ಎಕ್ಸಾಂ ಹಾಲ್ ನಲ್ಲಿ ಜಸ್ಟ್ 'ವಾಚ್' ನೋಡಿದರೆ ಕಾಣುತ್ತಿತ್ತು ಉತ್ತರ
ಉಡುಪಿ, ನವೆಂಬರ್.27: ಪರೀಕ್ಷೆಗಳಲ್ಲಿ ಕಾಫಿ ಹೊಡೆಯೋದು ಅಂದ್ರೆ ಈಗಿನ ವಿದ್ಯಾರ್ಥಿಗಳಿಗೆ ಒಂದು ಚಾಲೆಂಜಿಂಗ್ ಜಾಬ್ ಆದಂತೆ ಕಾಣುತ್ತಿದೆ. ಶಿಕ್ಷಕರು ಚಾಪೆ ಕೆಳಗೆ ನುಸುಳಿದರೆ, ವಿದ್ಯಾರ್ಥಿಗಳು ರಂಗೋಲಿ ಕೆಳಗೆ ನುಸುಳುತ್ತಾರೆ. ಇಂಥದೊಂದು ಮಾತಿಗೆ ಈ ವಿದ್ಯಾರ್ಥಿಯೇ ಬೆಸ್ಟ್ ಎಕ್ಸಾಂಪಲ್.
ಇದು ಯಾವುದೋ ಪರದೇಶ, ಪರ ರಾಜ್ಯದಲ್ಲಿ ನಡೆದಿರುವ ಘಟನೆಯಂತೂ ಅಲ್ಲವೇ ಅಲ್ಲ. ಬುದ್ಧವಂತನ ಜಿಲ್ಲೆ ಎಂದೇ ಪ್ರಸಿದ್ಧ ಪಡೆದಿರುವ ಉಡುಪಿಯಲ್ಲಿ ವಿದ್ಯಾರ್ಥಿಯೊಬ್ಬ ಮಾಡಿರುವ ಕೆಲಸ ಎಂಥವರೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ.
ಇಂಜಿನಿಯರ್ ವಿದ್ಯಾರ್ಥಿ ತೋರಿದ ಜಾಣಾಕ್ಷತನವೇನೋ ಬೊಂಬಾಟ್. ಆದರೆ, ಅದನ್ನು ಬಳಸಿಕೊಂಡ ಮಾರ್ಗ ಮಾತ್ರ ಯಾರಿಗೂ ಇಷ್ಟವಾಗುವುದಿಲ್ಲ. ಕೈಯಲ್ಲಿ ಕಟ್ಟಿಕೊಂಡು ವಾಚ್ ನಿಂದ ವಿದ್ಯಾರ್ಥಿಯ ಹಣೆಬರಹವೇ ಫುಲ್ ಚೇಂಜ್ ಆಗಿದೆ.
ಚಿತ್ರಕೃಪೆ: ಡೈಜಿ ವರ್ಲ್ಡ್

ಎಕ್ಸಾಂ ಹಾಲ್ ನಲ್ಲಿ ಜಸ್ಟ್ 'ವಾಚ್' ಎಂದ ವಿದ್ಯಾರ್ಥಿ!
ಹೌದು, ಉಡುಪಿ ಜಿಲ್ಲೆ ಮಣಿಪಾಲ್ ನ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದ ಘಟನೆಯಿದು. ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಕಾಪಿ ಹೊಡೆಯಲು ಸ್ಪೆಷಲ್ ವಾಚ್ ಕಟ್ಟಿಕೊಂಡು ಬಂದಿದ್ದನು. ಪದೇ ಪದೆ ವಾಚ್ ಗಮನಿಸುತ್ತಿದ್ದ ವಿದ್ಯಾರ್ಥಿ ಮೇಲೆ ಕಣ್ಣಿಟ್ಟ ಶಿಕ್ಷಕರೇ ಫುಲ್ ಶಾಕ್ ಆಗಿ ಬಿಟ್ಟರು.

ಇಡೀ ಪುಸ್ತಕವೇ ಇತ್ತು ವಾಚ್ ನಲ್ಲಿ!
ಅಚ್ಚರಿ ಅನಿಸಿದರೂ ಇದ ಸತ್ಯವಾದ ಘಟನೆ. ವಿದ್ಯಾರ್ಥಿ ಕಟ್ಟಿಕೊಂಡ ವಾಚ್ ನಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತು. ಏಕೆಂದರೆ ಇಡೀ ಪುಸ್ತಕವನ್ನೇ ವಿದ್ಯಾರ್ಥಿ ವಾಚ್ ನಲ್ಲಿ ಸ್ಕ್ಯಾನ್ ಮಾಡಿಕೊಂಡು ಬಂದಿದ್ದನು. ಉತ್ತರವನ್ನು ವಾಚ್ ನಲ್ಲಿ ಜೂಮ್ ಮಾಡಿಕೊಂಡು ನೋಡುತ್ತಾ ವಿದ್ಯಾರ್ಥಿ ಪರೀಕ್ಷೆಯನ್ನು ಸಖತ್ ಹಾಯಾಗಿ ಬರೆಯುತ್ತಿದ್ದನು.

ಸಿಸಿ ಕ್ಯಾಮರಾ ಇರೋದೇ ಕಾಣಲಿಲ್ವಾ ಪಾಪಾ?
ವಾಚ್ ನಲ್ಲೇ ಪುಸ್ತಕವನ್ನು ಸ್ಕ್ಯಾನ್ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿ, ಅದನ್ನೇ ನೋಡಿಕೊಂಡು ಪರೀಕ್ಷೆ ಬರೆಯುತ್ತಿದ್ದನು. ಆದರೆ, ವಿದ್ಯಾರ್ಥಿಯ ಚಲನವಲನಗಳು ಪರೀಕ್ಷಾ ಕೊಠಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದ ಅನುಮಾನಗೊಂಡ ಪರೀಕ್ಷಾ ಮೇಲ್ವಿಚಾರಕರು, ವಿದ್ಯಾರ್ಥಿಯನ್ನು ಪರೀಕ್ಷಿಸಿದಾಗ ವಾಚ್ ನಲ್ಲಿದ್ದ ನಿಜರೂಪ ತಿಳಿದು ಬಂದಿದೆ.

ಹಣೆಬರಹ ಬದಲಿಸದಿರಲಿ ಇಂಥ ವಾಚ್!
ವಾಚ್ ನ್ನೇ ನೋಡಿಕೊಂಡು ಎಕ್ಸಾಂನಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಈಗಾಗಲೇ ಡಿಬಾರ್ ಮಾಡಲಾಗಿದೆ. ಸರಿಯಾಗಿ ಓದಿಕೊಳ್ಳದೇ ಹೀಗೆ ವಾಮಮಾರ್ಗ ಅನುಸರಿಸಲು ಹೋಗಿ ಇಲ್ಲೊಬ್ಬ ವಿದ್ಯಾರ್ಥಿ ತನ್ನ ಬದುಕನ್ನೇ ಹಾಳು ಮಾಡಿಕೊಂಡಿದ್ದಾನೆ. ತಂತ್ರಜ್ಞಾನವನ್ನು ಉತ್ತಮ ಚಟುವಟಿಕೆಗಳಿಗೆ ಬಳಸಬೇಕೇ ವಿನಃ ಇಂಥ ಕೆಲಸಗಳಿಗೆ ಉಪಯೋಗಿಸುವುದು ಅಷ್ಟು ಸೂಕ್ತವಲ್ಲ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications