ಕಾಲದೊಂದಿಗೆ ಓಡುವ ಕೈವಾಚು ಪುರಾಣ

ಅನೇಕ ಗಡಿಯಾರಗಳನ್ನು ನೋಡಿದ ನಂತರ ಈ ಗಡಿಯಾರವನ್ನು ನಾನು ಆರಿಸಿಕೊಂಡಾಗ ನನ್ನ ಹೆಂಡತಿಗೆ ಅದು ಇಷ್ಟವಾಗಿಲ್ಲ ಎಂಬುದು ಅವಳ ಮುಖಭಾವದಿಂದ ತಿಳಿಯಿತು. ಮೈ ಮೇಲಿನ ಬಟ್ಟೆಗಳಿಂದ ಹಿಡಿದು ಹಾಕಿಕೊಳ್ಳುವ ಪಾದರಕ್ಷೆಗಳವರೆಗೆ ಸ್ವಲ್ಪವಾದರೂ ಆಡಂಬರ ಕಾಣಬೇಕು ಎಂಬ ಅಭಿರುಚಿಯನ್ನು ಹೊಂದಿದ ಅವಳಿಗೆ ನನ್ನ ಈ ಸರ್ವ ಸಾಧಾರಣ ವಾಚು ಈ ಅನಭಿರುಚಿಯ ಪರಾಕಾಷ್ಠೆ! ಅವಳಿಗೆ ತದ್ವಿರುದ್ಧವಾಗಿ ನನ್ನ ಸ್ವಭಾವ. ಅಲ್ಲದೇ ನನ್ನದೇ ಹಠ ಸಾಧಿಸುವ ಸ್ವಭಾವ ಬೇರೆ. ಆದುದರಿಂದ ಈ ವಾಚು ನನ್ನ ಜೊತೆ ಮನೆಗೆ ಬಂದಿತು ಮತ್ತು ಕಳೆದ ಏಳು ವರ್ಷಗಳಿಂದ ನನ್ನ ನಿರಂತರ ಸಾಥಿಯಾಗಿದೆ.
ಈ ನಡುವೆ ನಾನೊಂದು ಕೆಲಸವನ್ನು ಬಿಟ್ಟು ಮತ್ತೊಂದೆಡೆ ಸೇರಿಕೊಂಡಾಗ, ನನ್ನನ್ನು ಬೀಳ್ಕೊಡುವ ಸಂದರ್ಭದಲ್ಲಿ ನನ್ನ ಹಿಂದಿನ ಕಂಪನಿಯ ನನ್ನ ಸಹೋದ್ಯೋಗಿಗಳು ನನಗೊಂದು ವಾಚನ್ನು ಕಾಣಿಕೆಯಾಗಿ ನೀಡಿದರು. ಈ ವಾಚು ಕಪ್ಪು ಡಯಲಿನಲ್ಲಿ ಬಿಳಿ ಮುಳ್ಳುಗಳನ್ನು ಹೊಂದಿದ ಮತ್ತು ನಂಬರುಗಳ ಬದಲಿಗೆ ಹರಳುಗಳನ್ನು ಹೊಂದಿದ, ಸ್ವಲ್ಪ ಹೈಫೈ ತರಹದ ಕೈಗಡಿಯಾರವಾಗಿತ್ತು. ಈ ಕೈಗಡಿಯಾರವನ್ನು ನೋಡಿದ ನನ್ನ ಪತ್ನಿ, "ನೋಡಿ, ನಿಮ್ಮ ವಾಚನ್ನು ನೋಡಿದ ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮ ಮೇಲೆ ಅನುಕಂಪವಾಗಿ ಈ ಹೊಸ ಸುಂದರ ವಾಚನ್ನು ಕೊಡಿಸಿದ್ದಾರೆ" ಎಂದಳು. ಆದರೂ ನಾನು ನನ್ನ ಹಳೆಯ ವಾಚಿಗೇ ಜೋತು ಬಿದ್ದಾಗ ಅವಳಿಗೆ ನನ್ನ ಮೇಲೆ ಅಸಾಧ್ಯ ಕೋಪ.
ಅಂತಹ ನನ್ನ ನೆಚ್ಚಿನ ಈ ಕೈಗಡಿಯಾರ ನಿಧಾನವಾಗಿ ಹಿಂದೆ ಬೀಳತೊಡಗಿದಾಗ, ಎಲ್ಲರಿಗಿಂತ ಹೆಚ್ಚು ಸಂತೋಷವಾಗಿದ್ದು ನನ್ನ ಪತ್ನಿಗೆ. ಅವಳು ಒಂದು ಹೊಸ ವಾಚನ್ನು ಕೊಂಡುಕೊಳ್ಳಿ ಎಂದು ನನ್ನ ದುಂಬಾಲು ಬಿದ್ದಳು. ಈ ವಾಚನ್ನೇ ಸ್ವಲ್ಪ ರಿಪೇರಿ ಮಾಡಿಸಿದರೆ ಇನ್ನೂ ನಾಲ್ಕೈದು ವರ್ಷ ಓಡುವದು ಗ್ಯಾರಂಟಿ ಎಂದು ನಾನು ಉತ್ತರಕೊಟ್ಟಾಗ ಇದು ಹೋಪ್ಲೆಸ್ ಕೇಸು ಎಂದುಕೊಂಡು ಸುಮ್ಮನಾದಳು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications