Get Updates
Get notified of breaking news, exclusive insights, and must-see stories!

ಉಡುಪಿ: ಅಪಾಯದಂಚಿನಲ್ಲಿ ಅಂಗನವಾಡಿ !

ನಾಲ್ಕೈದು ತಿಂಗಳಿನಿಂದ ಇಲ್ಲಿ ಕ್ರಷರ್ ಮಿಕ್ಸರ್ ಕಾಮಗಾರಿ ನಡೆಯುತ್ತಿದ್ದು, ಅಂಗನವಾಡಿ ಮಕ್ಕಳಿಗೆ ಕ್ರಷರ್ ಧೂಳು ತಿಂದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉಡುಪಿ, ಮಾರ್ಚ್ 18 : ಈ ಅಂಗನವಾಡಿಯಲ್ಲಿ ಇಪ್ಪತ್ತೈದು ಮಕ್ಕಳಿದ್ದಾರೆ. ಆದರೆ, ನಗರದ ಅಂಗನವಾಡಿಗೆ ಬಂದು, ಪಾಠ ಕೇಳಿ, ಆಟವಾಡಿದ ನಂತರ ಮಕ್ಕಳು ಮನೆಗೆ ಹೋಗುವುದೇ ಸಾಹಸಮಯ. ಯಾಕೆಂದರೆ ಈ ಅಂಗನವಾಡಿ ಹತ್ತಿರ ಬೃಹದಾಕಾರದ ಕ್ರಷರ್ ಮಿಕ್ಸರ್ ಇದೆ.

ನಾಲ್ಕೈದು ತಿಂಗಳಿನಿಂದ ಇಲ್ಲಿ ಕ್ರಷರ್ ಮಿಕ್ಸರ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಅಂಗನವಾಡಿ ಮಕ್ಕಳಿಗೆ ಕ್ರಷರ್ ಧೂಳು ತಿಂದು ಬದುಕುವ ಪರಿಸ್ಥಿತಿ.[ಉಡುಪಿ: ಚಿನ್ನದ ವ್ಯಾಪಾರಿಯ ದರೋಡೆ]

Jelly crushed creates illness among anganawadi in Udupi

ಇನ್ನು ಇಲ್ಲೇ ಸಮೀಪ ಇರುವ ನೂರಾರು ಮನೆಗಳು ಕ್ರಷರ್ ಧೂಳಿನಿಂದ ಮುಚ್ಚಿ ಹೋಗಿವೆ. ಈ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ದಿನವಿಡೀ ಅಂಗನವಾಡಿಯ ಹಿಂದುಗಡೆಯೇ‌ ಈ ಕ್ರಷರ್ ಮಿಕ್ಸರ್ ಕಾಮಗಾರಿ ನಡೆಯುತ್ತಿದೆ. ಮಕ್ಕಳ ಆಹಾರಕ್ಕೆ ಮತ್ತು ಕುಡಿಯಲು ಬಳಸುವ ಬಾವಿಯೂ ಕ್ರಷರ್ ಧೂಳಿಗೆ ಬಲಿಯಾಗಿದೆ. ಇದಕ್ಕೆ ರಕ್ಷಣೆ ನೀಡಿ ಎಂದು ನೂರಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಗುತ್ತಿಗೆದಾರರು ಮಾತ್ರ ಕೇವಲ ನೆಟ್ ಹಾಕಿ ಸುಮ್ಮನಾಗಿದ್ದಾರೆ.

ಈ ಎಲ್ಲದರ ಪರಿಣಾಮವಾಗಿ ಅಂಗನವಾಡಿಯಲ್ಲಿ ಈ ಹಿಂದೆ ಬರುತ್ತಿದ್ದ 25 ಮಕ್ಕಳಲ್ಲಿ ಸುಮಾರು ಆರೇಳು ಮಕ್ಕಳಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ. ಈ ಕಾರಣದಿಂದ ಇವರು ಅಂಗನವಾಡಿಗೆ ಬರುತ್ತಿಲ್ಲ.

ಕುಂದಾಪುರ ತಾಲೂಕಿನ ಮರವಂತೆಯ ಹೊರಬಂದರು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿರುವ ಈ ಅಂಗನವಾಡಿಯಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ಆರೋಗ್ಯವನ್ನು ಕೆಡಿಸುವ ಇಂತಹ ಕಾಮಗಾರಿ ನಿಲ್ಲಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+