ಚಂದ್ರಗ್ರಹಣ: ಉಡುಪಿಯಲ್ಲಿ ದಿನಪೂರ್ತಿ ಕೃಷ್ಣನ ದರ್ಶನಕ್ಕೆ ಮುಕ್ತ ಅವಕಾಶ
ಉಡುಪಿ, ಜುಲೈ.26:ಶುಕ್ರವಾರ ದೇಶಾದ್ಯಂತ ಚಂದ್ರಗ್ರಹಣವಾಗಲಿದೆ. ನಾಳೆ ಗೋಚರಿಸೋ ಗ್ರಹಣಕ್ಕೆ ಬ್ಲೂ ಮೂನ್ ಎಂಬ ಸೈಡ್ ನೇಮ್ ಕೂಡ ಇದೆ. ಅದೆಷ್ಟೋ ಮಂದಿ ಚಂದ್ರಗ್ರಹಣದ ವೀಕ್ಷಣೆಗಾಗಿ ಕಾಯುತ್ತಿದ್ದಾರೆ.
ಎಲ್ಲಾ ಕಡೆಗಳಲ್ಲೂ ಗ್ರಹಣದ ಪ್ರಯುಕ್ತ ನಿತ್ಯ ಪೂಜೆಗಳಲ್ಲಿ ಬದಲಾವಣೆ ಆಗಲಿದೆ. ಆದರೆ ಉಡುಪಿಯಲ್ಲಿ ಮಾತ್ರ ಗ್ರಹಣದ ಪ್ರಯಕ್ತ ಭಕ್ತರಿಗೆ ವಿಶೇಷ ಸೇವೆಯಿದೆ. ಅಂದರೆ ಕೃಷ್ಣನ ಆರಾಧಕರಿಗೆ ಸಂತಸದ ಸುದ್ದಿಯೊಂದಿದೆ.
ನಾಳೆ ಪೂರ್ಣ ಚಂದ್ರಗ್ರಹಣವಾಗಲಿದ್ದು, ಎಲ್ಲಾ ದೇವಸ್ಥಾನಗಳಲ್ಲಿ ನಿತ್ಯ ಪೂಜೆಗಳಲ್ಲಿ ಬದಲಾವಣೆಯಾಗಲಿದೆ. ಬೆಳಗ್ಗಿನಿಂದ ಕೃಷ್ಣನ ದರ್ಶನ ಭಕ್ತರಿಗೆ ಮುಕ್ತವಾಗಿರುತ್ತದೆ. ಆದರೆ ಯಾವುದೇ ಪೂಜೆಗಳಿರುವುದಿಲ್ಲ.

ಸಂಜೆ ವೇಳೆಯಿಂದ ಪರ್ಯಾಯ ಶ್ರೀಗಳು ಹಾಗೂ ಅವರ ಕೆಲವು ಶಿಷ್ಯರು 24 ಗಂಟೆಗಳ ಕಾಲ ಉಪವಾಸದಲ್ಲಿರುತ್ತಾರೆ. ನಾಳೆ ಉಪವಾಸವಿದ್ದು, ದೇವರ ಸ್ಮರಣೆ ಮಾಡಿದರೆ ಪುಣ್ಯಫಲ ಸಿಗಲಿದೆ ಎಂದು ಪರ್ಯಾಯ ಶ್ರೀಗಳಾದ ವಿದ್ಯಾಧೀಶ ಶ್ರೀಗಳು ಹೇಳಿದ್ದಾರೆ.
ಸಂಜೆ ಗ್ರಹಣ ಮುಗಿಯುತ್ತಿದ್ದಂತೆ ಕೃಷ್ಣನ ಸ್ಪರ್ಶನವಾಗದೆ ಆರತಿ ಮಾಡಲಿದ್ದೇವೆ ಎಂದರು. ಗ್ರಹಣ ಕಾಲದಲ್ಲಿ ಜನರು ಯಾವುದಕ್ಕೂ ಭಯಪಡಬೇಕಾಗಿಲ್ಲ. ಗ್ರಹಣದಿಂದ ಒಳಿತು ಮಾತ್ರ ಸಂಭವಿಸಲಿದೆ ಎಂದರು. ಕೃಷ್ಣನ ದರ್ಶನಕ್ಕೆ ಮುಕ್ತ ಅವಕಾಶವಿದ್ದು, ಗ್ರಹಣದ ಅಂತ್ಯದಲ್ಲಿ ಎಲ್ಲಾ ಪೀಠಾಧಿಪತಿಗಳು ಕೃಷ್ಣ ಸರೋವರದಲ್ಲಿ ಮುಳುಗಿ ಪೂಜಾ ಕೈಂಕರ್ಯಗಳನ್ನು ನೆರೆವೇರಿಸುತ್ತಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications