ಗುಟ್ಕಾ ಪ್ಲಾಸ್ಟಿಕ್ ಸ್ಯಾಚೆ ನಿಷೇಧ ಎಷ್ಟು ಸರಿ?

ಆದರೆ ಪ್ಲಾಸಿಕ್ ಸ್ಯಾಚೆಟ್ / ಪೌಚ್ಗಳನ್ನು ತಂಬಾಕು ಉತ್ಪನ್ನ ಮಾರಾಟ ಇಲ್ಲ ಎಂಬುದರ ಅರ್ಥ ಅಥವಾ ಮರ್ಮವೇನಿರಬಹುದು ? ಅಡಿಕೆ ಉತ್ಪನ್ನಗಳಂಥ ಗುಟ್ಕಾ ಮಾರಾಟವಿಲ್ಲದಿದ್ದರೆ ನಮ್ಮ ಅಡಿಗೆ ಬೆಳೆಗಾರರ ಗತಿ ಏನು ? ಅಡಿಕೆ ಬೆಳೆಗಾರರಿಗೆ ಕೊಡಲಿ ಏಟು ಕೊಟ್ಟಂತಾಗಲಿಲ್ಲವೇ ? ಈ ಸುಗ್ರಿವಾಜ್ಞೆ ಜಾರಿಯಾದರೆ ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳು ಕಷ್ಟ ನಷ್ಟಗಳನ್ನು ಅನುಭವಿಸುವುದಿಲ್ಲವೇನು ? ಅವರ ಗೋಳು ಕೇಳುವವರಾರು ?. ಇದಲ್ಲದೆ ಕಾಳಸಂತೆಯಲ್ಲಿ ಗುಟ್ಕಾ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಸಣ್ಣ ಉದ್ಯಮಿಗಳು, ಪೆಟ್ಟಿ ಅಂಗಡಿ ಇಟ್ಟಿಕೊಂಡಿರುವವರಿಗೂ ಈ ನಿಷೇಧದಿಂದ ಭಾರಿ ಹೊಡೆತ ಬಿದ್ದಿದೆ.
ನಮ್ಮ ಮಾಲ್ಗಳಿಗೆ ಸ್ವೀಟ್ ಸ್ಟಾಲ್ಗಳಿಗೆ ಅಥವಾ ಇನ್ಯಾವ ಆಹಾರ ವಸ್ತುಗಳನ್ನು ಕೊಂಡುಕೊಳ್ಳುವ ಶಾಫಿಗೆ ಅಂಗಡಿಗಳಿಗೆ ಹೋದರೆ ಪ್ಲಾಸಿಕ್ ಚೀಲ, ಬ್ಯಾಗ್, ಬಾಟಲಿಗಳಲ್ಲದೆ ಇನ್ಯಾವುದರಲ್ಲಿ ಸಿಗುತ್ತದೆ ? ಸಾರಾಯಿ ಸಹ ಪ್ಲಾಸಿಕ್ ಬಾಟಲಿಗಳಲ್ಲಿ ಮಾರಾಟವಾಗುತ್ತದೆ. ಖನಿಜಯುಕ್ತ ನೀರು ಬಾಟಲಿಗಳಲ್ಲಿ, ಹಾಲು ಪ್ಲಾಸಿಕ್ ಗಳಲ್ಲಿ ಇತರ ಹೋಟೆಲ್ ತಿಂಡಿ ತಿನಿಸುಗಳು ಕಟ್ಟಿ ಕೊಡುವುದಾದರೂ ಯಾವುದರಲ್ಲಿ? ಪ್ಲಾಸ್ಟಿಕ್ಗಳಲ್ಲಿ ಅಲ್ಲವೇನು ? ಹಾಗಾದರೆ ಈ ನಿಯಮ ನಿಷೇಧ ಗುಟ್ಕಾಕ್ಕೆ ಮಾತ್ರ ಏನು ? ಈ ತಾರತಮ್ಯ ಯಾಕಾಗಿ ?
ಪುನರ್ಬಳಕೆ ಮಾಡಲಾಗದ ಪ್ಲಾಸ್ಟಿಕ್ ಗೆ ನಿಷೇಧ ಹೇರುವುದಾದರೆ ಎಲ್ಲೆಡೆ ಅದನ್ನು ಕಡ್ಡಾಯವಾಗಿ ಜಾರಿಗೊಳಿಸಿದರೆ ಉತ್ತಮ. ಕರ್ನಾಟಕ ಅಡಿಕೆ ಬೆಳೆಗಾರರ ನೋವನ್ನು ಅರಿತ ಕ್ಯಾಂಪ್ಕೋ ಸಂಸ್ಥೆ ಈ ನಿಷೇಧವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ. ಸರ್ಕಾರ ಕೂಡಾ ಭರವಸೆ ನೀಡಿದೆ. ಕರ್ನಾಟಕದಲ್ಲಿ ವಾರ್ಷಿಕವಾಗಿ 572,000 ಎಕರೆಗಳಿಂದ 600,000 ಮೆಟ್ರಿಕ್ ಟನ್ ಗಳಷ್ಟು ಅಡಿಕೆ ಉತ್ಪಾದನೆ ಮಾಡಲಾಗುತ್ತದೆ. ದೇಶದ ಅಡಿಕೆ ಉತ್ಪಾದನೆಯಲ್ಲಿ ಇಂದು ಕರ್ನಾಟಕ ಅಗ್ರಸ್ಥಾನದಲ್ಲಿದೆ. ಸರ್ಕಾರ ತಾರತಮ್ಯ ಮಾಡದೆ ಈ ಬಗ್ಗೆ ಗಮನ ಹರಿಸುವುದು ಒಳಿತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications