ಮುಸ್ಲಿಂ ಪ್ರಿಯಕರನೊಂದಿಗೆ ಹಿಂದೂ ಯುವತಿ ಸಹಜೀವನ: ಕೋರ್ಟ್ ಅಸ್ತು
ಇನ್ನೂ 21 ವರ್ಷ ತುಂಬದ ಮುಸ್ಲಿಂ ಪ್ರಿಯಕರನೊಂದಿಗೆ 19 ವರ್ಷದ ವಯಸ್ಕ ಹಿಂದು ಯುವತಿ ಸಹಜೀವನ ನಡೆಸಬಹುದು ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.
ಅಹಮದಾಬದ್, ನವೆಂಬರ್, 29: 19 ವರ್ಷದ ಹಿಂದೂ ಯುವತಿ ಮದುವೆಗೆ ಕನಿಷ್ಠ ವರ್ಷ ತುಂಬದ ತನ್ನ 20 ವರ್ಷದ ಅಪ್ರಾಪ್ತ ಮುಸ್ಲಿಂ ಪ್ರಿಯಕರನೊಂದಿಗೆ ಸಹಜೀವನ ನಡೆಸಬಹುದು ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.
ಗುಜರಾತಿನ ಬನಸ್ಕಾಂತ ಜಿಲ್ಲೆಯ ಧನೇರಾ ಎಂಬ ಕುಗ್ರಾಮವೊಂದರ ಮುಸ್ಲಿಂ ಯುವಕ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿಗಳಾದ ಅಕಿಲ್ ಖುರೇಷಿ ಮತ್ತು ಬಿರೇನ್ ವೈಷ್ಣವ್ ಅವರ ಪೀಠ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

"ಮದುವೆ ಮತ್ತು ಅದರ ಪಾವಿತ್ರ್ಯತೆ ಕಾಪಾಡುವ ಸಲುವಾಗಿ ನಮ್ಮ ಸಮಾಜ ಹಲವು ನಿರ್ಬಂಧಗಳನ್ನು ವಿಧಿಸಿದೆ.
ಸಹ ಜೀವನವೆಂಬುದು ಹೆಚ್ಚಾಗಿ ಮೆಟ್ರೋ ನಗರಗಳಲ್ಲಿ, ನಗರ ಪ್ರದೇಶಗಳಲ್ಲಿ ಮಾತ್ರ ನಾವು ಕಾಣುತ್ತೇವೆ. ಆದರೆ ಹಳ್ಳಿಯಂತಹ ಪ್ರದೇಶಗಳಲ್ಲಿ ಈಗಲೂ ಸಾಮಾಜಿಕ ಕಟ್ಟುಪಾಡುಗಳು ಹಲವು ಇವೆ.
ನಾವು ನಮ್ಮ ಸಂಪ್ರದಾಯಗಳನ್ನು ಗೌರವಿಸಬೇಕು ಆದರೆ, ಸಂಪ್ರಾದಾಯ, ಆಚಾರಗಳ ಹೆಸರಲ್ಲಿ ವ್ಯಕ್ತಿಯ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ" ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಯುವತಿ ಸಹ "ನನ್ನ ಪೋಷಕರೊಂದಿಗೆ ಇರಲು ನನಗೆ ಇಷ್ಟವಿಲ್ಲ. ನನ್ನ ಗೆಳೆಯನಿಗೆ 21 ವರ್ಷ ತುಂಬಿದ ನಂತರ ಅವನ ಜತೆ ಮದುವೆಯಾಗುವುದಾಗಿ" ಕೋರ್ಟ್ ಗೆ ತಿಳಿಸಿದ್ದಾಳೆ.
ಯುವತಿಯ ಹೇಳಿಕೆ ಆಧರಿಸಿ ತೀರ್ಪು ನೀಡಿದ ಕೋರ್ಟ್ "ಯುವತಿ ತನ್ನ ಮುಸ್ಲಿಂ ಪ್ರಿಯಕರನೊಂದಿಗೆ ಸಹಜೀವನ ನಡೆಸಬಹುದು ಆದರೆ ಆತ 21 ವರ್ಷ ತುಂಬುವ ವರೆಗೂ ಯುವತಿಯನ್ನು ಮದುವೆಯಾಗುವಂತಿಲ್ಲ" ಎಂದು ಸೂಚಿಸಿದೆ.
ಅಷ್ಟೇ ಅಲ್ಲದೆ 21 ವರ್ಷ ತುಂಬಿದ ನಂತರವಷ್ಟೇ ಯುವತಿಯನ್ನು ಮದುವೆಯಾಗಬೇಕೆಂದು ಯುವಕನಿಂದ ಕೋರ್ಟ್ ಮುಚ್ಚಳಿಗೆ ಪತ್ರ ಬರೆಸಿಕೊಂಡಿದೆ.
ಪ್ರಕರಣದ ವಿವರ:
ಮುಸ್ಲಿಂ ಸಮುದಾಯದ ಯುವಕ ಮತ್ತು ಹಿಂದೂ ಸಮುದಾಯ ಯುವತಿ ಒಟ್ಟಿಗೆ ಶಾಲೆಯಲ್ಲಿ ಓದಿಕೊಂಡಿದ್ದರು. ಮತ್ತು ಶಾಲಾ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು.
ಇಬ್ಬರೂ ಮದುವೆಯಾಗಬೇಕೆಂದು ನಿರ್ಧರಿಸಿದ್ದರು, ಯುವತಿ ತನ್ನ ಧರ್ಮವನ್ನೂ ಸಹ ಬದಲಾಯಿಸಿಕೊಳ್ಳಲು ತೀರ್ಮಾನಿಸಿದ್ದಳು, ಆದರೆ ಯುವತಿಗೆ 19 ವರ್ಷ ವಯಸ್ಸಾಗಿದ್ದರೂ ಯುವಕನಿಗೆ ಇನ್ನೂ 20 ವರ್ಷ ಮಾತ್ರ ಆಗಿತ್ತು.
ಭಾರತ ವಿವಾಹ ಕಾಯ್ದೆ ಪ್ರಕಾರ ಯುವಕನಿಗೆ ಇನ್ನೂ ಕನಿಷ್ಠ ವಯಸ್ಸು ಪೂರ್ಣಗೊಳ್ಳದೇ ಇರುವುದರಿಂದ ಇಬ್ಬರೂ ಕಳೆದ ಜುಲೈನಿಂದ ಸಹಜೀವನ ನಡೆಸುತ್ತಿದ್ದರು.
ಇದರಿಂದ ಕುಪಿತಗೊಂಡಿದ್ದ ಯುವತಿಯ ಪೋಷಕರು ಯುವತಿಯನ್ನು ಯುವಕನ ಮನೆಯಿಂದ ಬಲವಂತವಾಗಿ ಕರೆದುಕೊಂಡು ಹೋಗಿ ಗೃಹ ಬಂಧನದಲ್ಲಿ ಇಟ್ಟಿದ್ದರು.
ಯುವತಿಯನ್ನು ಬಲವಂತವಾಗಿ ಗೃಹಬಂಧನದಲ್ಲಿ ಇಟ್ಟಿದ್ದು, ಕೂಡಲೇ ಯುವತಿಯನ್ನು ಕೋರ್ಟ್ ನಲ್ಲಿ ಹಾಜರು ಪಡಿಸಿಸುವಂತೆ ಯುವಕ ಹೇಬಿಯಾ ಕಾರ್ಪಸ್ ಅರ್ಜಿ ಸಲ್ಲಿಸಿದ್ದ.
ಇದರಂತೆ ಯುವತಿಯನ್ನು ಕೋರ್ಟ್ ನಲ್ಲಿ ಹಾಜರು ಪಡಿಸಬೇಕೆಂದು ಕೋರ್ಟ್ ಬನಸ್ಕಾಂತ ಪೊಲೀಸರಿಗೆ ಸೂಚಿಸಿತ್ತು.
-
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications