ಉಡುಪಿಗೆ ಬಂದ ಟಾಲಿವುಡ್, ಬಾಲಿವುಡ್ ನಾಯಕಿ ಪೂಜಾ ಹೆಗ್ಡೆ ಸಂದರ್ಶನ
ಉಡುಪಿ, ಆಗಸ್ಟ್ 29: ಆಕೆಯ ಚೆಲುವು, ಅಭಿನಯ ಚಾತುರ್ಯಕ್ಕೆ ಬಾಲಿವುಡ್, ಟಾಲಿವುಡ್ ಬೆಕ್ಕಸ ಬೆರಗಾಗಿ ನೋಡುತ್ತಿದೆ. ಹೃತಿಕ್ ರೋಷನ್ ಜತೆಗೆ ನಟಿಸಿದ್ದ ಮೊಹಂಜೋದಾರೋ ಸಿನಿಮಾದ ನಾಯಕಿ ಪೂಜಾ ಹೆಗ್ಡೆ ಬಗ್ಗೆಯೇ ಹೇಳುತ್ತಿರುವುದು. ಆಕೆ ನಟಿಸಿದ ಮತ್ತೊಂದು ಸಿನಿಮಾ ಡಿಜೆ. ಅದರಲ್ಲಿ ನಾಯಕರಾಗಿದ್ದವರು ಅಲ್ಲು ಅರ್ಜುನ್.
ಸದ್ಯಕ್ಕಂತೂ ನಟಿ ಪೂಜಾ ಹೆಗ್ಡೆ ಬೇಡಿಕೆಯ ನಟಿ. ಬಾಲಿವುಡ್ ನ ಬಳಕುವ ಬಳ್ಳಿ ಪೂಜಾ ಹೆಗ್ಡೆ ಉಡುಪಿಯ ಮಾರಿಯಮ್ಮ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಅಂದಹಾಗೆ, ಪೂಜಾ ಹೆಗ್ಡೆ ತುಳುನಾಡ ಕುವರಿ. ಹುಟ್ಟಿ- ಬೆಳೆದದ್ದು ಮಾತ್ರ ಮುಂಬೈಯಲ್ಲಿ. ಆದರೆ ತುಳು ಮನೆತನದ ಪರಂಪರೆ, ನಂಬಿಕೆಯನ್ನು ಪೂಜಾ ಕುಟುಂಬ ಇಂದಿಗೂ ಮುಂದುವರಿಸಿಕೊಂಡು ಬಂದಿದೆ. ತಮ್ಮ ಕುಟುಂಬದ ಮೂಲ ಸ್ಥಾನಕ್ಕೆ ಬಂದು ದೇವರು, ದೈವಗಳಿಗೆ ಪೂಜೆ ಪುನಸ್ಕಾರ ನೆರವೇರಿಸಿಕೊಂಡು ಬಂದಿದ್ದಾರೆ.
ಪೂಜಾ ಹೆಗ್ಡೆ ಉಡುಪಿಯ ಕಾಪು ಮಾರಿಯಮ್ಮ ದೇವಸ್ಥಾನದಲ್ಲಿ ಮಂಗಳವಾರ ಕುಟುಂಬಸ್ಥರೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಒನ್ಇಂಡಿಯಾ ಕನ್ನಡ ನಡೆಸಿದ ಸಂದರ್ಶನ ಇಲ್ಲಿದೆ.

ಪ್ರಶ್ನೆ: ಹುಟ್ಟಿದ ಊರಿಗೆ ಬಂದಿದ್ದಕ್ಕೆ ವಿಶೇಷ ಕಾರಣ ಏನಾದರೂ ಇದೆಯಾ?
ಪೂಜಾ ಹೆಗ್ಡೆ: ದೇವರ ಪೂಜೆಗಾಗಿ ಊರಿಗೆ ಬಂದಿದ್ದೇನೆ. ಮನೆಗೆ ಬಂದು ಎರಡು ವರ್ಷಗಳಾಯ್ತು. ಆದ್ದರಿಂದ ಮನೆತನದ ಪ್ರತೀತಿಯಂತೆ ದೇವಾಲಯದಲ್ಲಿ ಪೂಜೆ ನೆರವೇರಿಸಿದ್ದೇನೆ.

ಪ್ರಶ್ನೆ: ಸದ್ಯಕ್ಕೆ ಯಾವ ಸಿನಿಮಾದಲ್ಲಿ ನಟಿಸುತ್ತಾ ಇದ್ದೀರಿ, ಅವಕಾಶಗಳ ಬಗ್ಗೆ ಹೇಳಿ.
ಪೂಜಾ ಹೆಗ್ಡೆ: ಸದ್ಯಕ್ಕೆ ತೆಲುಗಿನ ಒಂದು ಚಿತ್ರದಲ್ಲಿ ನಟಿಸ್ತಾಯಿದ್ದೇನೆ. ಹಿಂದಿಯ ಮೂರು ಸ್ಕ್ರಿಪ್ಟ್ ಬಂದಿದೆ. ಯಾವುದನ್ನೂ ಇನ್ನೂ ಫೈನಲ್ ಮಾಡಿಲ್ಲ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿದ್ರೆ ಮಾತ್ರ ಒಪ್ಪಿಕೊಳ್ಳುತ್ತೇನೆ.

ಪ್ರಶ್ನೆ: ಕನ್ನಡ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಅಭಿನಯಿಸ್ತೀರಾ?
ಪೂಜಾ ಹೆಗ್ಡೆ: ಒಳ್ಳೆ ನಿರ್ದೇಶಕರು, ಸ್ಕ್ರಿಪ್ಟ್ ಸಿಕ್ಕರೆ ಕನ್ನಡದಲ್ಲೂ ಖಂಡಿತಾ ನಟಿಸುತ್ತೇನೆ.

ಪ್ರಶ್ನೆ: ಮದುವೆಗೆ ಪ್ರಸ್ತಾವ ಬಂದಿದೆಯಾ, ಆ ಬಗ್ಗೆ ಯೋಚಿಸಿದ್ದೀರಾ?
ಪೂಜಾ ಹೆಗ್ಡೆ: ಮದುವೆ ಬಗ್ಗೆ ಯೋಚಿಸುವಷ್ಟು ನನಗೆ ವಯಸ್ಸಾಗಿಲ್ಲ. ನನ್ನ ಮುಂದೆ ದೊಡ್ಡ ದೊಡ್ಡ ಕನಸುಗಳಿವೆ. ನಾನು ಇನ್ನೂ ಹೆಸರು ಮಾಡಬೇಕಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications