ನು ಗುರುತಿಸಿ ಅಲ್ಲಿ ನೀರನ್ನು ಉಳಿಸುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಯಾರು ಹೆಚ್ಚು ನೀರು ಉಳಿಸಿ ಸದ್ಬಳಕೆ ಮಾಡುತ್ತಾರೆಯೋ ಆ ಗ್ರಾಮಕ್ಕೆ ವಾಟರ್ ಕಪ್ ಸಿಗುತ್ತದೆ. ಇದು ಮಹಾರಾಷ್ಟ್ರದ ಬರಪೀಡಿತ ಹಳ್ಳಿಗಳ ಚಿತ್ರಣವನ್ನೇ ಬದಲಾಯಿಸಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications