ಓರಗಿತ್ತಿಯರ ಸ್ಪರ್ಧೆಯಲ್ಲಿ ಗೆದ್ದವರು ಯಾರು?: ಸೇಡು ತೀರಿಸಿಕೊಂಡ ತಮ್ಮನ ಹೆಂಡತಿ
ರಾಂಚಿ, ಡಿಸೆಂಬರ್ 24: ಕುಟುಂಬದ ಸದಸ್ಯರ ನಡುವಿನ ಚುನಾವಣಾ ಜಿದ್ದಾಜಿದ್ದಿಯ ಹಲವು ಉದಾಹರಣೆಗಳನ್ನು ನೋಡಿದ್ದೀರಿ. ಅಪ್ಪ-ಮಕ್ಕಳು, ಗಂಡ-ಹೆಂಡತಿಯೇ ಎದುರಾಳಿಗಳಾಗಿ ಸ್ಪರ್ಧಿಸುವ ವಿಶಿಷ್ಟ ವ್ಯವಸ್ಥೆ ನಮ್ಮದು. ಜಾರ್ಖಂಡ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಝಾರಿಯಾ ಕ್ಷೇತ್ರದ ಪೈಪೋಟಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಇಲ್ಲಿ ನಡೆದಿದ್ದು ಓರಗಿತ್ತಿಯರ ಪೈಪೋಟಿ. ಈ ಜಿದ್ದಾಜಿದ್ದಿಯ ಹಿಂದೆ ಕ್ರೌರ್ಯದ ಮುಖವೂ ಇದೆ.
ಧನಬಾದ್ ಜಿಲ್ಲೆಯ ಧನಬಾದ್ ಸದರ್ ಉಪ ವಿಭಾಗ ಲೋಕಸಭೆ ಕ್ಷೇತ್ರದಲ್ಲಿ ಬರುವ ಝಾರಿಯಾ ವಿಧಾನಸಭೆ ಕ್ಷೇತ್ರದಲ್ಲಿ ಓರಗಿತ್ತಿಯರ ನಡುವೆ ಸ್ಪರ್ಧೆ ನಡೆದಿತ್ತು. ವಿಶೇಷವೆಂದರೆ 2014ರ ವಿಧಾನಸಭೆ ಚುನಾವಣೆಯಲ್ಲಿ ಸಹೋದರರ ನಡುವೆ ಸ್ಪರ್ಧೆ ನಡೆದಿತ್ತು.
ಆಗ ಗೆದ್ದಿದ್ದ ಅಭ್ಯರ್ಥಿಯ ಪತ್ನಿ ಮತ್ತು ಸೋತಿದ್ದ ಅಭ್ಯರ್ಥಿಯರ ಪತ್ನಿ 2019ರ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದರು. ಈ ಬಾರಿ ಗೆಲುವಿನ ನಗೆ ಬೀರಿದ್ದು, ಕಳೆದ ಬಾರಿ ಸೋತಿದ್ದ ಅಭ್ಯರ್ಥಿಯ ಪತ್ನಿ. ಕಳೆದ ಚುನಾವಣೆಯಲ್ಲಿ ಸಹೋದರರ ನಡುವೆ ಪೈಪೋಟಿಯಷ್ಟೇ ಮುಖ್ಯವಾಗಿ ಬಿಂಬಿತವಾಗಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಸೇಡು, ಆಕ್ರೋಶ, ಜಿದ್ದು ಮುನ್ನಲೆಯಲ್ಲಿತ್ತು.

ಗೆದ್ದು ಬೀಗಿದ್ದ ಸಂಜೀವ್ ಸಿಂಗ್
2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದಿದ್ದ ಸಂಜೀವ್ ಸಿಂಗ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅವರ ಸಹೋದರ (ಚಿಕ್ಕಪ್ಪನ ಮಗ) ನೀರಜ್ ಸಿಂಗ್ ನಡುವೆ ಚುನಾವಣಾ ಕದನ ನಡೆದಿತ್ತು. 30,000 ಮತಗಳಿಂದ ಗೆದ್ದಿದ್ದ ಸಂಜೀವ್ ಸಿಂಗ್ ಗೆಲುವಿನ ನಗೆ ಬೀರಿದ್ದರು.

ನೀರಜ್ ದೇಹದಲ್ಲಿ 67 ಗುಂಡುಗಳು
ಆದರೆ, 2017ರ ಮಾರ್ಚ್ 21ರ ರಾತ್ರಿ 7.30ರ ವೇಳೆಗೆ ಮೋಟಾರ್ಸೈಕಲ್ನಲ್ಲಿ ಬಂದ ದುಷ್ಕರ್ಮಿಗಳು ಧನಬಾದ್ನ ಮಾಜಿ ಮೇಯರ್ ಕೂಡ ಆಗಿದ್ದ ನೀರಜ್ ಸಿಂಗ್ (37) ಅವರ ಕಾರನ್ನು ಅಡ್ಡಗಟ್ಟಿ ಹತ್ಯೆ ಮಾಡಿದ್ದರು. ಎಕೆ 47 ಮತ್ತು ಪಿಸ್ತೂಲುಗಳಿಂದ ಸತತ ಗುಂಡಿನ ದಾಳಿ ನಡೆಸಲಾಗಿತ್ತು. ನೀರಜ್ ಸಿಂಗ್ ಜತೆಗೆ ಇದ್ದ ಇತರೆ ಮೂವರು ಮುಖಂಡರು ಕೂಡ ಮೃತಪಟ್ಟಿದ್ದರು. ನೀರಜ್ ಸಿಂಗ್ ದೇಹದಲ್ಲಿ ಬರೋಬ್ಬರಿ 67 ಗುಂಡುಗಳು ಪತ್ತೆಯಾಗಿದ್ದವು. ಇದರ ಹಿಂದೆ ಶಾಸಕ ಸಂಜೀವ್ ಸಿಂಗ್ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತ್ತು. ತೀವ್ರ ಒತ್ತಡದ ಬಳಿಕ ಸಂಜೀವ್ ಸಿಂಗ್ ಶರಣಾಗಿದ್ದರು. ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ.

ಕಣಕ್ಕಿಳಿದ ಓರಗಿತ್ತಿಯರು
ಹೀಗೆ ಇಬ್ಬರೂ ಸಹೋದರರು ಈ ಬಾರಿಯ ಚುನಾವಣೆಯ ಕಣದಲ್ಲಿ ಇರಲಿಲ್ಲ. ಈ ವೇಳೆ ಸ್ಪರ್ಧೆಗಿಳಿದಿದ್ದೇ ಓರಗಿತ್ತಿಯರು. ಸಂಜೀವ್ ಸಿಂಗ್ ಪತ್ನಿ ರಾಗಿಣಿ ಬಿಜೆಪಿ ಟಿಕೆಟ್ ಪಡೆದರೆ, ದಿ. ನೀರಜ್ ಸಿಂಗ್ ಪತ್ನಿ ಪೂರ್ಣಿಮಾ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡರು. ಝಾರಿಯಾ ಕ್ಷೇತ್ರವು ಒಂದು ಕುಟುಂಬದ ಪಿತ್ರಾರ್ಜಿತ ಆಸ್ತಿಯಂತಾಗಿದೆ. ತಮ್ಮ ಎದುರಿಗೆ ಬಂದವರನ್ನು ಮುಗಿಸಿಬಿಡುವ ಜಾಯಮಾನ ಅವರದು ಎಂದು ನೀರಜ್ ಅವರ ತಮ್ಮ ಹರ್ಷ್ ಸಿಂಗ್ ಹೇಳಿದ್ದರು.

ಪೂರ್ಣಿಮಾ ಸಿಂಗ್ಗೆ ಜಯ
2019ರ ಚುನಾವಣೆಯಲ್ಲಿ ಕಾಂಗ್ರೆಸ್ನ ಪೂರ್ಣಿಮಾ ನೀರಜ್ ಸಿಂಗ್ 79,786 ಮತಗಳನ್ನು ಪಡೆದು, ತಮ್ಮ ಎದುರಾಳಿ ರಾಗಿಣಿ ಸಂಜೀವ್ ಸಿಂಗ್ ವಿರುದ್ಧ 12,054 ಮತಗಳಿಂದ ಜಯಭೇರಿ ಭಾರಿಸಿದ್ದಾರೆ. ನೀರಜ್ ಸಿಂಗ್ ಸಾವಿನ ಅನುಕಂಪ, ಸಂಜೀವ್ ಸಿಂಗ್ ವಿರುದ್ಧದ ಆರೋಪಗಳು ಈ ಗೆಲುವಿಗೆ ಕಾರಣವಾಗಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications