ಹಿಂದಿಗೆ ಬಂದ ವಿಂಡೋಸ್ ಎಕ್ಸ್ಪಿ ಕನ್ನಡಕ್ಕೆ ಬಾರದೆ?
ಕನ್ನಡಿಗರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಇಚ್ಛಾಶಕ್ತಿ ಮತ್ತು ತಾಕತ್ತಿದ್ದಲ್ಲಿ ಕನ್ನಡವೂ ಕಂಪ್ಯೂಟರ್ನ ಒಂದು ಭಾಷೆಯಾಗುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ. ಬಹಳ ದಿನಗಳಿಂದ ಕನ್ನಡ, ಕಂಪ್ಯೂಟರ್, ಫಾಂಟುಗಳು, ಕನ್ನಡದಲ್ಲಿ ವಿಂಡೋಸ್ ಎಕ್ಪಿ ಆಪರೇಟಿಂಗ್ ಸಿಸ್ಟಂ, ಇತ್ಯಾದಿಗಳ ಬಗ್ಗೆ ನಡೆಯುತ್ತಿದ್ದ ಚರ್ಚೆ ಮತ್ತು ಅಗತ್ಯಗಳು ಒಂದು ತಾರ್ಕಿಕ ಘಟ್ಟ ಮುಟ್ಟುವ ಸಾಧ್ಯತೆ ಇದೆ.
ಸೆಪ್ಟೆಂಬರ್ 29 ರ ಬುಧವಾರ, ಮೈಕ್ರೋಸಾಫ್ಟ್ ಕಂಪನಿ ತನ್ನ ಪ್ರಕಟಣೆಯಲ್ಲಿ ಹಿಂದಿ ಭಾಷೆಯಲ್ಲಿ ವಿಂಡೋಸ್ ಎಕ್ಸ್ಪಿ ಆಪರೇಟಿಂಗ್ ಸಿಸ್ಟಮ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಹೆಚ್.ಪಿ, ವಿಪ್ರೋ, ಹೆಚ್.ಸಿ.ಎಲ್ ನಂತಹ ಕಂಪನಿಗಳು ಈ ಯೋಜನೆಗೆ ಬೆನ್ನೆಲುಬಾಗಿ ಸಹಕರಿಸಿದ್ದು 2005ರ ಮೊದಲ ದಿನಗಳಲ್ಲಿ ಈ ಆವೃತ್ತಿ ಹೊಸ ಕಂಪ್ಯೂಟರ್ಗಳಲ್ಲಿ ಪ್ರಾಯೋಗಿಕವಾಗಿ ದೊರಕಲಿವೆ.
ಮೈಕ್ರೋಸಾಫ್ಟ್ ಇದರ ಬೆಲೆಯನ್ನು ತಿಳಿಸಿಲ್ಲವಾದರೂ ತಜ್ಞರು ಸುಮಾರು 36 ಡಾಲರುಗಳಿರಬಹುದು ಎಂದು ಅಂದಾಜು ಮಾಡಿದ್ದಾರೆ. ಇದು ಇಂಗ್ಲಿಷ್ ಆವೃತ್ತಿಯ ಬೆಲೆಯ ಶೇ. 20 ಅಷ್ಟೆ . ಈ ರೀತಿಯ ಸರಳೀಕೃತ ಆವೃತ್ತಿಗಳನ್ನು ಈ ಬೆಲೆಯ ಸುಮಾರಿನಲ್ಲಿಯೇ ಮೈಕ್ರೋಸಾಫ್ಟ್ ರಷ್ಯ, ಇಂಡೋನೇಷ್ಯ, ಮಲೇಷಿಯ ಮತ್ತು ಥಾಯ್ ಭಾಷೆಗಳಲ್ಲಿ ಸಿದ್ಧಪಡಿಸಿದೆ.
