ಪಶ್ಚಿಮ ಘಟ್ಟದ ತಪ್ಪಲಿನಿಂದ ಕಡ್ತಲ ಗ್ರಾಮಕ್ಕೆ ಬಂದ ಕಾಳಿಂಗ
ಉಡುಪಿ, ಜುಲೈ.13: ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಾಣಸಿಗುವ ಅಪರೂಪದ ಕಾಳಿಂಗ ಸರ್ಪ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದಲ್ಲಿ ಕಂಡು ಬಂದಿದೆ. ಆಹಾರ ಅರಸಿಕೊಂಡು ಜನವಸತಿ ಪ್ರದೇಶಕ್ಕೆ ಬಂದ ಭಾರೀ ಗಾತ್ರದ ಈ ಕಾಳಿಂಗ ಸರ್ಪವನ್ನು ಇದೀಗ ಸಂರಕ್ಷಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಪದೇ ಪದೇ ಸರ್ಪ ಕಾಣಿಸಿಕೊಳ್ಳುತ್ತಿದ್ದು, ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಉರಗ ತಜ್ಞ ಅನಿಲ್ ಪ್ರಭು ಅವರ ಸಹಾಯ ಪಡೆದು ಈ ಕಾಳಿಂಗವನ್ನು ಸೆರೆ ಹಿಡಿಯಲಾಯ್ತು.
ಕವಣಾಪುರ ಶಾಲಾ ಕೊಠಡಿಯ ಕಬೋರ್ಡ್ ನಲ್ಲಿ ನಾಗರ ಹಾವು ಪ್ರತ್ಯಕ್ಷ
ಸುಮಾರು 12 ಅಡಿ ಉದ್ದ, ಹದಿನೈದು ಕೆ.ಜಿ ತೂಗುವ ಈ ಹಾವನ್ನು ಕುದುರೆಮುಖ ಅಭಯಾರಣ್ಯಕ್ಕೆ ಮತ್ತೆ ಬಿಡಲಾಗಿದೆ. "ವಿಷಕಾರಿಯಾದ ಈ ಹಾವು ಮಳೆಗಾಲದಲ್ಲಿ ಹೆಚ್ಚಾಗಿ ಆಹಾರ ಅರಸಿಕೊಂಡು ಹೊರಬರುತ್ತೆ. ಈ ಕಾಳಿಂಗ ಸರ್ಪ ಕೂಡಾ ಆಹಾರವಿಲ್ಲದೆ ಸೊರಗಿದಂತೆ ಕಾಣುತ್ತದೆ.
ಈ ಗಾತ್ರದ ಕಾಳಿಂಗ ಸರ್ಪವು ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಸರೀಸೃಪ. ಆಹಾರ ಹುಡುಕಿಕೊಂಡು ಬರುವ ಸರ್ಪಗಳು ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಅವುಗಳನ್ನು ಸಂರಕ್ಷಿಸುವ ಕರ್ತವ್ಯ ನಮ್ಮದು ಎಂದು ಉರಗ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.