ಹಿಂದಿಗೆ ಬಂದ ವಿಂಡೋಸ್ ಎಕ್ಸ್ಪಿ ಕನ್ನಡಕ್ಕೆ ಬಾರದೆ?
ಕನ್ನಡಿಗರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಇಚ್ಛಾಶಕ್ತಿ ಮತ್ತು ತಾಕತ್ತಿದ್ದಲ್ಲಿ ಕನ್ನಡವೂ ಕಂಪ್ಯೂಟರ್ನ ಒಂದು ಭಾಷೆಯಾಗುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ. ಬಹಳ ದಿನಗಳಿಂದ ಕನ್ನಡ, ಕಂಪ್ಯೂಟರ್, ಫಾಂಟುಗಳು, ಕನ್ನಡದಲ್ಲಿ ವಿಂಡೋಸ್ ಎಕ್ಪಿ ಆಪರೇಟಿಂಗ್ ಸಿಸ್ಟಂ, ಇತ್ಯಾದಿಗಳ ಬಗ್ಗೆ ನಡೆಯುತ್ತಿದ್ದ ಚರ್ಚೆ ಮತ್ತು ಅಗತ್ಯಗಳು ಒಂದು ತಾರ್ಕಿಕ ಘಟ್ಟ ಮುಟ್ಟುವ ಸಾಧ್ಯತೆ ಇದೆ.
ಸೆಪ್ಟೆಂಬರ್ 29 ರ ಬುಧವಾರ, ಮೈಕ್ರೋಸಾಫ್ಟ್ ಕಂಪನಿ ತನ್ನ ಪ್ರಕಟಣೆಯಲ್ಲಿ ಹಿಂದಿ ಭಾಷೆಯಲ್ಲಿ ವಿಂಡೋಸ್ ಎಕ್ಸ್ಪಿ ಆಪರೇಟಿಂಗ್ ಸಿಸ್ಟಮ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಹೆಚ್.ಪಿ, ವಿಪ್ರೋ, ಹೆಚ್.ಸಿ.ಎಲ್ ನಂತಹ ಕಂಪನಿಗಳು ಈ ಯೋಜನೆಗೆ ಬೆನ್ನೆಲುಬಾಗಿ ಸಹಕರಿಸಿದ್ದು 2005ರ ಮೊದಲ ದಿನಗಳಲ್ಲಿ ಈ ಆವೃತ್ತಿ ಹೊಸ ಕಂಪ್ಯೂಟರ್ಗಳಲ್ಲಿ ಪ್ರಾಯೋಗಿಕವಾಗಿ ದೊರಕಲಿವೆ.
ಮೈಕ್ರೋಸಾಫ್ಟ್ ಇದರ ಬೆಲೆಯನ್ನು ತಿಳಿಸಿಲ್ಲವಾದರೂ ತಜ್ಞರು ಸುಮಾರು 36 ಡಾಲರುಗಳಿರಬಹುದು ಎಂದು ಅಂದಾಜು ಮಾಡಿದ್ದಾರೆ. ಇದು ಇಂಗ್ಲಿಷ್ ಆವೃತ್ತಿಯ ಬೆಲೆಯ ಶೇ. 20 ಅಷ್ಟೆ . ಈ ರೀತಿಯ ಸರಳೀಕೃತ ಆವೃತ್ತಿಗಳನ್ನು ಈ ಬೆಲೆಯ ಸುಮಾರಿನಲ್ಲಿಯೇ ಮೈಕ್ರೋಸಾಫ್ಟ್ ರಷ್ಯ, ಇಂಡೋನೇಷ್ಯ, ಮಲೇಷಿಯ ಮತ್ತು ಥಾಯ್ ಭಾಷೆಗಳಲ್ಲಿ ಸಿದ್ಧಪಡಿಸಿದೆ.
ಇದೇ ಸಮಯದಲ್ಲಿ ಭಾರತದ ಇತರ ಭಾಷೆಗಳಲ್ಲಿ ಹೊರತರುವ ಬಗ್ಗೆ ಅಂತಹ ಉತ್ಸಾಹಕರ ಸುದ್ದಿ ಇಲ್ಲ. ಹಿಂದಿಯದರ ಯಶಸ್ಸಿನ ಮೇಲೆ ಬೇರೆ ಭಾರತೀಯ ಭಾಷೆಗಳ ಭವಿಷ್ಯ ನಿಂತ ಹಾಗಿದೆ. ಆದರೂ ಮೈಕ್ರೋಸಾಫ್ಟ್ನ ಬುದ್ಧಿವಂತ ಮ್ಯಾನೇಜರ್ ಒಬ್ಬ ಹೇಳುವುದು : ‘ಇದು ಭಾರತದಲ್ಲಿ ಪ್ರಸ್ತುತವಾಗಬೇಕಾದರೆ ಇನ್ನೂ ಹೆಚ್ಚಿನ ಭಾಷೆಗಳಲ್ಲಿ ಬೇಕು'. ಅಂದರೆ, ಬೇರೆ ಭಾಷೆಗಳಲ್ಲಿ ಬೇಡಿಕೆ ಬಂದರೆ ಅಲ್ಲೂ ತರುತ್ತೇವೆ ಎಂದರ್ಥವಲ್ಲವೆ?
ಸುಮಾರು ದಿನಗಳಿಂದ ಕರ್ನಾಟಕದ ವಿವಿಧ ವೇದಿಕೆಗಳಲ್ಲಿ ‘ಕಂಪ್ಯೂಟರ್ನಲ್ಲಿ ಕನ್ನಡ'ದ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ಇದು ಪ್ರಮುಖ ತಿರುವು. ಈಗ ಭಾರತದ ಭಾಷೆಗಳಲ್ಲಿಯೂ ಕಂಪ್ಯೂಟರ್ ಬರುತ್ತದೆ ಎನ್ನುವುದು ವಾಸ್ತವವಾಯಿತು. ಆದರೆ, ಈಗ ಎಂದಿನಂತೆ ಬೇಕಾಗಿರುವುದು ಆಡಳಿತಾಂಗದ ಇಚ್ಛಾಶಕ್ತಿ. ಆದಷ್ಟು ಬೇಗ ಸರ್ಕಾರ ಮತ್ತು ವಿವಿಧ ಕರ್ನಾಟಕದ ಸಂಸ್ಥೆಗಳು, ಉದ್ದಿಮೆಗಳು ಕನ್ನಡದಲ್ಲಿಯೂ ಆಪರೇಟಿಂಗ್ ಸಿಸ್ಟಂ ತರುವಂತೆ ಮೈಕ್ರೋಸಾಫ್ಟ್ನ ಮೇಲೆ ಒತ್ತಡ ತರಬೇಕು. ಹಿಂದಿಯದರ ಫಲಿತಾಂಶದ ಮೇಲೆ ನಮ್ಮ ಭವಿಷ್ಯ ನಿಲ್ಲಬಾರದು; ಬದಲು ಅದರ ಸಮಾನಾಂತರದಲ್ಲಿ ಬೆಳೆಯಬೇಕು.
ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಮೈಕ್ರೋಸಾಫ್ಟ್ನಿಂದ ಒಂದು ಪ್ರಕಟಣೆ ಹೊರಡಿಸಲು ಸಾಧ್ಯವಾದರೆ ಈ ವರ್ಷದ ನವೆಂಬರ್ ತಿಂಗಳಿನ ರಾಜ್ಯೋತ್ಸವಕ್ಕೆ ಕನ್ನಡ ಭಾಷೆಗೆ, ಕನ್ನಡ ಜನತೆಗೆ ಇದಕ್ಕಿಂತ ಉತ್ತಮ ಉಡುಗೊರೆ ಯಾವುದೂ ಇಲ್ಲ. ಇದು ಅಸಾಧ್ಯವೂ ಅಲ್ಲ. ಇದೇ ನಿಟ್ಟಿನಲ್ಲಿ ವಿಶ್ವದ ವಿವಿಧ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿರುವ ಪ್ರಭಾವಶಾಲಿ ಕನ್ನಡಿಗರು ಸಹ ಪರಿಣಾಮಕಾರಿಯಾಗಿ, ತ್ವರಿತವಾಗಿ ತಮ್ಮ ಪ್ರಭಾವ ಬೀರಬೇಕು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications