ಕಡ್ಲೇಕಾಯಿ ಪರಿಷೆಯಿಂದ ದೆಹಲಿ ಆಜಾದ್ ಪುರ್ ಮಂಡಿವರೆಗೆ ನೋಟು ನೋಟ
ಬೆಂಗಳೂರಿನ ಬಸವನಗುಡಿ ರಸ್ತೆಯಲ್ಲಿ ಜಾತ್ರೆ ವಾತಾವರಣ. ದೊಡ್ಡ ಗಣೇಶನ ದರ್ಶನಕ್ಕೆ ಜನವೋಜನ. ಅದರ ಜತೆಗೆ ವಿವಿಧ ವಸ್ತುಗಳ ಖರೀದಿಯಲ್ಲೂ ತಲ್ಲೀನರಾದ ಮಂದಿ ಅದೆಷ್ಟೋ. ಒಟ್ಟಿನಲ್ಲಿ ಕಳೆದ ಶನಿವಾರದಿಂದ ಈಚೆಗೆ ಪರಿಷೆಯಲ್ಲಿ ಮಾರಾಟಗಾರರಿಗೆ ಸುಗ್ಗಿ ಕಾಲ. ಯಾವ ನೋಟು ರದ್ದು ವಿಚಾರವೂ ಈ ಮಾರಾಟಗಾರರ ವ್ಯಾಪಾರದ ಭರಾಟೆ ತಗ್ಗಿಸಲಿಲ್ಲ.
ಆದರೆ ದೆಹಲಿಯ ಆಜಾದ್ ಪುರ್ ಮಂಡಿಯಲ್ಲಿ ಕ್ಷೌರಿಕರ ಆದಾಯವೇ ಕುಸಿದುಹೋಗಿದೆಯಂತೆ. ಎಲ್ಲ ನೋಟು ರದ್ದು ಪರಿಣಾಮ ಅಂತಿದ್ದಾರೆ. ಇನ್ನು ಚಿಕ್ಕಮಗಳೂರಿನಲ್ಲಿ ಆಕ್ರೋಶ್ ದಿವಸ್ ಪ್ರತಿಯಾಗಿ ಸಂಭ್ರಮ ದಿವಸ ಅದ್ಧೂರಿಯಾಗಿ ಆಚರಿಸಲಾಗಿದೆ. ಬ್ಯಾಂಕ್ ನೌಕರರಿಗೆ ಸನ್ಮಾನ, ಸಿಹಿ-ರೋಜಾ ಹೂವು ವಿತರಣೆ... ಓಹ್, ಒಟ್ಟಿನಲ್ಲಿ ಯಶಸ್ವಿ ಸಂಭ್ರಮ ದಿವಸ ಆಚರಣೆ.
ಕೋಲ್ಕತ್ತಾದಲ್ಲಿ ಆಕ್ರೋಶ್ ದಿವಸ್ ದಲ್ಲಿ ಕಾಂಗ್ರೆಸ್ ನಿಂದ ಭಾರೀ ಆಕ್ರೋಶ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಕೃತಿಗೆ ಬೆಂಕಿ ಹೊತ್ತಿಸಿ, ಕೋಪ ವ್ಯಕ್ತಪಡಿಸಿದ್ದಾರೆ ಆ ಪಕ್ಷದ ಕಾರ್ಯಕರ್ತರು. ಮದುರೈನಲ್ಲಿ ಸೆರೆ ಹಿಡಿದ ಶಂಕಿತ ಉಗ್ರರ ಸಂಬಂಧಿಕರಿಗೆ ದಿಗ್ಭ್ರಮೆ. ನಮ್ಮ ಮನೆ ಹುಡುಗರು ಹಾಗಲ್ಲ, ಒಳ್ಳೆಯವರು ಅನ್ನೋದು ಅವರ ಸಮಜಾಯಿಷಿ. ಎಲ್ಲವನ್ನೂ ಫೋಟೋ ಸಹಿತ ನೋಡಿ-ಓದಿ.

ಕಾರ್ತೀಕದ ಕಡ್ಲೇಕಾಯಿ ಪರಿಷೆ
ಬೆಂಗಳೂರಿನ ಬಸವನಗುಡಿಯಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ನಡೆದ ವಾರ್ಷಿಕ ಕಡ್ಲೇಕಾಯಿ ಪರಿಷೆಯಲ್ಲಿ ಪಾಲ್ಗೊಂಡ ಹೆಣ್ಣುಮಕ್ಕಳ ಸಂಭ್ರಮ ಕಂಡಿದ್ದು ಹೀಗೆ.

ಸಾಲು ಖರೀದಿ
ಕಾರ್ತೀಕ ಮಾಸದ ಕಡೇ ಸೋಮವಾರದ ದಿನ ಪ್ರತಿ ವರ್ಷ ಆಯೋಜಿಸುವ ಬಸವನಗುಡಿಯ ಪರಿಷೆ ವೇಳೆ ಕಡ್ಲೇಕಾಯಿ ಖರೀದಿಯಲ್ಲಿ ತೊಡಗಿದ್ದವರು ಸಾಲಾಗಿ ಫೊಟೋ ಕಣ್ಣಿಗೆ ಸೆರೆ ಸಿಕ್ಕರು.

ಕ್ಷೌರಕ್ಕೂ ನೋಟು ರದ್ದು ಹೊಡೆತ
ನವದೆಹಲಿಯ ಆಜಾದ್ ಪುರ್ ನ ಮಂಡಿಯಲ್ಲಿ ನೋಟು ರದ್ದು ಪರಿಣಾಮ ಕ್ಷೌರಿಕರ ಮೇಲೂ ಆಗಿದೆ. ವ್ಯಾಪಾರವಿಲ್ಲದೆ ಕಳೆಗುಂದಿರುವ ಮಂಡಿಯಲ್ಲಿ ಮೂರು ಮತ್ತೊಂದು ಜನ ಇದ್ದರು.

ಸಂಭ್ರಮ ದಿವಸದ ಸನ್ಮಾನ
ಬ್ಯಾಂಕ್ ನೌಕರರನ್ನು ಗೌರವಿಸಿ ಹಾಗೂ ಸಿಹಿ, ರೋಜಾ ಹೂವು ಹಂಚುವ ಮೂಲಕ ಚಿಕ್ಕಮಗಳೂರಿನಲ್ಲಿ ಸೋಮವಾರ ಸಂಭ್ರಮ ದಿವಸದ ಅಚರಿಸಲಾಯಿತು.

ಮದುರೈ ಕೋರ್ಟ್ ಹೊರಗೆ
ಮದುರೈನಲ್ಲಿ ಸೋಮವಾರ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶಂಕಿತ ಅಲ್ ಕೈದಾ ಉಗ್ರರನ್ನು ವಶಕ್ಕೆ ಪಡೆದರು. ಬಂಧಿತರ ಸಂಬಂಧಿಕರು, ಬೆಂಬಲಿಗರು ಕೋರ್ಟ್ ಹೊರಭಾಗದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ

ಆರೋಪಿ ಪೊಲೀಸರ ವಶಕ್ಕೆ
ನಭಾ ಜೈಲು ದಾಳಿ ಮಾಡಿದವರ ಪೈಕಿ ಒಬ್ಬನಾದ ಪರ್ಮಿಂದರ್ ಸಿಂಗ್ ನನ್ನು ಉತ್ತರಪ್ರದೇಶದ ಶಮ್ಲಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದರು.

ಕಾಂಗ್ರೆಸ್ ಆಕ್ರೋಶ
ಕೋಲ್ಕತ್ತಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಕೃತಿ ದಹಿಸಿ ಅಕ್ರೋಶ ವ್ಯಕ್ತಪಡಿಸಿದರು.
-
ಉಪಚುನಾವಣಾ ಅಖಾಡ ಸಜ್ಜು: ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಮತದಾನ; ಇಂದು ಮನೆ ಮನೆ ಮತಯಾಚನೆ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ












Click it and Unblock the Notifications