ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವಣ್ಣ, ರಾಮಾನುಜರ ನೆನೆದು ಬೇಸಿಗೆಗೆ ತಂಪೆರೆದ ಮನ್ ಕೀ ಬಾತ್

ಏಪ್ರಿಲ್ 30ರ ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೀವನ ಆಸ್ವಾದಿಸಲು ಅದ್ಭುತವಾದ ಸಲಹೆಗಳನ್ನು ಕೊಟ್ಟಿದ್ದಾರೆ. ಅವರ ಸಲಹೆಗಳ ಬಗ್ಗೆ ತಿಳಿಯಲು ಈ ಲೇಖನ ಓದಿ

|
Google Oneindia Kannada News

ನವದೆಹಲಿ, ಏಪ್ರಿಲ್ 30: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳು ದೇಶದ ಜನತೆ ಎದುರು ಬರುವ ಮನ್ ಕೀ ಬಾತ್ ನ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಏನು ಹೇಳಿದರು ಅಂತ ಗೊತ್ತಾಯ್ತಾ? ಈ ಕಾರ್ಯಕ್ರಮಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ಇದೆ. ಅದರಲ್ಲೂ ನಗರ-ಪಟ್ಟಣ ಪ್ರದೇಶದಲ್ಲಿ ಒಳ್ಳೆ ಸ್ಪಂದನೆ ಇದೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಮುಂಬೈ, ಚೆನ್ನೈ ಸೇರಿದಂತೆ ಆರು ಪ್ರಮಖ ನಗರಗಳಲ್ಲಿ ಈ ಕಾರ್ಯಕ್ರಮ ಜನಪ್ರಿಯವಾಗಿದೆ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶದ ಜತೆಗೆ ದೇಶದ ಬಾಂಧವ್ಯದ ಬಗ್ಗೆ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದರು. ಸ್ವಚ್ಛತೆಯ ಮಹತ್ವದ ಪ್ರಸ್ತಾವ ಮಾಡಿದ್ದರು.['ಮನ್ ಕಿ ಬಾತ್' ನಲ್ಲಿ ಮೋದಿ ಹೊಗಳಿದ ಬಾಲಕಿ ಯಾರು?]

PM Narendra Modi on Mann Ki Baat: Have to remove VIP culture from minds of select few

ಡಿಜಿಧನ್ ಮೇಳ, ಹೆರಿಗೆ ರಜಾ ಹಾಗೂ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದ್ದರು. ಈ ಬಾರಿ ಯಾವೆಲ್ಲ ವಿಚಾರ ಮಾತನಾಡಿದ್ದಾರೆ, ಏನು ಮಾತನಾಡಿದ್ದಾರೆ ಎಂಬುದರ ಮುಖ್ಯಾಂಶಗಳು ಇಲ್ಲಿವೆ...
* ಈ ಸಮಾಜಕ್ಕೆ ಕೊಡುಗೆ ನೀಡಿದವರಿಗೆ ಮೊದಲಿಗೆ ಅಭಿನಂದನೆ ಸಲ್ಲಿಸುತ್ತೇನೆ.
* ಗುಜರಾತ್ ಹಾಗೂ ಮಹಾರಾಷ್ಟ್ರದ ಜನರು ಭಾರತದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.[ಮೋದಿ ಮನ್ ಕಿ ಬಾತ್ ನಲ್ಲಿ ಇಸ್ರೋ, ಕ್ಷಿಪಣಿ, ಡಿಜಿಟಲ್ ಮನಿ, ಕೃಷಿ]

PM Narendra Modi on Mann Ki Baat: Have to remove VIP culture from minds of select few

* ಈ ಬಾರಿ ಮನ್ ಕೀ ಬಾತ್ ನಲ್ಲಿ ಯಾವ ವಿಚಾರ ಮಾತನಾಡಲಿ ಅಂತ ಕೇಳಿದಾಗ ನಿರೀಕ್ಷೆಯಂತೆಯೇ ಜನ ಬೇಸಿಗೆ ಬಗ್ಗೆ ಎಂದು ಉತ್ತರ ನೀಡಿದ್ದಾರೆ
* ಪಕ್ಷಿಗಳಿಗಾಗಿ ನೀರು ಹಾಕುವ ವಿಚಾರಕ್ಕೆ ಬಂದರೆ ಮಕ್ಕಳೇ ಅದರಲ್ಲಿ ಮುಂದು ಅನ್ನೋದನ್ನು ನಾನು ಗಮನಿಸಿದ್ದೀನಿ
* ನಿಮ್ಮ ಗೆಳಯನಾಗಿ ನಾನು ಕೆಲವು ಸಲಹೆ ಕೊಡ್ತೀನಿ.[ಟೀಂ ಇಂಡಿಯಾ ಬಗ್ಗೆ 'ಮನ್ ಕಿ ಬಾತ್'ನಲ್ಲಿ ಮೋದಿ ಮನದಾಳದ ಮಾತು]
* ರಿಸರ್ವೇಷನ್ ಮಾಡಿಸದೆ ದ್ವಿತೀಯ ದರ್ಜೆ ರೈಲ್ವೆ ಬೋಗಿಯಲ್ಲಿ ಪ್ರಯಾಣ ಮಾಡಿದ್ದೀರಾ? ಅಥವಾ ಕನಿಷ್ಠ ಇಪ್ಪತ್ನಾಲ್ಕು ಗಂಟೆ ಪ್ರಯಾಣ ಮಾಡಿದ್ದೀರಾ?

PM Narendra Modi on Mann Ki Baat: Have to remove VIP culture from minds of select few

* ಈ ಭಾರಿಯ ರಜಾ ದಿನದಲ್ಲಿ ಹೊಸದೇನಾದರೂ ಕಲಿಯಿರಿ. ಹೊಸ ಸ್ಥಳಕ್ಕೆ ಹೋಗಿ
* ರಜಾ ದಿನದಲ್ಲಿ ಕ್ರೀಡೆಗಳಲ್ಲಿ ಕಾಲ ಕಳೆಯಿರಿ. ಹತ್ತಿರದ ಪ್ರದೇಶದ ಮಕ್ಕಳ ಜತೆಗೆ ಆಟವಾಡಿ
* ನಮ್ಮ ಸಾಮಾಜಿಕ ಬದುಕಿನೊಳಗೆ ತಂತ್ರಜ್ಞಾನದ ಪ್ರವೇಶವಾಗಿ ಕುಟುಂಬಗಳು ಬೇರ್ಪಡುತ್ತಿವೆ
* ತಂತ್ರಜ್ಞಾನದಿಂದ ಸ್ವಲ್ಪ ಮಟ್ಟಿಗೆ ದೂರ ಇದ್ದು, ನಿಮ್ಮ ಜತೆಗೆ ನೀವು ಸಮಯ ಕಳೆಯಿರಿ[ಕೊಪ್ಪಳದ ಮಲ್ಲಮ್ಮ ಬಗ್ಗೆ 'ಮನ್ ಕೀ ಬಾತ್'ನಲ್ಲಿ ಮಾತನಾಡಿದ ಮೋದಿ]
* ನಿಮಗೆ ಈಜು ಬರುವುದಿಲ್ಲ ಅಂತಾದರೆ ಈಜು ಕಲಿಯಿರಿ. ತುಂಬ ಒಳ್ಳೆ ಚಿತ್ರಕಾರರಾಗಬೇಕು ಅಂತಿಲ್ಲ. ಆದರೂ ಚಿತ್ರಕಲೆ ಕಲಿಯಿರಿ

PM Narendra Modi on Mann Ki Baat: Have to remove VIP culture from minds of select few

* ಸಂಗೀತ ವಾದ್ಯಗಳನ್ನು ಕಲಿಯಿರಿ. ಔಟ್ ಆಫ್ ದ ಬಾಕ್ಸ್ ಅನ್ನೋ ಥರದ ಯೋಚನೆ ಮಾಡಿ. ಹೊಸ ಭಾಷೆಗಳನ್ನು ಕಲಿಯುವುದಕ್ಕೆ ಪ್ರಯತ್ನಿಸಿ.
* ನೀವು ಪ್ರವಾಸ ಹೋದಾಗ ತೆಗೆದ ಫೋಟೋಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹೇಳಿಕೊಳ್ಳಿ.
* ಈ ಅಪ್ಲಿಕೇಷನ್ ಬಗ್ಗೆ ಇತರರಿಗೂ ತಿಳಿಸಿ. ಹೊಸ ಸದಸ್ಯರು ಮೂರು ವ್ಯವಹಾರ ಅದರಲ್ಲಿ ಮಾಡಿದರೆ ನಿಮಗೆ ಹತ್ತು ರುಪಾಯಿ ಪ್ರೋತ್ಸಾಹ ಧನ ಸಿಗುತ್ತದೆ.[ಮನ್ ಕಿ ಬಾತ್‌ನಲ್ಲಿ ಯೋಧರಿಗೆ ಗೌರವ ಸಲ್ಲಿಸಿದ ಮೋದಿ]
* ಅಕ್ಟೋಬರ್ 14ರಿಂದ ಈ ಯೋಜನೆ ಬಂದಿದೆ. ಡಿಜಿಟಲ್ ಇಂಡಿಯಾಗೆ ನಿಮ್ಮ ಕೊಡುಗೆ ನೀಡಿ.
* ಭಾರತ ಸರಕಾರ ನಿಮಗೊಂದು ಉತ್ತಮ ಅವಕಾಶ ನೀಡಿದೆ. ಭೀಮ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು, ಬಳಸಿ
* ಭಾರತದಲ್ಲಿ ಯಾವುದೇ ವ್ಯಕ್ತಿ, ಯಾವುದೇ ಸ್ಥಾನದಲ್ಲಿರಬಹುದು. ಕೆಂಪು ದೀಪದ ವಾಹನದಲ್ಲಿ ಸಂಚರಿಸಲ್ಲ.

PM Narendra Modi on Mann Ki Baat: Have to remove VIP culture from minds of select few

* ವಾಹನಗಳ ಮೇಲೆ ಇನ್ನು ಕೆಂಪು ದೀಪಗಳು ಕಾಣಲ್ಲ. ಇದರ ಜತೆಗೆ ನಮ್ಮ ಮನಸುಗಳು ಶುದ್ಧವಾಗಬೇಕು.
* ರಾಮಾನುಜಾಚಾರ್ಯರು ಸಾಮಾಜಿಕ ಪಿಡುಗಗಳ ವಿರುದ್ಧ ಮಾಡಿದ ಹೋರಾಟದ ಬಗ್ಗೆ ಬಹಳ ಮಂದಿಗೆ ತಿಳಿದಿಲ್ಲ
* ನವಭಾರತದ ನಮ್ಮ ಕಲ್ಪನೆಯಲ್ಲಿ ವಿಐಪಿ ಜಾಗದಲ್ಲಿ ಇಪಿಐ (ಎವರಿ ಪರ್ಸನ್ ಇಂಪಾರ್ಟೆಂಟ್) ಅಂದರೆ ಪ್ರತಿ ವ್ಯಕ್ತಿಯು ಮುಖ್ಯ ಎಂಬ ನಿಲುವಿಗೆ ಪ್ರಾಶಸ್ತ್ಯ[ನಿಮ್ಮೊಂದಿಗೆ ಹೋರಾಡಿ, ಇತರರೊಂದಿಗೆ ಸ್ಪರ್ಧಿಸಬೇಡಿ: ಮೋದಿ]
* ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಸಂಭ್ರಮದಲ್ಲಿದ್ದೇವೆ. ಅವರಿಂದ ಸ್ಫೂರ್ತಿ ಪಡೆಯಬೇಕು.
* ಮೇ 1ರ ಕಾರ್ಮಿಕರ ದಿನದಂದು ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸಿದ ಡಾ ಬಾಬಾಸಾಹೇಬ್ ಅಂಬೇಡ್ಕರ್ ರ ಪಾತ್ರವನ್ನು ಸ್ಮರಿಸೋಣ

PM Narendra Modi on Mann Ki Baat: Have to remove VIP culture from minds of select few

* ಇಂದು ಶ್ರಮಿಕ ವರ್ಗಕ್ಕೆ ಸಿಕ್ಕಿರುವ ಗೌರವ ಹಾಗೂ ಅನುಕೂಲಕ್ಕಾಗಿ ನಾವು ಬಾಬಾ ಸಾಹೇಬ್ ರಿಗೆ ಧನ್ಯವಾದ ಹೇಳಬೇಕು
* ರಾಮಾನುಜಾಚಾರ್ಯರ ಸ್ಮರಣೆಯ ನಿಮಿತ್ತ ಭಾರತ ಸರಕಾರ ಮೇ 1ರಂದು ಅಂಚೆ ಚೀಟಿ ಬಿಡುಗಡೆ ಮಾಡಲಿದೆ.
* ಈ ಸಂದರ್ಭದಲ್ಲಿ 12ನೇ ಶತಮಾನದ ಮಹಾನ್ ಸಂತ, ಕರ್ನಾಟಕದ ಸಮಾಜ ಸುಧಾರಣೆ ಹರಿಕಾರ ಜಗದ್ಗುರು ಬಸವೇಶ್ವರ ಅವರನ್ನು ಸ್ಮರಿಸ್ತೀನಿ.
* 12ನೇ ಶತಮಾನದಲ್ಲಿ ಆ ಮಹನೀಯರು ತಮ್ಮ ವಿಚಾರಧಾರೆಯಿಂದ ಕಾರ್ಮಿಕರು ಹಾಗೂ ಶ್ರಮಿಕ ವರ್ಗದ ಮೇಲೆ ಪ್ರಭಾವ ಬೀರಿದ್ದರು

PM Narendra Modi on Mann Ki Baat: Have to remove VIP culture from minds of select few

* ಎಲ್ಲರ ಜತೆಗೆ, ಎಲ್ಲರ ಅಭಿವೃದ್ಧಿ ಎಂಬ ಮಾತು ಬರೀ ಭಾರತಕ್ಕಷ್ಟೇ ಅನ್ವಯಿಸುವುದಲ್ಲ, ಜಾಗತಿಕವಾಗಿ ಈ ಮಾತು ಸಲ್ಲುತ್ತದೆ
* ಎಲ್ಲರ ಜತೆಗೆ, ಎಲ್ಲರ ಅಭಿವೃದ್ಧಿ ಎಂಬ ಗುರಿಯೊಂದಿಗೆ ಭಾರತವು ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿದೆ.
* ಮೇ 5ರಂದು ಭಾರತವು ದಕ್ಷಿಣ ಏಷ್ಯಾದ ಉಪಗ್ರಹಗಳ ಉಡಾವಣೆ ಮಾಡಲಿದೆ.
* ಉಪಗ್ರಹಗಳ ಸಾಮರ್ಥ್ಯ ಮತ್ತು ಅವುಗಳು ಒದಗಿಸುವ ಸೌಕರ್ಯವು ದೀರ್ಘಾವಧಿಯಲ್ಲಿ ದಕ್ಷಿಣ ಏಷ್ಯಾ ಆರ್ಥಿಕ ಮತ್ತು ಅಭಿವೃದ್ಧಿಯ ಆದ್ಯತೆಯಾಗಲಿದೆ
* ದಕ್ಷಿಣ ಏಷ್ಯಾದ ದೇಶಗಳೊಂದಿಗೆ ಭಾರತ ಸಹಕಾರ ವೃದ್ಧಿ ಮಾಡಿಕೊಳ್ಳಲು ಹೆಜ್ಜೆ ಇಡುತ್ತಿದೆ. ನಮ್ಮ ಜತೆ ಕೈ ಜೋಡಿಸಲು ಎಲ್ಲ ದಕ್ಷಿಣ ಏಷ್ಯಾ ದೇಶಗಳನ್ನು ಸ್ವಾಗತಿಸುತ್ತೇನೆ
* ತಡೆಯಲು ಸಾಧ್ಯವೇ ಇಲ್ಲದಂಥ ಬಿಸಿಲಿದೆ. ನಿಮ್ಮ ಹಾಗೂ ನಿಮ್ಮ ಪ್ರೀತಿ ಪಾತ್ರರ ಕಾಳಜಿ ಮಾಡಿ, ನಿಮಗೆಲ್ಲ ಶುಭವಾಗಲಿ
English summary
Prime Minister Narendra Modi today spoke about the need for replacing VIP with EPI (Every person is important) during his Mann ki Baat address on April 30th, 2017 (Sunday).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X