ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31 : 2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಶುಕ್ರವಾರ ರಾತ್ರಿ ಘೋಷಣೆ ಮಾಡಿದೆ. ಈ ಬಾರಿ 60ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 60 ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ನವೆಂಬರ್ 1ರ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯು1 ಲಕ್ಷ ನಗದು, ಸ್ಮರಣಿಕೆ ಮತ್ತು 20 ಗ್ರಾಂ ಚಿನ್ನದ ಪದಕಗಳನ್ನು ಒಳಗೊಂಡಿದೆ. [ರಾಜ್ಯೋತ್ಸವಕ್ಕೆ ನಿರ್ಬಂಧ : ಕನ್ನಡ ಹೋರಾಟಗಾರರು ಏನಂತಾರೆ?]

rajyotsava award

ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್, ನ್ಯಾಯಮೂರ್ತಿ ಎ.ಜೆ. ಸದಾಶಿವ, ಹಿರಿಯ ನಟಿ ಸಾಹುಕಾರ್ ಜಾನಕಿ, ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ, ಸಮಾಜ ಸೇವಕಿ ಅಕೈ ಪದ್ಮಶಾಲಿ, ಕ್ರಿಕೆಟಿಗ ವಿನಯ್ ಕುಮಾರ್ ಸೇರಿದಂತೆ 60 ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ.

ಪ್ರಶಸ್ತಿ ಪಡೆದ ಸಾಧಕರ ಪಟ್ಟಿ...

ಜಾನಪದ
ಮಾಚಾರ್ ಗೋಪಾಲ ನಾಯಕ (ದಕ್ಷಿಣ ಕನ್ನಡ)
ಅಪ್ಪಗೆರೆ ತಿಮ್ಮರಾಜು (ರಾಮನಗರ)
ಕೆಂಚಮಾದೇಗೌಡ (ಬಾಗಲಕೋಟೆ)
ಹನಿಫಾ ಎಂ ಶೇಖ್ (ಕಲಬುರಗಿ)
ಗುರುಲಿಂಗಪ್ಪ ವೀರ ಸಂಗಪ್ಪ ಕರಡಿ (ಬಾಗಲಕೋಟೆ)
ಮಾರಿಯಮ್ಮ ಬಸಣ್ಣ ಶಿರವಾಟಿ (ಯಾದಗಿರಿ)

ಮಾಧ್ಯಮ

ಕಲ್ಲೇ ಶಿವೋತ್ತಮ ರಾವ್ (ಉಡುಪಿ)
ಹೆಚ್‌.ಎಸ್.ಈಶ್ವರ್ (ಶಿವಮೊಗ್ಗ)
ನಾಗಮಣಿ ಎಸ್.ರಾವ್ (ಬೆಂಗಳೂರು)
ಹನುಮಂತ ಹೂಗಾರ (ಧಾರವಾಡ)
ನಾಗಣ್ಣ (ತುಮಕೂರು, ಪ್ರಜಾಪ್ರಗತಿ)

ಕ್ರೀಡೆ

ಪಾಂಡಂಡ ಕುಟ್ಟಪ್ಪ (ಕೊಡಗು)
ವಿನಯ್ ಕುಮಾರ್ (ದಾವಣಗೆರೆ)
ಎಂ.ನಿರಂಜನ್ (ಬೆಂಗಳೂರು)

ಚಿತ್ರಕಲೆ-ಶಿಲ್ಪಕಲೆ

ಕಮಲಾಕ್ಷಿ ಎಂ.ಜೆ (ಬೆಂಗಳೂರು ಗ್ರಾಮಾಂತರ)
ಪಿ.ಎಸ್.ಕಡೇಮನಿ (ವಿಜಯಪುರ)
ಮಲ್ಲಪ್ಪ ಮಳಿಯಪ್ಪ ಬಡಿಗೇರ (ಬಾಗಲಕೋಟೆ)
ಮರಿಸ್ವಾಮಿ (ಬೆಂಗಳೂರು ಗ್ರಾಮಾಂತರ)

ಯಕ್ಷಗಾನ-ಬಯಲಾಟ

ಮಾರ್ಗೋಳಿ ಗೋವಿಂದ ಶಿರೇಗಾರ (ಉಡುಪಿ)
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ದಕ್ಷಿಣ ಕನ್ನಡ)
ಸಕ್ರವ್ವ ಯಲ್ಲವ್ವ ಪಾತ್ರೋಟ (ಬೆಳಗಾವಿ)
ತಮ್ಮಣ್ಣಾಚಾರ್ (ಮೈಸೂರು)

ಕೃಷಿ

ಡಾ.ಪ್ರಕಾಶ್ ಭಟ್ (ಧಾರವಾಡ)
ಡಾ.ಮಲ್ಲಣ್ಣ ನಾಗರಾಳ (ಬಾಗಲಕೋಟೆ)
ಬನ್ನೂರು ಕೃಷ್ಣಪ್ಪ (ಮೈಸೂರು)
ಮುತ್ತಣ್ಣ ಪೂಜಾರ (ಹಾವೇರಿ)

ವಿಜ್ಞಾನ

ಎ.ಎಸ್.ಕಿರಣ್ ಕುಮಾರ್ [ಇಸ್ರೋ] (ಚಿಕ್ಕಮಗಳೂರು)
ಪ್ರೊ.ಅಬ್ದುಲ್ ಅಜೀಜ್ (ಕೋಲಾರ)

ವೈದ್ಯಕೀಯ

ಡಾ.ಆರ್‌.ಕೆ.ಸರೋಜ (ಚಿಕ್ಕಬಳ್ಳಾಪುರ)

ಸಿನಿಮಾ-ಕಿರುತೆರೆ
ಸಾಹುಕಾರ್ ಜಾನಕಿ (ಬೆಂಗಳೂರು)
ಸದಾಶಿವ ಬ್ರಹ್ಮಾವರ (ಧಾರವಾಡ)
ಸಾಧು ಕೋಕಿಲ (ಬೆಂಗಳೂರು)
ಶನಿಮಹದೇವಪ್ಪ (ಮಂಡ್ಯ)

ಸಂಕೀರ್ಣ

ಹೆಚ್‌.ಎಸ್.ಪಾಟೀಲ (ಕೊಪ್ಪಳ)
ಲಕ್ಷ್ಮಣ್ ತೆಲಗಾವಿ (ಚಿತ್ರದುರ್ಗ)
ಫಕೀರಪ್ಪ ರೆಡ್ಡಿ ಬಸಪ್ಪ ರೆಡ್ಡಿ ಗದ್ದನಕೇರಿ (ಗದಗ)
ಎಸ್.ತಿಪ್ಪೇಸ್ವಾಮಿ (ಮೈಸೂರು)

ಹೊರನಾಡು

ಶಾರದ ಜಯಣ್ಣ [ಯು.ಎಸ್.ಎ) (ರಾಮನಗರ)

ಸಮಾಜ ಸೇವೆ

ಎಂ.ಎಸ್.ಹೆಳವರ್ (ಚಿಕ್ಕಮಗಳೂರು)
ಡಾ.ಕಾರಿನ್ ಕುಮಾರ್ (ಬೆಂಗಳೂರು)
ಮೀರಾ ಶ್ರೀನಿವಾಸ ಶಾನಭಾಗ (ಉತ್ತರ ಕನ್ನಡ)
ಡಾ.ಆರ್.ಆರ್.ಪದಕಿ (ವಿಜಯಪುರ)
ಅಕೈ ಪದ್ಮಶಾಲಿ (ಬೆಂಗಳೂರು)

ನ್ಯಾಯಾಂಗ

ನಿವೃತ್ತ ನ್ಯಾ.ಎ.ಜೆ.ಸದಾಶಿವ (ಮಂಡ್ಯ)

ಸಂಘ ಸಂಸ್ಥೆ
ಡಾ.ಫ.ಗು.ಹಳಕಟ್ಟಿ ಸಂಶೋಧನಾ ಸಂಸ್ಥೆ (ವಿಜಯಪುರ)

ಸಾಹಿತ್ಯ

ಡಾ.ಕೆ.ಜಿ.ನಾಗರಾಜಪ್ಪ (ತುಮಕೂರು)
ಡಾ.ಜಿನದತ್ತ ದೇಸಾಯಿ (ಬೆಳಗಾವಿ)
ಆರಾಂಭ್ಯ ಪಟ್ಟಾಭಿ (ಮೈಸೂರು)
ಡಾ.ವೀರೇಂದ್ರ ಸಿಂಪಿ (ಬೀದರ್)
ಹೆಚ್.ಎಲ್.ಕೇಶವಮೂರ್ತಿ (ಮಂಡ್ಯ)

ರಂಗಭೂಮಿ

ಹೆಚ್.ಜಿ.ಸೋಮಶೇಖರ ರಾವ್ (ಬೆಂಗಳೂರು)
ಬಿ.ಕರಿಯಪ್ಪ ಮಾಸ್ತರ್ (ರಾಯಚೂರು)
ಮುಮ್ತಾಜ್ ಬೇಗಂ (ಗದಗ)
ಸಂಜೀವಪ್ಪ ಗಬೂರು (ರಾಯಚೂರು)
ವೀಣಾ ಆದವಾನಿ (ಬಳ್ಳಾರಿ)

ಸಂಗೀತ

ಶ್ರೀರಾಮುಲು (ಕೋಲಾರ)
ಲೋಕೇಶದಾಸ್ (ಹಾಸನ)
ಖಾಸೀಂಸಾಬ್ ಜಮಾದಾರ್ (ಉತ್ತರ ಕನ್ನಡ)
ಶೋಭಾ.ಆರ್.ಹುಯಿಲಗೋಳ (ಗದಗ)
ಚಿತ್ರವೇಣುಗೋಪಾಲ್ (ಬೆಂಗಳೂರು)

English summary
The Karnataka government has chosen 60 people for Rajyotsava award. Government has restricted the number of award winners to 60 to mark the 60th Karnataka Rajyotsava day. Award will be presented on Sunday, November 1, 2015 at Ravindra Kalakshetra, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X