'ಪತ್ರಿಕೆಗಳು ಜಾತಿ, ಧರ್ಮ,ವ್ಯಕ್ತಿ, ದೇವರಿಗೆ ಮೀಸಲಾಗಬಾರದು'
ಸಾಗರ, ನವೆಂಬರ್ 13: ಪತ್ರಿಕೆಗಳು ಕೆಲವೇ ಕೆಲವು ಜಾತಿ, ಧರ್ಮ, ದೇವರು ಹಾಗೂ ಪಕ್ಷಗಳಿಗೆ ಮೀಸಲಾಗಬಾರದು, ಸುದ್ದಿಗಳು ಹಾಗೂ ಲೇಖನಗಳು ಸೀಮಿತವಾಗದ ಪತ್ರಿಕೆಗಳು ಇಂದು ಬಹಳ ಮುಖ್ಯವಾದದ್ದು ಎಂದು ಸಾಹಿತಿ ಡಾ. ನಾ ಡಿಸೋಜಾ ಅಭಿಪ್ರಾಯಪಟ್ಟರು.
ಸಾಗರದಲ್ಲಿ ಸಂಪದ ಫೌಂಡೇಶನ್ ಮತ್ತು ಸಂಪದ ಸಾಲು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕತೆ, ಕವನ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಿಕೆಗಳು ಇನ್ನೊಬ್ಬರಿಗೆ ಸ್ಫೂರ್ತಿ ನೀಡುವಂತಿರಬೇಕು, ಯಾವುದೋ ಪಕ್ಷ, ಯಾವುದೋ ವ್ಯಕ್ತಿಗೆ ಸೀಮಿತವಾದರೆ ಜನರಿಗೆ ತಲುಪಬೇಕಾದ ಮಾಹಿತಿಗಳಲ್ಲಿ ಸತ್ಯ ಉಳಿಯುವುದಿಲ್ಲ ಎಂದು ಹೇಳಿದರು.

ಬರವಣಿಗೆಗಳು ಇನ್ನೊಬ್ಬರಿಗೆ ಸ್ಪೂರ್ತಿ ನೀಡುವಂತಿರಬೇಕು ಆಗ ಮಾತ್ರಾ ಆ ಬರವಣಿಗೆ ಮತ್ತು ಪತ್ರಿಕೆಗಳಿಗೆ ಬೆಲೆ ಬರುತ್ತದೆ ಎಂದು ಮಥನ ಹೋಮ್ ಇಂಡಸ್ಟ್ರೀಸ್ ನ ಬಿ. ಆರ್. ಉಮೇಶ್ ಹೇಳಿದರು.
ಕತೆಗೆ ಪ್ರಥಮವಾಗಿ ಮಂಜುನಾಥ ಹಿಲಿಯಾಣ ಅವರ ಸೀತಾ ಪ್ರಲಾಪ ಕತೆ, ವಿಷ್ಣು ಭಟ್ ಹೊಸ್ಮನೆ ಅವರ ಪಯಣ ಕತೆಗೆ ದ್ವಿತೀಯ ಬಹುಮಾನ, ಹೆಚ್ ಎಸ್ ಅರ್ಪಣಾ ಅವರ ಪಂಕ್ತಿಬೇಧ ಕತೆಗೆ ತೃತೀಯ ಬಹುಮಾನ ನೀಡಲಾಗಿದೆ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನ ಮಾಡಲಾಯಿತು.
ಡಾ.ರತ್ನಾಕರ್ ಮಲ್ಲಮೂಲೆ ಅವರ ಭೂತ ಕವಿತೆ ಪ್ರಥಮ ಬಹುಮಾನವಾಗಿ, ವಿನಾಯಕ ಅರಳಸುರಳಿ ಅವರ ದೇವರ ಹೊತ್ತವನು ಕವನ ದ್ವಿತೀಯ ಬಹುಮಾನವಾಗಿ, ಡಾ. ಅಜಿತ್ ಹೆಗಡೆ, ಹರೀಶಿ ಅವರ ವೇದಾಂತದ ವಿಗತ ಕವನಕ್ಕೆ ತೃತೀಯ ಬಹುಮಾನ ಸಂದಿವೆ.

ಸಂಪದ ಸಾಲು ಪತ್ರಿಕೆಯ ಹನ್ನೊಂದನೇ ವರ್ಷದ ವಿಶೇಷದ ಸಂದರ್ಭದಲ್ಲಿ ನೆಡೆದ ಈ ಕತೆ, ಕವನ ಸ್ಪರ್ಧೆಯಲ್ಲಿ ರಾಜ್ಯ ಮತ್ತು ಬೇರೆ ರಾಜ್ಯ, ರಾಷ್ಟ್ರದಲ್ಲಿರುವ ಕನ್ನಡಿಗರು ಸೇರಿದಂತೆ 1819 ಕವನಗಳು ಮತ್ತು 819 ಕತೆ ಭಾಗವಹಿಸಿದ್ದವು. ಡಾ.ನಾ ಡಿಸೋಜ ಅವರ ನೇತೃತ್ವದಲ್ಲಿ ತೀರ್ಪು ಪ್ರಕಟಿಸಲಾಗಿತ್ತು.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications