ಓಶೋ ವಿಲ್ 23 ವರ್ಷ ನಂತರ ಕೊನೆಗೂ ಬಹಿರಂಗ!
ಪುಣೆ, ಸೆ.25: ಜ್ಞಾನ ನಿಧಿ, ದೇವಮಾನವ ಎಂದೆಲ್ಲಾ ಖ್ಯಾತರಾಗಿದ್ದ ಭಗವಾನ್ ಶ್ರೀ ರಜನೀಶ್ ಯಾನಿ ಓಶೋ ವಿಧಿವಶರಾಗಿ ಸುಮಾರು 23 ವರ್ಷಗಳೇ ಕಳೆದಿವೆ. ಜಗತ್ತಿನೆಲ್ಲೆಡೆ ಖ್ಯಾತಿಯ ಉತ್ತುಂಗ ತಲುಪಿದ್ದ ಅವರು ಅಪಾರ ಆಸ್ತಿಯನ್ನೂ ಗಳಿಸಿದ್ದರು. ಆದರೆ ಆ ಆಸ್ತಿಪಾಸ್ತಿ ಬಗ್ಗೆ ಸ್ವತಃ ಅವರೇ ಬರೆದಿಟ್ಟಿದ್ದ ವೀಲುನಾಮೆ ಬಹಿರಂಗವಾಗದೆ ಅವರ ಆಸ್ತಿ ಒಡೆತನ ವಿವಾದಕ್ಕೆ ಗುರಿಯಾಗಿತ್ತು.
ಆದರೆ ಇಂತಿಪ್ಪ ಓಶೋ ಸಾಮ್ರಾಜ್ಯದ ಒಡೆತನಕ್ಕಾಗಿ ನಡೆಯುತ್ತಿರುವ ವಿವಾದ ಈಗ ಹೊಸ ತಿರುವು ಪಡೆದಿದೆ. ದೇವಮಾನವ ಓಶೋ ಮರಣ ಹೊಂದಿದ ಬರೋಬ್ಬರಿ 23 ವರ್ಷಗಳ ಬಳಿಕ ಅವರು ಬರೆದಿಟ್ಟ ವಿಲ್ (will) ಬಹಿರಂಗವಾಗಿದೆ. ವೀಲುನಾಮೆಯಲ್ಲಿ ಏನೆಲ್ಲಾ ಬರೆಯಲಾಗಿದೆ. ಇಲ್ಲಿದೆ ಒಂದು ನೋಟ:

ರಜನೀಶ್ ಅಪಾರ ಆಸ್ತಿ- ಪ್ರಕಾಶನದ ಹಕ್ಕು ಯಾರ ಪಾಲಿಗೆ
'ನಾನು, ಓಶೋ. ಮೂಲ ಹೆಸರು ಚಂದ್ರಮೋಹನ್ ಜೈನ್. ಭಗವಾನ್ ಶ್ರೀ ರಜನೀಶ್ ಎಂದೂ ಕರೆಯಲ್ಪಡುವ ನಾನು ನನ್ನ ಎಲ್ಲ ಆಸ್ತಿಗಳನ್ನೂ ಹಾಗೂ ಪ್ರಕಾಶನದ ಹಕ್ಕನ್ನು ನಿಯೋ ಸನ್ಯಾಸ್ ಇಂಟರ್ನ್ಯಾಷನಲ್ ಫೌಂಡೇಷನ್ ಸಂಸ್ಥೆಗೆ ನೀಡುತ್ತಿದ್ದೇನೆ.'

Neo Sannyas International ಸಂಸ್ಥೆಯ ಸೃಷ್ಟಿ
ಇದನ್ನು 1989ರ ಜೂನ್ 16ರಂದು ಬರೆಯಲಾಗಿದ್ದು, ಓಶೋ ಅವರ ಸಹಿಯೂ ಇದೆ. ಈ ದಾಖಲೆಯು ಓಶೋ ಅವರ ಕೊನೆಯ ವಿಲ್ ಎಂದು ಸ್ವಿಜರ್ಲೆಂಡ್ ಮೂಲದ ನಿಯೋ ಸನ್ಯಾಸ್ ಸಂಸ್ಥೆ Neo Sannyas International ಹೇಳಿಕೊಂಡಿದೆ.

NSI ವಿಲ್ ನಕಲಿ: Osho Friends Foundation
ಓಶೋ ಆಸ್ತಿಯ ಹೋರಾಟದಲ್ಲಿ ನಿರತರಾಗಿರುವ ಓಶೋ ಫ್ರೆಂಡ್ಸ್ ಫೌಂಡೇಷನ್ ಮಾತ್ರ ಈ ವೀಲುನಾಮೆ ನಕಲಿ ಎಂದು ವಾದಿಸುತ್ತಿದೆ. ಪುಣೆಯಲ್ಲಿರುವ ಸುಮಾರು 10 ಎಕರೆಯಷ್ಟು ವಿಸ್ತಾರದ ಓಶೋ ಆಶ್ರಮ ಹಾಗೂ ಓಶೋ ಅವರ ತತ್ವಬೋಧನೆಗಳ ಮಾರಾಟದಿಂದ ಪಡೆದ ಕೋಟ್ಯಂತರ ರುಪಾಯಿ ಹಣವೆಲ್ಲವನ್ನೂ ದೋಚಲು ನಿಯೋ ಸಂಸ್ಥೆ ಈ ನಕಲಿ ವಿಲ್ ಸೃಷ್ಟಿಸಿದೆ ಎಂದು ಆರೋಪಿಸಿದ್ದು, ಈ ಬಗ್ಗೆ ಪುಣೆಯ ಕೋರ್ಟಿಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದೆ.

ಸಾಯಿಬಾಬಾ ವಿಲ್ ಸಹ ವಿವಾದದ ಗೂಡು
ಪುಟ್ಟಪರ್ತಿಯ ಶ್ರೀಸತ್ಯ ಸಾಯಿಬಾಬಾ ಅವರ ಮರಣಾನಂತರ ಸಾಯಿಬಾಬಾ ಅಪಾರ ಆಸ್ತಿಯ ಬಗ್ಗೆ ಅಧಿಕೃತ ವಿಲ್ ಇಲ್ಲದ ಕಾರಣ ಅನೇಕ ನಕಲಿ ವಿಲ್ ಗಳು ಸೃಷ್ಟಿಯಾಗಿ ಹೀಗೆಯೇ ವಿವಾದಗಳನ್ನೆಬ್ಬಿಸುತ್ತಿರುವುದು ಗಮನಾರ್ಹವಾಗಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications