ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಅತ್ಯಾಚಾರ ಆರೋಪಿ ಕೊನೆಗೂ ಸೆರೆ

|
Google Oneindia Kannada News

ಉಡುಪಿ, ಏಪ್ರಿಲ್ 02:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಬಂಧಿತನಾಗಿದ್ದ ಆರೋಪಿ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಇದೀಗ ಮತ್ತೆ ಆರೋಪಿಯನ್ನು ಪುನಃ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾರ್ವಜನಿಕರ ಸಹಾಯದಿಂದ ಆರೋಪಿ ಹನುಮಂತ ಬಸಪ್ಪ ಕಂಬಳಿಯನ್ನು ಪೊಲೀಸರು ಪುನಃ ಬಂಧಿಸಿದ್ದಾರೆ.

ಮಣಿಪಾಲದಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆ: ಅತ್ಯಾಚಾರ ಶಂಕೆಮಣಿಪಾಲದಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆ: ಅತ್ಯಾಚಾರ ಶಂಕೆ

ಪ್ರಕರಣದ ವಿವರ
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 9 ರಂದು ನಡೆದ ಆಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹನುಮಂತ ಬಸಪ್ಪ ಕಂಬಳಿಯನ್ನು ಬಂಧಿಸಿದ್ದರು.

Udupi police was caught rape accused

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಅಲ್ಲಿಂದ ಹಿರಿಯಡ್ಕ ಸಬ್ ಜೈಲ್ ಗೆ ಕರೆದುಕೊಂಡು ಹೋಗುವಾಗ ಜೈಲಿನ ಸಮೀಪ ತಿರುವಿನಲ್ಲಿ ಪೊಲೀಸ್ ಜೀಪ್ ನಿಧಾನವಾಗುತ್ತಿದ್ದಂತೆ ಜೀಪ್ ನಿಂದು ಜಿಗಿದ ಹನುಮಂತ ಬಸಪ್ಪ ಪರಾರಿಯಾಗಿದ್ದ.

 ಮಂಗಳೂರಿನಲ್ಲಿ ವಿವಾಹಿತನಿಂದ ಯುವತಿಯ ಮೇಲೆ ಆತ್ಯಾಚಾರ ಮಂಗಳೂರಿನಲ್ಲಿ ವಿವಾಹಿತನಿಂದ ಯುವತಿಯ ಮೇಲೆ ಆತ್ಯಾಚಾರ

ಪೊಲೀಸ ಕಣ್ಣು ತಪ್ಪಿಸಿ ಪರಾರಿಯಾಗಿದ್ದ ಆರೋಪಿ ಹಿರಿಯಡಕದಲ್ಲಿರುವ ಸಬ್ ಜೈಲು ಬಳಿ ಹಾಡಿಯಲ್ಲಿ ಓಡಿ ಅವಿತುಕೊಂಡಿದ್ದ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ಅಲರ್ಟ್ ಘೋಷಣೆ ಮಾಡಿದ್ದರು. ನಾಕಬಂದಿ ನಡೆಸಿ ಆರೋಪಿ ಹನುಮಂತ ಬಸಪ್ಪ ಕಂಬಳಿ ತಪ್ಪಿಸಿಕೊಳ್ಳದಂತೆ ನಿಗಾ ವಹಿಸಿದ್ದರು.

ಆರೋಪಿಯ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿ ಶೋಧಕಾರ್ಯ ಆರಂಭಿಸಿದ್ದರು. ಈ ನಡುವೆ ಸಾರ್ವಜನಿಕರ ಸಹಾಯದಿಂದ ಪೊಲೀಸರು ಪೆರ್ಣಂಕಿಲ ಕಾಡಿನಲ್ಲಿ ಆರೋಪಿ ‌ಹನುಮಂತ ಬಸಪ್ಪ ಕಂಬಳಿಯನ್ನು ಬಂಧಿಸಿದ್ದಾರೆ.

English summary
Accused in Manipal rape and murder case who had escaped from the clutches of Udupi police was caught near Hiriadka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X