ಹೇಳದೆ ಕೇಳದೆ ರಜಾ ಹಾಕಿದ 59 'ಕೋಬ್ರಾ'ಗಳಿಗೆ ಕಾದಿದೆ ಶಿಕ್ಷೆ
ತರಬೇತಿ ಮುಗಿಸಿ ಡ್ಯೂಟಿಗೆ ಬಂದು ಹಾಜರಾಗಬೇಕಾಗಿದ್ದ 'ಕೋಬ್ರಾ' ದಳದ 59 ಕಮಾಂಡೋಗಳು ನಾಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸದಂತೆ ಸಿ.ಆರ್.ಪಿ.ಎಫ್ ಸ್ಪಷ್ಟನೆ ನೀಡಿದೆ. ಕಮಾಂಡೋಗಳು ಮಾಹಿತಿ ನೀಡದೆ ಅವರ ಇಷ್ಟಾನುಸಾರ ರಜೆ ತೆಗೆದುಕೊಂಡಿದ್ದರು.
ಪಾಟ್ನಾ, ಫೆಬ್ರವರಿ 6: ತರಬೇತಿ ಮುಗಿಸಿ ಡ್ಯೂಟಿಗೆ ಬಂದು ಹಾಜರಾಗಬೇಕಾಗಿದ್ದ 'ಕೋಬ್ರಾ' ದಳದ 59 ಕಮಾಂಡೋಗಳು ನಾಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸದಂತೆ ಸಿ.ಆರ್.ಪಿ.ಎಫ್ ಸ್ಪಷ್ಟನೆ ನೀಡಿದೆ. ಕಮಾಂಡೋಗಳು ಮಾಹಿತಿ ನೀಡದೆ ಅವರ ಇಷ್ಟಾನುಸಾರ ರಜೆ ತೆಗೆದುಕೊಂಡಿದ್ದರು. ಅವರೆಲ್ಲರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದೆ.
ಕೇಂದ್ರ ಮೀಸಲು ಪಡೆ (ಸಿ.ಆರ್.ಪಿ.ಎಫ್) ಅಧೀನದಲ್ಲಿ ಬರುವ ನಕ್ಸಲ್ ನಿಗ್ರಹ ಪಡೆ 'ಕೋಬ್ರಾ'ದ ಕಾಮಾಂಡೋಗಳು ಇವರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತರಬೇತಿಯಲ್ಲಿದ್ದ ಕಮಾಂಡೋಗಳು ಬಿಹಾರದ ನಕ್ಸಲ್ ಪೀಡಿತ ಗಯಾ ಪ್ರದೇಶದಲ್ಲಿರುವ '205 ಕೋಬ್ರಾ ಘಟಕ'ದಲ್ಲಿ ಸೋಮವಾರ ಮುಂಜಾನೆ ಬಂದು ಡ್ಯೂಟಿಗೆ ಸೇರಿಕೊಳ್ಳಬೇಕಾಗಿತ್ತು. ಅದು ಅವರೆಲ್ಲರ ಮೊದಲ ಡ್ಯೂಟಿಯಾಗಿತ್ತು. ಆದರೆ ಕಾಂಮಾಂಡೋಗಳಿದ್ದ ರೈಲು ಬಂದಿದ್ದರೆ, 59 ಕಮಾಂಡೋಗಳು ಮಾತ್ರ ನಾಪತ್ತೆಯಾಗಿದ್ದಾರೆ. [ಅಗತ್ಯಬಿದ್ದರೆ ಮತ್ತೆ ಸರ್ಜಿಕಲ್ ದಾಳಿ: ಸೇನೆ ಸ್ಪಷ್ಟನೆ]

ಜಮ್ಮುವಿನಿಂದ ತಮ್ಮ ತರಬೇತಿ ಮುಗಿಸಿ ಕಮಾಂಡೋಗಳು ಪಾಟ್ನಾದತ್ತ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಭಾನುವಾರ ರಾತ್ರಿಯಿಂದ ಅವರೆಲ್ಲಾ ನಾಪತ್ತೆಯಾಗಿದ್ದಾರೆ ಎಂದು ಸಿ.ಆರ್.ಪಿ.ಎಫ್ ಅಧಿಕಾರಿಗಳು ಹೇಳಿದ್ದಾರೆ. ತಾವು ರೈಲಿನಿಂದ ಇಳಿದು ಹೋಗುವ ಬಗ್ಗೆ ಯಾವ ಮೇಲಾಧಿಕಾರಿಗೂ ಕಮಾಂಡೋಗಳು ಮಾಹಿತಿ ನೀಡಿಲ್ಲ. ಕಮಾಂಡೋಗಳ ಬಳಿ ಯಾವುದೇ ಶಸ್ತ್ತಾಸ್ತ್ರಗಳು ಇರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. [ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ]
ಕಮಾಂಡೋಗಳ ನಾಪತ್ತೆ ಬಗ್ಗೆ ಸಿ.ಆರ್.ಪಿ.ಎಫ್ ಆತಂಕಕ್ಕೆ ಒಳಗಾಗಿದ್ದು ನವದೆಹಲಿಯಲ್ಲಿರುವ ಕೇಂದ್ರ ಕಚೇರಿಯಿಂದ ಪೂರ್ಣ ಮಟ್ಟದ ತನಿಖೆಗೆ ಆದೇಶ ನೀಡಲಾಗಿತ್ತು. ತನಿಖೆ ವೇಳೆ ತಮ್ಮ ಮೇಲಾಧಿಕಾರಿಗಳಿಗೂ ಮಾಹಿತಿ ನೀಡದೆ ಕಮಾಂಡೋಗಳು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಕಮಾಂಡೋಗಳನ್ನು ಅಂದುಕೊಂಡಿದ್ದಕ್ಕಿಂತ ಕೆಲವು ದಿನ ಮೊದಲೇ ಬಿಹಾರದ ಗಯಾಕ್ಕೆ ಕರೆಸಿಕೊಳ್ಳಲಾಗಿತ್ತು. ನಿಗದಿತ ದಿನಕ್ಕಿಂತ ಬೇಗ ಬಂದಿದ್ದರಿಂದ ಕಮಾಂಡೋಗಳು ಕುಟುಂಬಸ್ಥರನ್ನು ನೋಡಲು ಎರಡು ದಿನ ರಜೆ ತೆಗೆದುಕೊಂಡಿದ್ದರು ಎಂದು ಸಿ.ಆರ್.ಪಿ.ಎಫ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗೆರಿಲ್ಲಾ ತಂತ್ರದಲ್ಲಿ ನಕ್ಸಲರನ್ನು ಮತ್ತು ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರನ್ನು ಸದೆ ಬಡಿಯಲು ಸಿ.ಆರ್.ಪಿ.ಎಫ್ ಅಡಿಯಲ್ಲಿ ಕೋಬ್ರಾ ಕಮಾಂಡೋ ತಂಡವನ್ನು 2009ರಲ್ಲಿ ರಚನೆ ಮಾಡಲಾಗಿತ್ತು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications