ಶಿವಮೊಗ್ಗದಲ್ಲಿ ಆರ್ ಎಸ್ ಎಸ್ ಶಕ್ತಿ ಪ್ರದರ್ಶನ: ಚಿತ್ರಗಳಲ್ಲಿ
ಶಿವಮೊಗ್ಗ, ಫೆ. 1: ಇಡೀ ಸಿಹಿಮೊಗೆ ಭಾನುವಾರ ಕೇಸರಿ ಮಯವಾಗಿತ್ತು. ಆರ್ ಎಸ್ ಎಸ್ ನ ಪರಿವರ್ಥನಾ ಪಥ ಸಂಚಲನದಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 15 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.
ದೇಶದೆಲ್ಲೆಡೆ ಬದಲಾವಣೆ ಗಾಳಿ ಬೀಸುತ್ತಿದೆ. ಈ ಗಾಳಿಯನ್ನು ಇಡೀ ಪ್ರಪಂಚಕ್ಕೆ ವ್ಯಾಪಿಸಬೇಕಿದೆ ಎಂದು ಕಾರ್ಯಕರ್ತರು ಘೊಷಣೆ ಕೂಗುತ್ತಾ ನಗರದೆಲ್ಲೆಡೆ ಸಂಚರಿಸಿ ಎನ್ ಇಎಸ್ ಮೈದಾನದಲ್ಲಿ ಸಮಾವೇಶಗೊಂಡರು.
ನಗರದ ಶಿವಪ್ಪನಾಯಕ ವೃತ್ತ ಕೇಸರಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಸಂಸದ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ್, ಕೃಷ್ಣ ಭಟ್, ಮಾಜಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಸಂಘ ಪರಿವಾರ ಮತ್ತು ಬಿಜೆಪಿಯ ಅನೇಕ ಮುಖಂಡರು ಗಣವೇಷಧಾರಿಗಳಾಗಿ ಪಾಲ್ಗೊಂಡಿದ್ದು ವಿಶೇಷ.
ಗಣವೇಷಧಾರಿಗಳ ಶಿಸ್ತು
ಶಿವಮೊಗ್ಗದ ಎನ್ ಇಎಸ್ ಮೈದಾನದಲ್ಲಿ ನಾಯಕರ ಭಾಷಣ ಆಲಿಸುತ್ತಿರುವ ಗಣವೇಷಧಾರಿಗಳು.
ಯಡಿಯೂರಪ್ಪ
ಗಣವೇಷಧಾರಿಯಾಗಿ ಆಗಮಿಸಿದ ಸಂಸದ ಬಿ.ಎಸ್.ಯಡಿಯೂರಪ್ಪ.
ದೇಶಕ್ಕೆ ವಂದನೆ
ಕಾರ್ಯಕ್ರಮಕ್ಕೆ ಮುನ್ನ ಶಿಸ್ತಿನ ಸಿಪಾಯಿಗಳು.
ಸ್ಥಳೀಯ ನಾಯಕರು
ಸಭಾ ಕಾರ್ಯಕ್ರಮದಲ್ಲಿ ಹಾಜರಿದ್ದ ಸ್ಥಳೀಯ ನಾಯಕರು
ಮೆರವಣಿಗೆ
ಶಿವಮೊಗ್ಗದ ವಿವಿಧೆಡೆ ಸಂಚರಿಸಿದ ಮೆರವಣಿಗೆ.
ಕಾರ್ಯಕರ್ತರು
ಸಭಾ ಕಾರ್ಯಕ್ರಮದಲ್ಲಿ ಹಾಜರಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು
ನಾನು ಸಿದ್ಧ
ಗಣವೇಷಧಾರಿಯಾಗಿ ಮಿಂಚಿದ ಬಾಲಕ
ಕೇಸರಿ ಮಯ
ಶಿವಮೊಗ್ಗ ನಗರವೆಲ್ಲ ಭಾನುವಾರ ಕೇಸರಿ ಮಯ