ಇದೇ ಸಮಯದಲ್ಲಿ ಭಾರತದ ಇತರ ಭಾಷೆಗಳಲ್ಲಿ ಹೊರತರುವ ಬಗ್ಗೆ ಅಂತಹ ಉತ್ಸಾಹಕರ ಸುದ್ದಿ ಇಲ್ಲ. ಹಿಂದಿಯದರ ಯಶಸ್ಸಿನ ಮೇಲೆ ಬೇರೆ ಭಾರತೀಯ ಭಾಷೆಗಳ ಭವಿಷ್ಯ ನಿಂತ ಹಾಗಿದೆ. ಆದರೂ ಮೈಕ್ರೋಸಾಫ್ಟ್ನ ಬುದ್ಧಿವಂತ ಮ್ಯಾನೇಜರ್ ಒಬ್ಬ ಹೇಳುವುದು : ‘ಇದು ಭಾರತದಲ್ಲಿ ಪ್ರಸ್ತುತವಾಗಬೇಕಾದರೆ ಇನ್ನೂ ಹೆಚ್ಚಿನ ಭಾಷೆಗಳಲ್ಲಿ ಬೇಕು'. ಅಂದರೆ, ಬೇರೆ ಭಾಷೆಗಳಲ್ಲಿ ಬೇಡಿಕೆ ಬಂದರೆ ಅಲ್ಲೂ ತರುತ್ತೇವೆ ಎಂದರ್ಥವಲ್ಲವೆ?
ಸುಮಾರು ದಿನಗಳಿಂದ ಕರ್ನಾಟಕದ ವಿವಿಧ ವೇದಿಕೆಗಳಲ್ಲಿ ‘ಕಂಪ್ಯೂಟರ್ನಲ್ಲಿ ಕನ್ನಡ'ದ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ಇದು ಪ್ರಮುಖ ತಿರುವು. ಈಗ ಭಾರತದ ಭಾಷೆಗಳಲ್ಲಿಯೂ ಕಂಪ್ಯೂಟರ್ ಬರುತ್ತದೆ ಎನ್ನುವುದು ವಾಸ್ತವವಾಯಿತು. ಆದರೆ, ಈಗ ಎಂದಿನಂತೆ ಬೇಕಾಗಿರುವುದು ಆಡಳಿತಾಂಗದ ಇಚ್ಛಾಶಕ್ತಿ. ಆದಷ್ಟು ಬೇಗ ಸರ್ಕಾರ ಮತ್ತು ವಿವಿಧ ಕರ್ನಾಟಕದ ಸಂಸ್ಥೆಗಳು, ಉದ್ದಿಮೆಗಳು ಕನ್ನಡದಲ್ಲಿಯೂ ಆಪರೇಟಿಂಗ್ ಸಿಸ್ಟಂ ತರುವಂತೆ ಮೈಕ್ರೋಸಾಫ್ಟ್ನ ಮೇಲೆ ಒತ್ತಡ ತರಬೇಕು. ಹಿಂದಿಯದರ ಫಲಿತಾಂಶದ ಮೇಲೆ ನಮ್ಮ ಭವಿಷ್ಯ ನಿಲ್ಲಬಾರದು; ಬದಲು ಅದರ ಸಮಾನಾಂತರದಲ್ಲಿ ಬೆಳೆಯಬೇಕು.
ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಮೈಕ್ರೋಸಾಫ್ಟ್ನಿಂದ ಒಂದು ಪ್ರಕಟಣೆ ಹೊರಡಿಸಲು ಸಾಧ್ಯವಾದರೆ ಈ ವರ್ಷದ ನವೆಂಬರ್ ತಿಂಗಳಿನ ರಾಜ್ಯೋತ್ಸವಕ್ಕೆ ಕನ್ನಡ ಭಾಷೆಗೆ, ಕನ್ನಡ ಜನತೆಗೆ ಇದಕ್ಕಿಂತ ಉತ್ತಮ ಉಡುಗೊರೆ ಯಾವುದೂ ಇಲ್ಲ. ಇದು ಅಸಾಧ್ಯವೂ ಅಲ್ಲ. ಇದೇ ನಿಟ್ಟಿನಲ್ಲಿ ವಿಶ್ವದ ವಿವಿಧ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿರುವ ಪ್ರಭಾವಶಾಲಿ ಕನ್ನಡಿಗರು ಸಹ ಪರಿಣಾಮಕಾರಿಯಾಗಿ, ತ್ವರಿತವಾಗಿ ತಮ್ಮ ಪ್ರಭಾವ ಬೀರಬೇಕು.
-
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications