11 ಜನ ಸಾವು, ಆರ್ಸಿಬಿ ಗೆದ್ದರೂ ಸೂತಕದ ವಾತಾವರಣ... ಸತ್ತವರ ವಿವರ ಇಲ್ಲಿದೆ ತಿಳಿಯಿರಿ... Chinnaswamy Stadium
ಕನ್ನಡಿಗರ ತಂಡ ಬೆಂಗಳೂರು ಐಪಿಎಲ್ ಟೀಂ ನಮ್ಮ ಆರ್ಸಿಬಿ ಭರ್ಜರಿಯಾಗಿ 18 ವರ್ಷಗಳ ನಂತರ ಕಪ್ ಗೆದ್ದಿದ್ದು, ಇಡೀ ಜಗತ್ತಿನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಅದರಲ್ಲೂ 50 ಕೋಟಿಗೂ ಹೆಚ್ಚು ಆರ್ಸಿಬಿ ಅಭಿಮಾನಿಗಳು ಈ ಸಂಭ್ರಮದ ಹೊಳೆಯಲ್ಲಿ ತೇಲಿ ಹೋಗಿದ್ದಾರೆ. ಆದರೆ ಇಂತಹ ಸಮಯದಲ್ಲೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಾವಿನ ಕೂಪವಾಗಿ ಬದಲಾಗಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, 11 ಜನರ ಸಾವು ದೊಡ್ಡ ಆಘಾತ ನೀಡಿದೆ. ಆರ್ಸಿಬಿ ಸಂಭ್ರಮಾಚರಣೆ ವೇಳೆ ಜೀವ ಬಿಟ್ಟ 11 ಅಭಿಮಾನಿಗಳ ವಿವರ ಇಲ್ಲಿದೆ, ಮುಂದೆ ಓದಿ...
ಆರ್ಸಿಬಿ ತಂಡದ ಹವಾ ನೋಡಿ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿದೆ, ಯಾಕಂದ್ರೆ ಬೆಂಗಳೂರು ತಂಡ ಆರ್ಸಿಬಿ ಅಭಿಮಾನಿ ಬಳಗ ಅಷ್ಟು ದೊಡ್ಡ ಮಟ್ಟಿಗೆ ಸೆಲೆಬ್ರೇಷನ್ ಮಾಡಿದೆ. ಕಪ್ ಗೆದ್ದು 3 ದಿನ ಕಳೆದರೂ ಸೆಲೆಬ್ರೇಷನ್ ಮಾತ್ರ ಇನ್ನೂ ನಿಂತೇ ಇಲ್ಲ. ಹೀಗಿದ್ದಾಗಲೇ, 11 ಜನ ಸಾವು, ಆರ್ಸಿಬಿ ಗೆದ್ದರೂ ಸೂತಕದ ವಾತಾವರಣ... ಸತ್ತವರ ವಿವರ ಇಲ್ಲಿದೆ ತಿಳಿಯಿರಿ...

11 ಜನ ಸಾವು, ಆರ್ಸಿಬಿ ಗೆದ್ದರೂ ಸೂತಕದ...
ಹೌದು, ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಕಪ್ ಗೆದ್ದಿದ್ದು ಕೋಟಿ ಕೋಟಿ ಜನರಿಗೆ ಖುಷಿ ನೀಡಿದೆ. ಹೀಗಿದ್ದಾಗ ಕೂಡ ಕೋಟಿ ಕೋಟಿ ಜನರ ಎದೆಯಲ್ಲಿ ಕಿಚ್ಚು ಹೊತ್ತಿಕೊಂಡಿದೆ. ಆರ್ಸಿಬಿ ತಂಡ ಬೆಂಗಳೂರಿಗೆ ಬಂದು ಸಂಭ್ರಮ & ಹಬ್ಬದ ವಾತಾವರಣ ಸೃಷ್ಟಿಯಾಗಿರುವ ಸಮಯದಲ್ಲೇ 11 ಜನರ ಸಾವಿನ ಸುದ್ದಿ ದೊಡ್ಡ ಆಘಾತವನ್ನೇ ನೀಡಿದೆ. ಇದರ ಜೊತೆಗೆ ಜನರು ಕೂಡ ಈ ಘಟನೆ ವಿರುದ್ಧ ರೊಚ್ಚಿಗೆದ್ದು ಕೂತಿದ್ದಾರೆ...
ಪ್ರಾಣಬಿಟ್ಟ ಆರ್ಸಿಬಿ ಅಭಿಮಾನಿಗಳು ಇವರು...
20 ವರ್ಷದ ಭೂಮಿಕ್, 19 ವರ್ಷದ ಸಹನಾ, 19 ವರ್ಷದ ಚಿನ್ಮಯಿ, 13 ವರ್ಷದ ದಿವಾನ್ಷಿ, 20 ವರ್ಷದ ಶ್ರವಣ್ ಸೇರಿದಂತೆ 29 ವರ್ಷದ ದೇವಿ, 17 ವರ್ಷ ವಯಸ್ಸಿನ ಶಿವಲಿಂಗ್, 33 ವರ್ಷದ ಮನೋಜ್, ಅಕ್ಷತಾ, 32 ವರ್ಷದ ಪೂರ್ಣಚಂದ್ ಮೃತಪಟ್ಟಿದ್ದಾರೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಪ್ರಯತ್ನ ಮಾಡಿದರೂ ಅದು ಫಲ ನೀಡಲೇ ಇಲ್ಲ, ಹೀಗಾಗಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ಸರ್ಕಾರ ಕೂಡ ಈ ವಿಚಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶ ನೀಡುವ ಸಾಧ್ಯತೆ ಇದೆ.












Click it and Unblock the Notifications