ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ, ಆತಂಕದಲ್ಲಿ ಜನರು
ವಿಜಯಪುರ, ಅಕ್ಟೋಬರ್, 29: ವಿಜಯಪುರ ಜಿಲ್ಲೆಯಲ್ಲಿ ಭೂಕಂಪನದ ಆರ್ಭಟ ಇನ್ನು ನಿಂತಿಲ್ಲ. ಮತ್ತೆ ಭೂಕಂಪನ ಆಗುತ್ತಲೇ ಇದ್ದು, ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಪದೇ ಪದೇ ಭೂಕಂಪನದಿಂದ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ಶುಕ್ರವಾರ (ಅ.28) ರಾತ್ರಿ 9:47 ಮತ್ತು ಅ. 29ರ ಬೆಳಗ್ಗೆ 4:40ರ ಸುಮಾರಿಗೆ ವಿಜಯಪುರ ನಗರ, ಬಸವನಬಾಗೇವಾಡಿ ತಾಲೂಕಿನ ಮನಗೂಳಿ, ತಿಕೋಟಾ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ವಿಜಯಪುರ ನಗರದ ಗೋಳಗುಮ್ಮಟ ಹಾಗೂ ಇತರೆ ಭಾಗದಲ್ಲಿ ಭೂಕಂಪನದ ಅನುಭವವಾಗಿದೆ.
ಹುಮನಾಬಾದ್ ತಾಲೂಕಿನಲ್ಲಿ ಭೂಕಂಪನದ ಅನುಭವ; ಜನರಿಗೆ ಆತಂಕ
ನಿನ್ನೆ
ರಾತ್ರಿ
9:47ಕ್ಕೆ
ರಿಕ್ಟರ್
ಮಾಪಕದಲ್ಲಿ
2.8ರಷ್ಟು
ತೀವ್ರತೆ
ದಾಖಲಾಗಿದೆ.
ಮತ್ತೆ
ಬೆಳಗ್ಗೆ
4:40ರಲ್ಲಿ
2.8ರಷ್ಟು
ತೀವ್ರತೆಯ
ಭೂಕಂಪನ
ಸಂಭವಿಸಿದೆ.
ರಾತ್ರಿ
ಸಂಭವಿಸಿದ
ಭೂಕಂಪನ
ಕೇಂದ್ರ
ಬಿಂದು
ವಿಜಯಪುರ
ಜಿಲ್ಲೆ
ಬಸವನಬಾಗೇವಾಡಿ
ತಾಲೂಕಿನ
ಮನಗೂಳಿ
ಗ್ರಾಮದ
ಬಳಿ
ಕೇಂದ್ರೀಕೃತವಾಗಿತ್ತು.
2ನೇ
ಭೂಕಂಪನದ
ಕೇಂದ್ರ
ಬಿಂದು
ವಿಜಯಪುರ
ತಾಲೂಕಿನ
ಹಂಚಿನಾಳದಲ್ಲಿತ್ತು.
ರಾಜ್ಯ
ನೈಸರ್ಗಿಕ
ವಿಪತ್ತು
ನಿರ್ವಹಣಾ
ಕೇಂದ್ರವು
ಮತ್ತೆ
ಭೂಕಂಪನ
ಆಗಿರುವುದನ್ನು
ದೃಢಪಡಿಸಿದೆ.
ಸರದಿಯಲ್ಲಿ
ಸಂಭವಿಸುತ್ತಿರುವ
ಭೂಕಂಪನಗಳಿಂದ
ಜಿಲ್ಲೆಯ
ಜನರು
ಅಕ್ಷರಶಃ
ತತ್ತರಿಸಿ
ಹೋಗಿದ್ದಾರೆ.
ಜಿಲ್ಲೆಯಲ್ಲಿ
ಮತ್ತೆ
ಕಂಪಿಸಿದ
ಭೂಮಿ
ನಗರದಲ್ಲಿ
ಮತ್ತೆ
ಭಾರಿ
ಸ್ಫೋಟದ
ಸದ್ದಿನೊಂದಿಗೆ
ಭೂಮಿಯು
ಕಂಪಿಸಿದೆ.
ಕಂಪನದ
ತೀವ್ರತೆಯು
ರಿಕ್ಟರ್
ಮಾಪಕದಲ್ಲಿ
2.5ರಷ್ಟು
ದಾಖಲಾಗಿದೆ.
ವಿಜಯಪುರ
ಬಳಿಯ
ಅಲಿಯಾಬಾದ್
ಭೂಕಂಪನದ
ಕೇಂದ್ರವಾಗಿತ್ತು.
ವಿಜಯಪುರ
ನಗರದಲ್ಲಿ
ಶುಕ್ರವಾರ
ಬೆಳ್ಳಂಬೆಳಗ್ಗೆ
ಮೂರು
ಬಾರಿ
ಲಘು
ಭೂಕಂಪನವಾಗಿತ್ತು.
ಶುಕ್ರವಾರ
ಬೆಳಗ್ಗೆ
3:45,
3:46
ಹಾಗೂ
5:56ಕ್ಕೆ
ಭೂಕಂಪನ
ದಾಖಲಾಗಿತ್ತು.
ಭೂಕಂಪನದ
ತೀವ್ರತೆಯು
ರಿಕ್ಟರ್
ಮಾಪಕದಲ್ಲಿ
ಕ್ರಮವಾಗಿ
2.0,
1.9
ಮತ್ತು
3.2
ಎಂದು
ದಾಖಲಾಗಿತ್ತು.
ಜನರು
ನಿದ್ದೆಯಲ್ಲಿದ್ದ
ಕಾರಣ
ಹೆಚ್ಚಿನವರಿಗೆ
ಭೂಕಂಪನದ
ಅನುಭವ
ಅಷ್ಟಾಗಿ
ಆಗಿರಲಿಲ್ಲ.
ಆದರೆ
ಇತ್ತೀಚಿನ
ದಿನಗಳಲ್ಲಿ
ವಿಜಯಪುರದಲ್ಲಿ
ಸರದಿಯಲ್ಲಿ
ಭೂಕಂಪನದ
ಅನುಭವ
ಆಗುತ್ತಿದ್ದು,
ಜನರು
ಆತಂಕಕ್ಕೆ
ಒಳಗಾಗಿದ್ದಾರೆ.
ಈ
ಹಿಂದೆಯೂ
ಭೂಕಂಪನದ
ಅನುಭವ
ಐತಿಹಾಸಿಕ
ಜಿಲ್ಲೆಯಲ್ಲಿ
ಈ
ಹಿಂದೆಯೂ
ಭೂಮಿ
ಕಂಪಿಸಿದ್ದು
ಜನರು
ಆತಂಕಕ್ಕೆ
ಒಳಗಾಗಿದ್ದಾರು.
ನಗರದ
ಹಲವೆಡೆ
ಭೂಮಿ
ಕಂಪಿಸಿದ
ಅನುಭವವಾಗಿತ್ತು.
ಒಂದೇ
ರಾತ್ರಿಯಲ್ಲಿ
ಎರಡು
ಬಾರಿ
ಭೂಮಿ
ಕಂಪಿಸಿತ್ತು.
ನಗರದ
ರೈಲ್ವೆಸ್ಟೇಷನ್
ಏರಿಯಾ,
ರಂಭಾಪುರ
ಬಡಾವಣೆ,
ಬಸವೇಶ್ವರ
ನಗರ,
ಗೋಳಗುಮ್ಮಟ
ಏರಿಯಾ
ಸೇರಿದಂತೆ
ಹಲವೆಡೆ
ಭೂಮಿ
ಕಂಪಿಸಿದೆ.
ಪದೇ
ಪದೇ
ಭೂಮಿ
ಕಂಪಿಸುತ್ತಿದ್ದರಿಂದ
ಜನರಯ
ಆತಂಕಕ್ಕೆ
ಒಳಗಾಗಿದ್ದರು.