ಹಾಸನದಲ್ಲಿ ಬೆಂಕಿ ಆರಿಸಲು ಹೋದ ರೈತ ಸಜೀವ ದಹನ
ಹಾಸನ, ಮಾರ್ಚ್ 10: ತನ್ನ ಹೊಲಕ್ಕೆ ಬಿದ್ದಿದ್ದ ಬೆಂಕಿಯನ್ನು ಆರಿಸಲು ಹೋಗಿದ್ದ ರೈತನೇ ಬೆಂಕಿಗೆ ಆಹುತಿಯಾದ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಗಂಜನಗೆರೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪುಟ್ಟಸ್ವಾಮಿ ಗೌಡ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ತನ್ನ ಹೊಲದ ತೇಗದ ಮರಗಳಿಗೆ ಬೆಂಕಿ ಬಿದ್ದಿದೆ ಎಂಬುದನ್ನು ತಿಳಿದು, ಕಂಗಾಲಾದ ಪುಟ್ಟಸ್ವಾಮಿ ಗೌಡ ಬೆಂಕಿ ಆರಿಸುವುದಕ್ಕಾಗಿ ತಕ್ಷಣವೇ ಹೊಲಕ್ಕೆ ಓಡಿದ್ದಾರೆ. ಆದರೆ ಅವರೇ ನೆಟ್ಟು ಬೆಳೆಸಿದ್ದ ಮರದ ಬೆಂಕಿಯಿಂದಲೇ ಅವರು ಅಸುನೀಗಿದ್ದಾರೆ.

ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications