ಓಶೋ ವಿಲ್ 23 ವರ್ಷ ನಂತರ ಕೊನೆಗೂ ಬಹಿರಂಗ!
ಪುಣೆ, ಸೆ.25: ಜ್ಞಾನ ನಿಧಿ, ದೇವಮಾನವ ಎಂದೆಲ್ಲಾ ಖ್ಯಾತರಾಗಿದ್ದ ಭಗವಾನ್ ಶ್ರೀ ರಜನೀಶ್ ಯಾನಿ ಓಶೋ ವಿಧಿವಶರಾಗಿ ಸುಮಾರು 23 ವರ್ಷಗಳೇ ಕಳೆದಿವೆ. ಜಗತ್ತಿನೆಲ್ಲೆಡೆ ಖ್ಯಾತಿಯ ಉತ್ತುಂಗ ತಲುಪಿದ್ದ ಅವರು ಅಪಾರ ಆಸ್ತಿಯನ್ನೂ ಗಳಿಸಿದ್ದರು. ಆದರೆ ಆ ಆಸ್ತಿಪಾಸ್ತಿ ಬಗ್ಗೆ ಸ್ವತಃ ಅವರೇ ಬರೆದಿಟ್ಟಿದ್ದ ವೀಲುನಾಮೆ ಬಹಿರಂಗವಾಗದೆ ಅವರ ಆಸ್ತಿ ಒಡೆತನ ವಿವಾದಕ್ಕೆ ಗುರಿಯಾಗಿತ್ತು.
ಆದರೆ ಇಂತಿಪ್ಪ ಓಶೋ ಸಾಮ್ರಾಜ್ಯದ ಒಡೆತನಕ್ಕಾಗಿ ನಡೆಯುತ್ತಿರುವ ವಿವಾದ ಈಗ ಹೊಸ ತಿರುವು ಪಡೆದಿದೆ. ದೇವಮಾನವ ಓಶೋ ಮರಣ ಹೊಂದಿದ ಬರೋಬ್ಬರಿ 23 ವರ್ಷಗಳ ಬಳಿಕ ಅವರು ಬರೆದಿಟ್ಟ ವಿಲ್ (will) ಬಹಿರಂಗವಾಗಿದೆ. ವೀಲುನಾಮೆಯಲ್ಲಿ ಏನೆಲ್ಲಾ ಬರೆಯಲಾಗಿದೆ. ಇಲ್ಲಿದೆ ಒಂದು ನೋಟ:

ರಜನೀಶ್ ಅಪಾರ ಆಸ್ತಿ- ಪ್ರಕಾಶನದ ಹಕ್ಕು ಯಾರ ಪಾಲಿಗೆ
'ನಾನು, ಓಶೋ. ಮೂಲ ಹೆಸರು ಚಂದ್ರಮೋಹನ್ ಜೈನ್. ಭಗವಾನ್ ಶ್ರೀ ರಜನೀಶ್ ಎಂದೂ ಕರೆಯಲ್ಪಡುವ ನಾನು ನನ್ನ ಎಲ್ಲ ಆಸ್ತಿಗಳನ್ನೂ ಹಾಗೂ ಪ್ರಕಾಶನದ ಹಕ್ಕನ್ನು ನಿಯೋ ಸನ್ಯಾಸ್ ಇಂಟರ್ನ್ಯಾಷನಲ್ ಫೌಂಡೇಷನ್ ಸಂಸ್ಥೆಗೆ ನೀಡುತ್ತಿದ್ದೇನೆ.'

Neo Sannyas International ಸಂಸ್ಥೆಯ ಸೃಷ್ಟಿ
ಇದನ್ನು 1989ರ ಜೂನ್ 16ರಂದು ಬರೆಯಲಾಗಿದ್ದು, ಓಶೋ ಅವರ ಸಹಿಯೂ ಇದೆ. ಈ ದಾಖಲೆಯು ಓಶೋ ಅವರ ಕೊನೆಯ ವಿಲ್ ಎಂದು ಸ್ವಿಜರ್ಲೆಂಡ್ ಮೂಲದ ನಿಯೋ ಸನ್ಯಾಸ್ ಸಂಸ್ಥೆ Neo Sannyas International ಹೇಳಿಕೊಂಡಿದೆ.

NSI ವಿಲ್ ನಕಲಿ: Osho Friends Foundation
ಓಶೋ ಆಸ್ತಿಯ ಹೋರಾಟದಲ್ಲಿ ನಿರತರಾಗಿರುವ ಓಶೋ ಫ್ರೆಂಡ್ಸ್ ಫೌಂಡೇಷನ್ ಮಾತ್ರ ಈ ವೀಲುನಾಮೆ ನಕಲಿ ಎಂದು ವಾದಿಸುತ್ತಿದೆ. ಪುಣೆಯಲ್ಲಿರುವ ಸುಮಾರು 10 ಎಕರೆಯಷ್ಟು ವಿಸ್ತಾರದ ಓಶೋ ಆಶ್ರಮ ಹಾಗೂ ಓಶೋ ಅವರ ತತ್ವಬೋಧನೆಗಳ ಮಾರಾಟದಿಂದ ಪಡೆದ ಕೋಟ್ಯಂತರ ರುಪಾಯಿ ಹಣವೆಲ್ಲವನ್ನೂ ದೋಚಲು ನಿಯೋ ಸಂಸ್ಥೆ ಈ ನಕಲಿ ವಿಲ್ ಸೃಷ್ಟಿಸಿದೆ ಎಂದು ಆರೋಪಿಸಿದ್ದು, ಈ ಬಗ್ಗೆ ಪುಣೆಯ ಕೋರ್ಟಿಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದೆ.

ಸಾಯಿಬಾಬಾ ವಿಲ್ ಸಹ ವಿವಾದದ ಗೂಡು
ಪುಟ್ಟಪರ್ತಿಯ ಶ್ರೀಸತ್ಯ ಸಾಯಿಬಾಬಾ ಅವರ ಮರಣಾನಂತರ ಸಾಯಿಬಾಬಾ ಅಪಾರ ಆಸ್ತಿಯ ಬಗ್ಗೆ ಅಧಿಕೃತ ವಿಲ್ ಇಲ್ಲದ ಕಾರಣ ಅನೇಕ ನಕಲಿ ವಿಲ್ ಗಳು ಸೃಷ್ಟಿಯಾಗಿ ಹೀಗೆಯೇ ವಿವಾದಗಳನ್ನೆಬ್ಬಿಸುತ್ತಿರುವುದು ಗಮನಾರ್ಹವಾಗಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications