ಸಿಂಚನ ಸಾಹಿತ್ಯ ಸ್ಪರ್ಧೆ 2014ರ ಫಲಿತಾಂಶ
ಸಿಂಚನ ಸಾಹಿತ್ಯ ಸ್ಪರ್ಧೆ 2014ರ ಫಲಿತಾಂಶ ಈಗ ಪ್ರಕಟವಾಗಿದೆ. ಕನ್ನಡ ಸಂಘ (ಸಿಂಗಪುರ) ಪ್ರತಿ ತಿಂಗಳು ಹೊರತರುವ 'ಸಿಂಚನ' ಮಾಸ ಪತ್ರಿಕೆ ನಡೆಸಿದ ಮೂರನೇ ವರ್ಷದ ಸಾಹಿತ್ಯ ಸ್ಪರ್ಧೆಗೆ ಪ್ರಪಂಚದ ನಾನಾ ಮೂಲೆಗಳಿಂದ ವಿಶ್ವಕನ್ನಡಿಗರ ಸಣ್ಣ ಕಥೆ ಮತ್ತು ಕವನಗಳು ಹರಿದು ಬಂದಿದ್ದವು. ಸ್ಪರ್ಧೆಯಲ್ಲಿ ಹದಿಹರೆಯದ ಉತ್ಸಾಹಿ ಬರಹಗಾರರಲ್ಲದೇ ನುರಿತ ಮತ್ತು ಹಿರಿಯ ಸಾಹಿತಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಬೆಳಗಾವಿ ಜಿಲ್ಲೆಯ ಹಾರೋಗೇರಿಯ 45ರ ಹರೆಯದ ಲೇಖಕ ಕಲ್ಲೇಶ್ ಕುಂಬಾರ್ ಅವರು ಸಿಹಿಕಬ್ಬು ಬೆಳೆಯುವ ರೈತನ ಕಹಿ ಬದುಕನ್ನು ಯಥಾವತ್ತಾಗಿ ಚಿತ್ರಿಸಿದ ಕಥೆ 'ಒಳಗಣ ಜ್ಯೋತಿ' ಕಥಾ ಸ್ಪರ್ಧೆಯ ಮೊದಲನೇ ಬಹುಮಾನ ಪಡೆದು ಕೊಂಡಿದೆ. 2013ರ 'ಸಿಂಚನ ಸಾಹಿತ್ಯ ಸ್ಪರ್ಧೆ'ಯ ಕವನ ವಿಭಾಗದಲ್ಲಿ ಎರಡನೇ ಬಹುಮಾನ ಗಳಿಸಿದ್ದ ಅಣ್ಣಪ್ಪ ಆಚಾರ್ಯ ಅವರ 'ಭಿಕ್ಷೆ' ಕಥೆಗೆ ಎರಡನೇ ಬಹುಮಾನ ತೊರೆತಿದ್ದು, ಹೆಣ್ಣೊಬ್ಬಳ ಅಸಹಾಯಕತೆಯನ್ನು ವಿವರಿಸುವ ಸಂತೋಷಕುಮಾರ್ ಮೆಹೆಂದಾಳೆ ಅವರ ಕಥೆ 'ಹುತ್ತ'ಕ್ಕೆ ಮೂರನೆಯ ಬಹುಮಾನ ದೊರೆತಿದೆ.

ಕವನ ವಿಭಾಗದಲ್ಲಿ, ಯುವ ಬರಹಗಾರ, ಮೊಬೈಲ್ ನಲ್ಲಿ ಕನ್ನಡ ಕೀ ಬೋರ್ಡ್ ಬಳಸಿ ಪ್ರಾಯೋಗಿಕ ಕಿರು ಕಾದಂಬರಿ ಬರೆದಿರುವ ಮತ್ತು ಕನ್ನಡ ಕವಿತೆಗಳ ಆಂಡ್ರಾಯ್ಡ್ App ರೂಪಿಸಿ ಸಾಹಿತ್ಯ ವಲಯದಲ್ಲಿ ಸಾಕಷ್ಟು ಆಸಕ್ತಿ ಹುಟ್ಟಿಸಿರುವ ವಿದ್ಯಾಶಂಕರ ಹರಪನಹಳ್ಳಿ ಅವರ 'ಕವಿತೆ ಕೆಟ್ಟರೆ ಅಡ್ಡಿಯಿಲ್ಲ' ಕವನಕ್ಕೆ ಮೊದಲನೆಯ ಬಹುಮಾನ ದೊರೆತಿದೆ. 2013ರ ಕವನ ಸ್ಪರ್ಧೆಯಲ್ಲಿ ಮೊದಲನೆಯ ಬಹುಮಾನ ಗಳಿಸಿದ್ದ ವಿಜಯ್ ಹೂಗಾರ್ ಅವರ ಕವನ 'ಐ.ಟಿ. ಆಫೀಸ್'ಗೆ ಎರಡನೆ ಬಹುಮಾನ ಬಂದಿದೆ. ಲೇಖಕಿ ಮೆಹಬೂಬಿ ಎಂ ಶೇಖ್ ಅವರ 'ಆತ್ಮ ಸಂಗಾತಕ್ಕೆ ನೀ ಎನಗುಂಟು' ಕವನ ಮತ್ತು ರಘು ಮುಳಿಯ ಅವರ 'ಮಂಗಳಕ್ಕೆ ಹೋಗೋಣ' ಕವನ ಮೂರನೆಯ ಬಹುಮಾನ ಗಳಿಸಿವೆ. [ರೆಕ್ಕೆ ಬಡಿದುಕೊಂಡು ಬಂದ ಚಿಟ್ಟೆ ಸೃಷ್ಟಿಸಿದ ಸೋಜಿಗ]
ತೀರ್ಪುಗಾರರು : ಈ ಬಾರಿಯ ಸಿಂಚನ ಸಾಹಿತ್ಯ ಸ್ಪರ್ಧೆಯ ಕಥಾ ವಿಭಾಗದ ತೀರ್ಪುಗಾರರಾಗಿದ್ದವರು ದಂತವೈದ್ಯೆ ಮತ್ತು ಬರಹಗಾರ್ತಿ ಡಾ॥ ಕೆ.ಎಸ್.ಚೈತ್ರ ಮತ್ತು ಕವನ ವಿಭಾಗದ ತೀರ್ಪುಗಾರರಾಗಿದ್ದವರು ಇಂಡಿಯನ್ ಎಕ್ಸಪ್ರೆಸ್ ಗ್ರೂಪ್ ನ 'ಸಖಿ' ಪಾಕ್ಷಿಕದ ಸಂಪಾದಕರಾದ ಡಾ॥ವೆಂಕಟೇಶ್ವರ ರಾವ್.
ವಿಜೇತರೆಲ್ಲರಿಗೂ ಕನ್ನಡ ಸಂಘ(ಸಿಂಗಪುರ)ದ ಅಭಿನಂದನೆಗಳು.
ಗಿರೀಶ್ ಜಮದಗ್ನಿ, ಪ್ರಧಾನ ಸಂಪಾದಕ, ಸಿಂಚನ ಸಂಪಾದಕ ಸಮಿತಿ, ಕನ್ನಡ ಸಂಘ(ಸಿಂಗಪುರ)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications