ನಾಗರಹಾವು, ದುರ್ಗಾಸ್ತಮಾನಕ್ಕೆ ಭಾರೀ ಬೇಡಿಕೆ
* ಮಹೇಶ್ ಮಲ್ನಾಡ್
ಚಿತ್ರದುರ್ಗ, ಫೆ. 7 : ಪುಸ್ತಕ ಮಳಿಗೆಗಳಲ್ಲಿ ಬಹುದೊಡ್ಡ ಬೇಡಿಕೆ ಇದ್ದದ್ದು ತರಾ ಸುಬ್ಬರಾಯರ ಕೃತಿಗಳಿಗೆ. ರಕ್ತರಾತ್ರಿ, ಕಂಬನಿಯ ಕುಯಿಲು, ನಾಗರಹಾವು ಹಾಗೂ ದುರ್ಗಾಸ್ತಮಾನ ಕೃತಿಗಳನ್ನು ಎಲ್ಲರೂ ಕೇಳುವವರೇ. ಆದರೆ ಸ್ಟಾಕ್ ಇರದೇ ಜನರು ನಿರಾಶೆಯಿಂದ ಮುಂದಿನ ಸ್ಟಾಲ್ ನತ್ತ ಮುಖಮಾಡುತ್ತಿದ್ದರು. ಛೇ ಇನ್ನೊಂದಷ್ಟು ತರಾಸು ಅವರ ಪುಸ್ತಕಗಳನ್ನು ತರಬಹುದಿತ್ತಲ್ಲ ಎಂದು ಮಳಿಗೆಯವರು ಪೇಚಾಡುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು.
ನಾಲ್ಕು ದಿನಗಳಲ್ಲಿ ಒಟ್ಟು 11,000 ರು. ದುಡ್ಡು ಗಳಿಕೆ. ಕನ್ನಡ ಗ್ರೀಟಿಂಗ್ಸ್ ಗೆ ಬೇಡಿಕೆ ಇತ್ತು. ಸುಮಾರು 20-25 ಕನ್ನಡ ಟೀಶರ್ಟ್ ಗಳು ಮಾರಾಟವಾಗಿದೆ. ಜನ ಬೇಜಾನ್ ಬರುತ್ತಾರೆ. ಆದರೆ ಖರೀದಿಸುವವರು ಕಮ್ಮಿ, ಕುತೂಹಲದಿಂದ ಗ್ರೀಟಿಂಗ್ಸ್ , ಟಿಶರ್ಟ್ ನೋಡುತ್ತಾರೆ ಆದ್ರೆ ಅದರ ರೇಟ್ ಕೇಳಿ ಅಷ್ಟೊಂದು ದುಡ್ಡಾ ಎಂದು ಹೋದವರೇ ಹೆಚ್ಚು ಜನ.
ಇನ್ನೊಂದು ಕೆಟ್ಟ ಅನುಭವವಾಗಿದ್ದೆಂದರೆ ವಿಮರ್ಶಕರೊಬ್ಬರು ಸ್ಟಾಲ್ ಬಳಿ ಬಂದು "ಏನ್ರೀ ಬರೀ ಡಿವಿಜಿ ಕಗ್ಗಗಳೇ ಇವೆಯಲ್ಲ ಕುವೆಂಪುದು ಎಲ್ರಿ" ಅಂದ್ರು. ಅದಕ್ಕೆ ಕುವೆಂಪು ಸಾಲಿನ ಗ್ರೀಟಿಂಗ್ಸ್,ಟೀ ಶರ್ಟ್ ಅವರ ಮುಂದೆ ಹಿಡಿದಾಗ, ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ಎಲ್ಲಾ ಟಿಶರ್ಟ್ ಮೇಲೆ ಘೋಷ ವಾಕ್ಯ ಇದ್ದದ್ದನ್ನು ನೋಡಿ, ಏನ್ರಿ ಹಿಂದೆ ಕುವೆಂಪು ಕವನ, ಮುಂದೆ ಮಂಕುತಿಮ್ಮ ಎಂದಿದೆ ಎಂದು ಮುಖ ಸಿಂಡರಿಸಿಕೊಂಡು ಹೋದರು.
ಇದಕ್ಕೆ ವ್ಯತಿರಿಕ್ತವಾಗಿ ಕಡಿದಾಳ್ ಶಾಮಣ್ಣ ಅವರು ತಮ್ಮ ಎಂದಿನ ಹಸಿರು ಪೇಟದೊಡನೆ ಸ್ಟಾಲ್ ಗೆ ಹಾಜರಾಗಿ, ಒಳ್ಳೆಯ ಕೆಲ್ಸ ಮಾಡುತ್ತಿದ್ದಿರಾ, ಹೀಗೆ ಮುಂದುವರೆಸಿ ಎಂದು ಹೇಳಿ ಸ್ವಲ್ಪ ಹೊತ್ತು ಕೂತು ಕನ್ನಡ ಗ್ರೀಟಿಂಗ್ಸ್ ಹಾಗೂ ಟಿಶರ್ಟ್ ಪ್ರಚಾರ ಮಾಡಿದರು. ಉಳಿದಂತೆ ಮುಂಜಾನೆ ವೇಳೆಯಲ್ಲಿ ಗಣ್ಯರು ಪುಸ್ತಕ ಮಳಿಗೆಯ ಬಳಿ ಬಂದು ವೀಕ್ಷಿಸಿ ಹೋಗುವುದು ದೈನಂದಿನ ಕೆಲಸವಾಗಿತ್ತು ಎನ್ನುತ್ತಾರೆ ಸಮಾಜ ಸೇವಕರ ಸಮಿತಿಯ ರಾಜ್ ಕುಮಾರ್ ಅವರು.
ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಚಿತ್ರಗಳು
ಪೂರಕ ಓದಿಗೆ
ಮೈಸೂರು ಕೆಫೆ : ದುರ್ಗದ ಹೆಮ್ಮೆಯ ಸಂಕೇತ
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications