'ಉತ್ತರಾಖಂಡದಲ್ಲಿ ಬಂಡೆ ಉರುಳೋದು, ತೊಂದರೆ ಆಗೋದು ಮಾಮೂಲು'
ಉತ್ತರಾಖಂಡದ ವಿಷ್ಣು ಪ್ರಯಾಗ್ ನಲ್ಲಿ ಹೆದ್ದಾರಿ ಮಧ್ಯೆ ಬಂಡೆ ಉರುಳಿ, ಪ್ರವಾಸಿಗರಿಗೆ ತೊಂದರೆಯಾಗಿತ್ತು ಎಂಬ ಸುದ್ದಿಯನ್ನು ಓದಿರುತ್ತೀರಿ. ಅಲ್ಲಿನ ಪ್ರವಾಸ ಹೇಗಿರುತ್ತದೆ ಎಂಬ ಬಗ್ಗೆ ಉದ್ಯಮಿ ವೆಂಕಟೇಶ್ ಕುಲಕರ್ಣಿ ಅನುಭವ ಹಂಚಿಕೊಂಡಿದ್ದಾರೆ
ಬೆಂಗಳೂರು, ಮೇ 20: ಉತ್ತರಾಖಂಡದ ವಿಷ್ಣು ಪ್ರಯಾಗದಲ್ಲಿ ರಸ್ತೆ ಮಧ್ಯೆ ಬಂಡೆ ಉರುಳಿಬಿದ್ದು ಹದಿನೈದು ಸಾವಿರ ಮಂದಿ ಅಲ್ಲಿಂದ ಬರಲಾರದೆ ತೊಂದರೆ ಅನುಭವಿಸಿದ್ದಾರೆ ಎಂಬ ಸುದ್ದಿಯನ್ನು ನೀವೆಲ್ಲ ಓದಿರುತ್ತೀರಿ. ಚಾರ್ ಧಾಮ್ ಎಂದು ಹೆಸರಾದ ಸ್ಥಳದಲ್ಲಿನ ಅನುಭವದ ಬಗ್ಗೆ ಉದ್ಯಮಿಯಾದ-ಅಥಣಿ ಮೂಲದ ಬೆಂಗಳೂರು ವಾಸಿ ವೆಂಕಟೇಶ್ ಆರ್ ಕುಲಕರ್ಣಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇನ್ನು ಅವರೇ ಹಂಚಿಕೊಂಡ ಅನುಭವದ ಮಾತುಗಳು ಇಲ್ಲಿವೆ. "ಅಲ್ಲಿ ಈ ರೀತಿ ಬಂಡೆಗಳು ಉರುಳುವುದು ತುಂಬ ಸಾಮಾನ್ಯವಾದ ಸಂಗತಿ. ಆದರೆ ಅಲ್ಲಿ ಮಿಲಿಟರಿಯವರು ಹೆಚ್ಚೆಂದರೆ ನಾಲ್ಕು ತಾಸಿನಲ್ಲಿ ಸರಿ ಮಾಡಿಬಿಡ್ತಾರೆ. ನಾನು ಆರು ವರ್ಷಗಳಿಂದ ಎಂಟು ಸಲ ಹೋಗಿದ್ದೀನಿ. ಈ ತಿಂಗಳು 11, 12 ಕೂಡ ಅಲ್ಲೇ ಇದ್ದೆ. ನನ್ನ ಪ್ರಕಾರ ಹೇಳುವುದಾದರೆ ನಿನ್ನೆ ಆದ ಘಟನೆ ತೀರಾ ಹೆದರುವಂಥದ್ದು ಅಲ್ಲವೇ ಅಲ್ಲ.[ಉತ್ತರಾಖಂಡದಲ್ಲಿ ಭಾರಿ ಕುಸಿತ, ಅಪಾಯದಲ್ಲಿ 15,000ಜನ]

"ಕಳೆದ ವರ್ಷ ಮೇಘ ಸ್ಫೋಟ ಆಗಿತ್ತಲ್ಲ, ಅದು ತೀರಾ ಗಂಭೀರವಾದದ್ದು. ಇನ್ನು ಇತ್ತ್ತೀಚೆಗೆ ಹರಿದ್ವಾರದಿಂದ ಬದರಿಗೆ ತುಂಬ ಒಳ್ಳೆ ರಸ್ತೆ ಮಾಡಿದ್ದಾರೆ. ನೀವು ನಂಬಲಿಕ್ಕಿಲ್ಲ. ಸದಾ ನೀರು ಹರಿಯುವಲ್ಲಿ ಕೂಡ ಶ್ರಮ ಹಾಕಿ ಅದ್ಭುತವಾದ ಡಾಂಬರು ರಸ್ತೆ ಮಾಡಿದ್ದಾರೆ. ಮುಂಚೆ ಈ ಮುನ್ನೂರು ಕಿಲೋಮೀಟರ್ ರಸ್ತೆಯಲ್ಲಿ ಸಾಗುವುದಕ್ಕೆ ಹನ್ನೆರಡು ತಾಸು ಆಗ್ತಿತ್ತು. ಈಗ ಹತ್ತು ತಾಸು ಸಾಕು.[ಆರು ತಿಂಗಳ ನಂತರ ಬಾಗಿಲು ತೆರೆದ ಹರಿದ್ವಾರ್ ಗೆ ಮೋದಿ ಭೇಟಿ]

"ಹರಿದ್ವಾರದಲ್ಲಿರುವ ಪೇಜಾವರ ಮಠದ ಮ್ಯಾನೇಜರ್ ಪವನ್ ಆಚಾರ್ ಜತೆಗೆ ಈ ಬಗ್ಗೆ ಮಾತನಾಡಿದೆ. ಅವರು ಕೂಡ ಇದೇ ಮಾತನ್ನು ಹೇಳಿದರು. ಅಲ್ಲಿ ಇಂಡೋ ಟಿಬೆಟನ್ ಸೈನಿಕರು ತುಂಬ ಉತ್ಸಾಹದಿಂದ ಕೆಲಸ ಮಾಡ್ತಾರೆ. ಆದ್ದರಿಂದ ಇಂಥ ಘಟನೆಗಳು ಅಲ್ಲಿನವರಿಗಾಗಲೀ ಅಥವಾ ನಿರಂತರವಾಗಿ ಅಲ್ಲಿಗೆ ಹೋಗುವವರಿಗಾಗಲೀ ಗಾಬರಿ ಮಾಡಲ್ಲ" ಎಂದರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications