Ernakulam-Bengaluru Vande Bharat: ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ರೈಲು ಓಡೋದು ಕಷ್ಟ ಬಿಡಿ!
ತಿರುವನಂತಪುರಂ, ಏಪ್ರಿಲ್. 15: ಕೇರಳದ ಎರ್ನಾಕುಲಂ ಮತ್ತು ಬೆಂಗಳೂರು ನಡುವೆ ಓಡಬೇಕಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಹಳಿಗೆ ಇಳಿಯುವುದಿಲ್ಲ ಎನ್ನುವಂತೆ ಕಾಣುತ್ತಿದೆ. ಏಕೆಂದರೆ, ಕೇರಳಕ್ಕೆ ಮಂಜೂರಾಗಿರುವ ಮೂರನೇ ವಂದೇ ಭಾರತ್ ರೈಲು ಹಲವು ಕಾರಣಗಳಿಂದ ಫ್ಲ್ಯಾಗ್ಆಫ್ ಆಗಲು ಪರದಾಡುತ್ತಿದೆ.
ಎರ್ನಾಕುಲಂ - ಬೆಂಗಳೂರು ಮಾರ್ಗದಲ್ಲಿ ಸಂಚರಿಸಬೇಕಿದ್ದ ಈ ರೈಲು ಎರ್ನಾಕುಲಂ ಸೌತ್ ನಿಲ್ದಾಣದಲ್ಲಿ ಸರಿಯಾದ ಸೌಲಭ್ಯಗಳಿಲ್ಲದಿರುವುದರಿಂದ ನೂರಾರು ಪ್ರಯಾಣಿಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ವಂದೇ ಭಾರತ್ನ ನಿರ್ವಹಣಾ ಕಾರ್ಯಗಳನ್ನು ನಡೆಸಲು ವಿದ್ಯುದ್ದೀಕರಿಸಿದ ಪಿಟ್ಲೈನ್ಗಳ ಅಗತ್ಯವಿದೆ. ವಿದ್ಯುತ್ ಇಲಾಖೆ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳಿಸಿದ್ದರೂ ವಿದ್ಯುದ್ದೀಕರಣ ಪ್ರಕ್ರಿಯೆಯಲ್ಲಿ ಲೋಪದೋಷದಿಂದ ಸುರಕ್ಷತಾ ಪ್ರಮಾಣ ಪತ್ರ ನೀಡಿಲ್ಲ.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!
ವಿದ್ಯುದ್ದೀಕರಣ ಪ್ರಕ್ರಿಯೆಯ ಲೋಪದೋಷವಲ್ಲದೆ, ಮಾರ್ಷಲಿಂಗ್ ಯಾರ್ಡ್ನಲ್ಲಿ ಮೂರನೇ ಪಿಟ್ಲೈನ್ನ ಹತ್ತಿರ ಒಳಚರಂಡಿ ನಿರ್ಮಾಣವೂ ಪೂರ್ಣಗೊಂಡಿಲ್ಲ. ಮೇಲಾಗಿ, ಎರ್ನಾಕುಲಂ ಸೌತ್ ರೈಲ್ವೇ ನಿಲ್ದಾಣದಲ್ಲಿ ಬೆಳಗಿನ ಜನದಟ್ಟಣೆಯ ಸಮಯದಲ್ಲಿ ಉದ್ಯೋಗಿಗಳ ಕೊರತೆ ಮತ್ತು ಪ್ಲಾಟ್ಫಾರ್ಮ್ಗಳ ಲಭ್ಯತೆಯ ಕೊರತೆಯೂ ರೈಲು ಓಡಿಸಲು ಅಡಚಣೆಯಾಗಿದೆ.
ಈ ವಂದೇ ಭಾರತ್ ಎಕ್ಸ್ಪ್ರೆಸ್ಗೆ ನೀಡಲಾಗಿರುವ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನಿಂದ ರಾತ್ರಿ 11.30 ಕ್ಕೆ ಹೊರಡುವ ರೈಲು ಬೆಳಗ್ಗೆ 8 ಗಂಟೆಗೆ ಎರ್ನಾಕುಲಂ ತಲುಪಲಿದೆ. ಅದೇ ರೈಲು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ಹಿಂತಿರುಗಬಹುದು. ಆದರೆ, ಇಲ್ಲಿ ಸಮಸ್ಯೆಯೆಂದರೆ ಬೆಳಗ್ಗೆ 8 ರಿಂದ ಮಧ್ಯಾಹ್ನ 1ರ ವರೆಗೆ ವಂದೇ ಭಾರತ್ ರೈಲಿಗೆ ಪ್ಲಾಟ್ಫಾರ್ಮ್ ಕಲ್ಪಿಸುವುದು ಅಸಾಧ್ಯ ಎಂದು ಇಲಾಖೆ ಹೇಳಿದೆ. ಅಲ್ಲದೆ, ಬೆಳಗ್ಗೆ ಬರುವ ಮಂಗಳಾ ಎಕ್ಸ್ಪ್ರೆಸ್ನಂತಹ ರೈಲುಗಳು ಪ್ಲಾಟ್ಫಾರ್ಮ್ನಿಂದ ಚಲಿಸುವುದು ವಿಳಂಬವಾಗುತ್ತದೆ.
ಇನ್ನು. ರೈಲುಗಳ ಜನರೇಟರ್ ಕಾರ್ಗಳಲ್ಲಿ ಇಂಧನ ತುಂಬುವ ಸೌಲಭ್ಯವನ್ನು ದಕ್ಷಿಣ ರೈಲ್ವೆ ನಿಲ್ದಾಣದ ಮೂರು ಮತ್ತು ನಾಲ್ಕನೇ ಪ್ಲಾಟ್ಫಾರ್ಮ್ಗಳ ನಡುವೆ ಅಳವಡಿಸಲಾಗಿದೆ. ಜನರೇಟರ್ ಕಾರ್ ಅನ್ನು ಕೊನೆಯಲ್ಲಿ ಲಗತ್ತಿಸಿರುವುದರಿಂದ, ರೈಲನ್ನು ಸ್ವಲ್ಪಮಟ್ಟಿಗೆ ಮುಂದಕ್ಕೆ ಚಲಿಸಿದರೆ ಮಾತ್ರ ಇಂಧನವನ್ನು ತುಂಬಬಹುದು. ಆದರೆ, ಇದು ಇತರ ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರುತ್ತದೆ. ಎಲ್ಲಾ ಪ್ಲಾಟ್ಫಾರ್ಮ್ಗಳಲ್ಲಿ ಇಂಧನ ಬಿಂದುಗಳನ್ನು ಸ್ಥಾಪಿಸಲು ವಿಭಾಗವು ನಿಯಮಿತವಾಗಿ ಬರೆಯುತ್ತಿದ್ದರೂ ಸಹ, ದಕ್ಷಿಣ ರೈಲ್ವೆ ತನ್ನ ನಿರಾಸಕ್ತಿ ಮುಂದುವರೆಸಿದೆ.

ಈ ಸಮಸ್ಯೆಗಳಿಂದಾಗಿ, ಎರ್ನಾಕುಲಂಗೆ ಮಂಜೂರು ಮಾಡಲಾಗಿದ್ದ ಮೊದಲ ವಂದೇ ಭಾರತ್ ರೈಲು ಸೆಟ್ ಅನ್ನು ಇತ್ತೀಚೆಗೆ ಮೈಸೂರು-ಚೆನ್ನೈ ಮಾರ್ಗದಲ್ಲಿ ಕಾರ್ಯನಿರ್ವಹಿಸಲು ವರ್ಗಾಯಿಸಲಾಗಿದೆ. ಇದೀಗ, ಇತ್ತೀಚಿನ ವಂದೇ ಭಾರತ್ ಕೂಡ ಕಳೆದುಕೊಳ್ಳುವ ಆತಂಕದಲ್ಲಿ ಎರ್ನಾಕುಲಂ ಪ್ರಯಾಣಿಕರು ಇದ್ದಾರೆ. ಎರ್ನಾಕುಲಂ - ಕಾರೈಕಲ್ ಎಕ್ಸ್ಪ್ರೆಸ್ ಅನ್ನು ಉತ್ತರ ರೈಲು ನಿಲ್ದಾಣದ ಮೂಲಕ ಕೊಟ್ಟಾಯಂಗೆ ವಿಸ್ತರಿಸಿದರೆ ಎರ್ನಾಕುಲಂ ಸೌತ್ ರೈಲು ನಿಲ್ದಾಣದಲ್ಲಿ ಜನಸಂದಣಿಯನ್ನು ನಿಯಂತ್ರಿಸಬಹುದು.











Click it and Unblock the Notifications