ಬಸವಣ್ಣ, ರಾಮಾನುಜರ ನೆನೆದು ಬೇಸಿಗೆಗೆ ತಂಪೆರೆದ ಮನ್ ಕೀ ಬಾತ್
ಏಪ್ರಿಲ್ 30ರ ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೀವನ ಆಸ್ವಾದಿಸಲು ಅದ್ಭುತವಾದ ಸಲಹೆಗಳನ್ನು ಕೊಟ್ಟಿದ್ದಾರೆ. ಅವರ ಸಲಹೆಗಳ ಬಗ್ಗೆ ತಿಳಿಯಲು ಈ ಲೇಖನ ಓದಿ
ನವದೆಹಲಿ, ಏಪ್ರಿಲ್ 30: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳು ದೇಶದ ಜನತೆ ಎದುರು ಬರುವ ಮನ್ ಕೀ ಬಾತ್ ನ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಏನು ಹೇಳಿದರು ಅಂತ ಗೊತ್ತಾಯ್ತಾ? ಈ ಕಾರ್ಯಕ್ರಮಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ಇದೆ. ಅದರಲ್ಲೂ ನಗರ-ಪಟ್ಟಣ ಪ್ರದೇಶದಲ್ಲಿ ಒಳ್ಳೆ ಸ್ಪಂದನೆ ಇದೆ.
ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಮುಂಬೈ, ಚೆನ್ನೈ ಸೇರಿದಂತೆ ಆರು ಪ್ರಮಖ ನಗರಗಳಲ್ಲಿ ಈ ಕಾರ್ಯಕ್ರಮ ಜನಪ್ರಿಯವಾಗಿದೆ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶದ ಜತೆಗೆ ದೇಶದ ಬಾಂಧವ್ಯದ ಬಗ್ಗೆ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದರು. ಸ್ವಚ್ಛತೆಯ ಮಹತ್ವದ ಪ್ರಸ್ತಾವ ಮಾಡಿದ್ದರು.['ಮನ್ ಕಿ ಬಾತ್' ನಲ್ಲಿ ಮೋದಿ ಹೊಗಳಿದ ಬಾಲಕಿ ಯಾರು?]
ಡಿಜಿಧನ್
ಮೇಳ,
ಹೆರಿಗೆ
ರಜಾ
ಹಾಗೂ
ಕೌಶಲ
ಅಭಿವೃದ್ಧಿ
ಕಾರ್ಯಕ್ರಮಗಳ
ಬಗ್ಗೆ
ಚರ್ಚಿಸಿದ್ದರು.
ಈ
ಬಾರಿ
ಯಾವೆಲ್ಲ
ವಿಚಾರ
ಮಾತನಾಡಿದ್ದಾರೆ,
ಏನು
ಮಾತನಾಡಿದ್ದಾರೆ
ಎಂಬುದರ
ಮುಖ್ಯಾಂಶಗಳು
ಇಲ್ಲಿವೆ...
*
ಈ
ಸಮಾಜಕ್ಕೆ
ಕೊಡುಗೆ
ನೀಡಿದವರಿಗೆ
ಮೊದಲಿಗೆ
ಅಭಿನಂದನೆ
ಸಲ್ಲಿಸುತ್ತೇನೆ.
*
ಗುಜರಾತ್
ಹಾಗೂ
ಮಹಾರಾಷ್ಟ್ರದ
ಜನರು
ಭಾರತದ
ಅಭಿವೃದ್ಧಿಗೆ
ಮಹತ್ವದ
ಕೊಡುಗೆ
ನೀಡಿದ್ದಾರೆ.[ಮೋದಿ
ಮನ್
ಕಿ
ಬಾತ್
ನಲ್ಲಿ
ಇಸ್ರೋ,
ಕ್ಷಿಪಣಿ,
ಡಿಜಿಟಲ್
ಮನಿ,
ಕೃಷಿ]
* ಈ ಬಾರಿ ಮನ್ ಕೀ ಬಾತ್ ನಲ್ಲಿ ಯಾವ ವಿಚಾರ ಮಾತನಾಡಲಿ ಅಂತ ಕೇಳಿದಾಗ ನಿರೀಕ್ಷೆಯಂತೆಯೇ ಜನ ಬೇಸಿಗೆ ಬಗ್ಗೆ ಎಂದು ಉತ್ತರ ನೀಡಿದ್ದಾರೆ
* ಪಕ್ಷಿಗಳಿಗಾಗಿ ನೀರು ಹಾಕುವ ವಿಚಾರಕ್ಕೆ ಬಂದರೆ ಮಕ್ಕಳೇ ಅದರಲ್ಲಿ ಮುಂದು ಅನ್ನೋದನ್ನು ನಾನು ಗಮನಿಸಿದ್ದೀನಿ
* ನಿಮ್ಮ ಗೆಳಯನಾಗಿ ನಾನು ಕೆಲವು ಸಲಹೆ ಕೊಡ್ತೀನಿ.[ಟೀಂ ಇಂಡಿಯಾ ಬಗ್ಗೆ 'ಮನ್ ಕಿ ಬಾತ್'ನಲ್ಲಿ ಮೋದಿ ಮನದಾಳದ ಮಾತು]
* ರಿಸರ್ವೇಷನ್ ಮಾಡಿಸದೆ ದ್ವಿತೀಯ ದರ್ಜೆ ರೈಲ್ವೆ ಬೋಗಿಯಲ್ಲಿ ಪ್ರಯಾಣ ಮಾಡಿದ್ದೀರಾ? ಅಥವಾ ಕನಿಷ್ಠ ಇಪ್ಪತ್ನಾಲ್ಕು ಗಂಟೆ ಪ್ರಯಾಣ ಮಾಡಿದ್ದೀರಾ?
* ಈ ಭಾರಿಯ ರಜಾ ದಿನದಲ್ಲಿ ಹೊಸದೇನಾದರೂ ಕಲಿಯಿರಿ. ಹೊಸ ಸ್ಥಳಕ್ಕೆ ಹೋಗಿ
* ರಜಾ ದಿನದಲ್ಲಿ ಕ್ರೀಡೆಗಳಲ್ಲಿ ಕಾಲ ಕಳೆಯಿರಿ. ಹತ್ತಿರದ ಪ್ರದೇಶದ ಮಕ್ಕಳ ಜತೆಗೆ ಆಟವಾಡಿ
* ನಮ್ಮ ಸಾಮಾಜಿಕ ಬದುಕಿನೊಳಗೆ ತಂತ್ರಜ್ಞಾನದ ಪ್ರವೇಶವಾಗಿ ಕುಟುಂಬಗಳು ಬೇರ್ಪಡುತ್ತಿವೆ
* ತಂತ್ರಜ್ಞಾನದಿಂದ ಸ್ವಲ್ಪ ಮಟ್ಟಿಗೆ ದೂರ ಇದ್ದು, ನಿಮ್ಮ ಜತೆಗೆ ನೀವು ಸಮಯ ಕಳೆಯಿರಿ[ಕೊಪ್ಪಳದ ಮಲ್ಲಮ್ಮ ಬಗ್ಗೆ 'ಮನ್ ಕೀ ಬಾತ್'ನಲ್ಲಿ ಮಾತನಾಡಿದ ಮೋದಿ]
* ನಿಮಗೆ ಈಜು ಬರುವುದಿಲ್ಲ ಅಂತಾದರೆ ಈಜು ಕಲಿಯಿರಿ. ತುಂಬ ಒಳ್ಳೆ ಚಿತ್ರಕಾರರಾಗಬೇಕು ಅಂತಿಲ್ಲ. ಆದರೂ ಚಿತ್ರಕಲೆ ಕಲಿಯಿರಿ
* ಸಂಗೀತ ವಾದ್ಯಗಳನ್ನು ಕಲಿಯಿರಿ. ಔಟ್ ಆಫ್ ದ ಬಾಕ್ಸ್ ಅನ್ನೋ ಥರದ ಯೋಚನೆ ಮಾಡಿ. ಹೊಸ ಭಾಷೆಗಳನ್ನು ಕಲಿಯುವುದಕ್ಕೆ ಪ್ರಯತ್ನಿಸಿ.
* ನೀವು ಪ್ರವಾಸ ಹೋದಾಗ ತೆಗೆದ ಫೋಟೋಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹೇಳಿಕೊಳ್ಳಿ.
* ಈ ಅಪ್ಲಿಕೇಷನ್ ಬಗ್ಗೆ ಇತರರಿಗೂ ತಿಳಿಸಿ. ಹೊಸ ಸದಸ್ಯರು ಮೂರು ವ್ಯವಹಾರ ಅದರಲ್ಲಿ ಮಾಡಿದರೆ ನಿಮಗೆ ಹತ್ತು ರುಪಾಯಿ ಪ್ರೋತ್ಸಾಹ ಧನ ಸಿಗುತ್ತದೆ.[ಮನ್ ಕಿ ಬಾತ್ನಲ್ಲಿ ಯೋಧರಿಗೆ ಗೌರವ ಸಲ್ಲಿಸಿದ ಮೋದಿ]
* ಅಕ್ಟೋಬರ್ 14ರಿಂದ ಈ ಯೋಜನೆ ಬಂದಿದೆ. ಡಿಜಿಟಲ್ ಇಂಡಿಯಾಗೆ ನಿಮ್ಮ ಕೊಡುಗೆ ನೀಡಿ.
* ಭಾರತ ಸರಕಾರ ನಿಮಗೊಂದು ಉತ್ತಮ ಅವಕಾಶ ನೀಡಿದೆ. ಭೀಮ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು, ಬಳಸಿ
* ಭಾರತದಲ್ಲಿ ಯಾವುದೇ ವ್ಯಕ್ತಿ, ಯಾವುದೇ ಸ್ಥಾನದಲ್ಲಿರಬಹುದು. ಕೆಂಪು ದೀಪದ ವಾಹನದಲ್ಲಿ ಸಂಚರಿಸಲ್ಲ.
* ವಾಹನಗಳ ಮೇಲೆ ಇನ್ನು ಕೆಂಪು ದೀಪಗಳು ಕಾಣಲ್ಲ. ಇದರ ಜತೆಗೆ ನಮ್ಮ ಮನಸುಗಳು ಶುದ್ಧವಾಗಬೇಕು.
* ರಾಮಾನುಜಾಚಾರ್ಯರು ಸಾಮಾಜಿಕ ಪಿಡುಗಗಳ ವಿರುದ್ಧ ಮಾಡಿದ ಹೋರಾಟದ ಬಗ್ಗೆ ಬಹಳ ಮಂದಿಗೆ ತಿಳಿದಿಲ್ಲ
* ನವಭಾರತದ ನಮ್ಮ ಕಲ್ಪನೆಯಲ್ಲಿ ವಿಐಪಿ ಜಾಗದಲ್ಲಿ ಇಪಿಐ (ಎವರಿ ಪರ್ಸನ್ ಇಂಪಾರ್ಟೆಂಟ್) ಅಂದರೆ ಪ್ರತಿ ವ್ಯಕ್ತಿಯು ಮುಖ್ಯ ಎಂಬ ನಿಲುವಿಗೆ ಪ್ರಾಶಸ್ತ್ಯ[ನಿಮ್ಮೊಂದಿಗೆ ಹೋರಾಡಿ, ಇತರರೊಂದಿಗೆ ಸ್ಪರ್ಧಿಸಬೇಡಿ: ಮೋದಿ]
* ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಸಂಭ್ರಮದಲ್ಲಿದ್ದೇವೆ. ಅವರಿಂದ ಸ್ಫೂರ್ತಿ ಪಡೆಯಬೇಕು.
* ಮೇ 1ರ ಕಾರ್ಮಿಕರ ದಿನದಂದು ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸಿದ ಡಾ ಬಾಬಾಸಾಹೇಬ್ ಅಂಬೇಡ್ಕರ್ ರ ಪಾತ್ರವನ್ನು ಸ್ಮರಿಸೋಣ
* ಇಂದು ಶ್ರಮಿಕ ವರ್ಗಕ್ಕೆ ಸಿಕ್ಕಿರುವ ಗೌರವ ಹಾಗೂ ಅನುಕೂಲಕ್ಕಾಗಿ ನಾವು ಬಾಬಾ ಸಾಹೇಬ್ ರಿಗೆ ಧನ್ಯವಾದ ಹೇಳಬೇಕು
* ರಾಮಾನುಜಾಚಾರ್ಯರ ಸ್ಮರಣೆಯ ನಿಮಿತ್ತ ಭಾರತ ಸರಕಾರ ಮೇ 1ರಂದು ಅಂಚೆ ಚೀಟಿ ಬಿಡುಗಡೆ ಮಾಡಲಿದೆ.
* ಈ ಸಂದರ್ಭದಲ್ಲಿ 12ನೇ ಶತಮಾನದ ಮಹಾನ್ ಸಂತ, ಕರ್ನಾಟಕದ ಸಮಾಜ ಸುಧಾರಣೆ ಹರಿಕಾರ ಜಗದ್ಗುರು ಬಸವೇಶ್ವರ ಅವರನ್ನು ಸ್ಮರಿಸ್ತೀನಿ.
* 12ನೇ ಶತಮಾನದಲ್ಲಿ ಆ ಮಹನೀಯರು ತಮ್ಮ ವಿಚಾರಧಾರೆಯಿಂದ ಕಾರ್ಮಿಕರು ಹಾಗೂ ಶ್ರಮಿಕ ವರ್ಗದ ಮೇಲೆ ಪ್ರಭಾವ ಬೀರಿದ್ದರು
* ಎಲ್ಲರ ಜತೆಗೆ, ಎಲ್ಲರ ಅಭಿವೃದ್ಧಿ ಎಂಬ ಮಾತು ಬರೀ ಭಾರತಕ್ಕಷ್ಟೇ ಅನ್ವಯಿಸುವುದಲ್ಲ, ಜಾಗತಿಕವಾಗಿ ಈ ಮಾತು ಸಲ್ಲುತ್ತದೆ
* ಎಲ್ಲರ ಜತೆಗೆ, ಎಲ್ಲರ ಅಭಿವೃದ್ಧಿ ಎಂಬ ಗುರಿಯೊಂದಿಗೆ ಭಾರತವು ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿದೆ.
* ಮೇ 5ರಂದು ಭಾರತವು ದಕ್ಷಿಣ ಏಷ್ಯಾದ ಉಪಗ್ರಹಗಳ ಉಡಾವಣೆ ಮಾಡಲಿದೆ.
* ಉಪಗ್ರಹಗಳ ಸಾಮರ್ಥ್ಯ ಮತ್ತು ಅವುಗಳು ಒದಗಿಸುವ ಸೌಕರ್ಯವು ದೀರ್ಘಾವಧಿಯಲ್ಲಿ ದಕ್ಷಿಣ ಏಷ್ಯಾ ಆರ್ಥಿಕ ಮತ್ತು ಅಭಿವೃದ್ಧಿಯ ಆದ್ಯತೆಯಾಗಲಿದೆ
* ದಕ್ಷಿಣ ಏಷ್ಯಾದ ದೇಶಗಳೊಂದಿಗೆ ಭಾರತ ಸಹಕಾರ ವೃದ್ಧಿ ಮಾಡಿಕೊಳ್ಳಲು ಹೆಜ್ಜೆ ಇಡುತ್ತಿದೆ. ನಮ್ಮ ಜತೆ ಕೈ ಜೋಡಿಸಲು ಎಲ್ಲ ದಕ್ಷಿಣ ಏಷ್ಯಾ ದೇಶಗಳನ್ನು ಸ್ವಾಗತಿಸುತ್ತೇನೆ
* ತಡೆಯಲು ಸಾಧ್ಯವೇ ಇಲ್ಲದಂಥ ಬಿಸಿಲಿದೆ. ನಿಮ್ಮ ಹಾಗೂ ನಿಮ್ಮ ಪ್ರೀತಿ ಪಾತ್ರರ ಕಾಳಜಿ ಮಾಡಿ, ನಿಮಗೆಲ್ಲ ಶುಭವಾಗಲಿ