ಕಾಲದೊಂದಿಗೆ ಓಡುವ ಕೈವಾಚು ಪುರಾಣ

ಅನೇಕ ಗಡಿಯಾರಗಳನ್ನು ನೋಡಿದ ನಂತರ ಈ ಗಡಿಯಾರವನ್ನು ನಾನು ಆರಿಸಿಕೊಂಡಾಗ ನನ್ನ ಹೆಂಡತಿಗೆ ಅದು ಇಷ್ಟವಾಗಿಲ್ಲ ಎಂಬುದು ಅವಳ ಮುಖಭಾವದಿಂದ ತಿಳಿಯಿತು. ಮೈ ಮೇಲಿನ ಬಟ್ಟೆಗಳಿಂದ ಹಿಡಿದು ಹಾಕಿಕೊಳ್ಳುವ ಪಾದರಕ್ಷೆಗಳವರೆಗೆ ಸ್ವಲ್ಪವಾದರೂ ಆಡಂಬರ ಕಾಣಬೇಕು ಎಂಬ ಅಭಿರುಚಿಯನ್ನು ಹೊಂದಿದ ಅವಳಿಗೆ ನನ್ನ ಈ ಸರ್ವ ಸಾಧಾರಣ ವಾಚು ಈ ಅನಭಿರುಚಿಯ ಪರಾಕಾಷ್ಠೆ! ಅವಳಿಗೆ ತದ್ವಿರುದ್ಧವಾಗಿ ನನ್ನ ಸ್ವಭಾವ. ಅಲ್ಲದೇ ನನ್ನದೇ ಹಠ ಸಾಧಿಸುವ ಸ್ವಭಾವ ಬೇರೆ. ಆದುದರಿಂದ ಈ ವಾಚು ನನ್ನ ಜೊತೆ ಮನೆಗೆ ಬಂದಿತು ಮತ್ತು ಕಳೆದ ಏಳು ವರ್ಷಗಳಿಂದ ನನ್ನ ನಿರಂತರ ಸಾಥಿಯಾಗಿದೆ.
ಈ ನಡುವೆ ನಾನೊಂದು ಕೆಲಸವನ್ನು ಬಿಟ್ಟು ಮತ್ತೊಂದೆಡೆ ಸೇರಿಕೊಂಡಾಗ, ನನ್ನನ್ನು ಬೀಳ್ಕೊಡುವ ಸಂದರ್ಭದಲ್ಲಿ ನನ್ನ ಹಿಂದಿನ ಕಂಪನಿಯ ನನ್ನ ಸಹೋದ್ಯೋಗಿಗಳು ನನಗೊಂದು ವಾಚನ್ನು ಕಾಣಿಕೆಯಾಗಿ ನೀಡಿದರು. ಈ ವಾಚು ಕಪ್ಪು ಡಯಲಿನಲ್ಲಿ ಬಿಳಿ ಮುಳ್ಳುಗಳನ್ನು ಹೊಂದಿದ ಮತ್ತು ನಂಬರುಗಳ ಬದಲಿಗೆ ಹರಳುಗಳನ್ನು ಹೊಂದಿದ, ಸ್ವಲ್ಪ ಹೈಫೈ ತರಹದ ಕೈಗಡಿಯಾರವಾಗಿತ್ತು. ಈ ಕೈಗಡಿಯಾರವನ್ನು ನೋಡಿದ ನನ್ನ ಪತ್ನಿ, "ನೋಡಿ, ನಿಮ್ಮ ವಾಚನ್ನು ನೋಡಿದ ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮ ಮೇಲೆ ಅನುಕಂಪವಾಗಿ ಈ ಹೊಸ ಸುಂದರ ವಾಚನ್ನು ಕೊಡಿಸಿದ್ದಾರೆ" ಎಂದಳು. ಆದರೂ ನಾನು ನನ್ನ ಹಳೆಯ ವಾಚಿಗೇ ಜೋತು ಬಿದ್ದಾಗ ಅವಳಿಗೆ ನನ್ನ ಮೇಲೆ ಅಸಾಧ್ಯ ಕೋಪ.
ಅಂತಹ ನನ್ನ ನೆಚ್ಚಿನ ಈ ಕೈಗಡಿಯಾರ ನಿಧಾನವಾಗಿ ಹಿಂದೆ ಬೀಳತೊಡಗಿದಾಗ, ಎಲ್ಲರಿಗಿಂತ ಹೆಚ್ಚು ಸಂತೋಷವಾಗಿದ್ದು ನನ್ನ ಪತ್ನಿಗೆ. ಅವಳು ಒಂದು ಹೊಸ ವಾಚನ್ನು ಕೊಂಡುಕೊಳ್ಳಿ ಎಂದು ನನ್ನ ದುಂಬಾಲು ಬಿದ್ದಳು. ಈ ವಾಚನ್ನೇ ಸ್ವಲ್ಪ ರಿಪೇರಿ ಮಾಡಿಸಿದರೆ ಇನ್ನೂ ನಾಲ್ಕೈದು ವರ್ಷ ಓಡುವದು ಗ್ಯಾರಂಟಿ ಎಂದು ನಾನು ಉತ್ತರಕೊಟ್ಟಾಗ ಇದು ಹೋಪ್ಲೆಸ್ ಕೇಸು ಎಂದುಕೊಂಡು ಸುಮ್ಮನಾದಳು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications