ಜನ ಪ್ರಾಣ ಕಳ್ಕೋತಿರೋದನ್ನ ನೋಡ್ಕೊಂಡು ಸುಮ್ನೆ ಇರೋದಕ್ಕಾಗಲ್ಲ! ಫುಟ್ ಪಾತ್ ತೆರವಿಗೆ ಸಹಕರಿಸಿ ಎಂದ KBG
ಬೆಂಗಳೂರಿನ ಪಾದಚಾರಿ ಮಾರ್ಗಗಳು ಮತ್ತೆ ಮುಕ್ತವಾಗುತ್ತಿವೆ,ಜುಲೈ 1 ರಿಂದ 10 ರವರೆಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಗರದ ಒಟ್ಟು 1,000 ಕಿಲೋಮೀಟರ್ ರಸ್ತೆ ಜಾಲದಲ್ಲಿ 'ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ' ಹಮ್ಮಿಕೊಂಡಿದೆ — ನಗರದ ಎಲ್ಲಾ ಐದೂ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ ಅಂತ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸಂಭವಿಸುವ ಪ್ರತಿ 1,000 ರಸ್ತೆ ಅಪಘಾತದ ಸಾವುಗಳಲ್ಲಿ ಶೇ. 30 ರಷ್ಟು ಪಾದಚಾರಿಗಳೇ ಆಗಿರುತ್ತಾರೆ. ಪಾದಚಾರಿ ಮಾರ್ಗದಲ್ಲಿ ಸುರಕ್ಷಿತವಾಗಿ ನಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕೇ ಹೊರತು, ಸವಲತ್ತಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Video Published On: Thursday, Jul 02, 2026, 12:26 [IST]


Click it and Unblock the Notifications