ಎಲ್ಪಿಜಿ ಪೋರ್ಟಬಲಿಟಿಯೂ ಸಾಧ್ಯ

ಎಲ್ಪಿಜಿ ಪೋರ್ಟಬಲಿಟಿ ಯೋಜನೆ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೇಶದ 30 ನಗರಗಳಲ್ಲಿ ಪ್ರಾಯೋಗಿಕವಾಗಿ ಅ.5ರಿಂದ ಜಾರಿಗೆ ಬರಲಿದೆ. ನಿಮ್ಮ ಎಲ್ಪಿಜಿ ವಿತರಕರು ಸರಿಯಾದ ಸೇವೆ ನೀಡದಿದ್ದರೆ, ನೀವು ಬೇರೆ ಕಂಪನಿಗೆ ಬದಲಾವಣೆ ಹೊಂದಬಹುದು.
ಸೂಕ್ತ ಸಮಯಕ್ಕೆ ಅಡುಗೆ ಅನಿಲ ಪೂರೈಸುತ್ತಿಲ್ಲ, ಹೆಚ್ಚಿನ ದರ ವಸೂಲಿ ಮಾಡುತ್ತಾರೆ. ಸೂಕ್ತ ಸೇವೆ ನೀಡುವುದಿಲ್ಲ ಎಂಬ ಗ್ರಾಹಕರ ದೂರು ಬಗೆಹರಿಸಲು ಮುಂದಾಗಿರುವ ಕೇಂದ್ರ ಸರ್ಕಾರ 'ಎಲ್ಪಿಜಿ ಪೋರ್ಟಬಲಿಟಿ' ಯೋಜನೆ ಜಾರಿಗೆ ತರುತ್ತಿದೆ.
ಈ ಮೂಲಕ ಗ್ರಾಹಕರು ಇನ್ನು ಮುಂದೆ ಸೂಕ್ತ ಸೇವೆ ಒದಗಿಸದ ಡೀಲರ್ ಗಳನ್ನು ಅಥವಾ ಅನಿಲ ಕಂಪನಿಯನ್ನೇ ಬದಲಾಯಿಸಿ, ತಮಗೆ ಬೇಕಾದ ಡೀಲರ್ ಅಥವಾ ಕಂಪನಿಗಳಿಂದ ಸಿಲಿಂಡರ್ ಪಡೆಯಲು ಅವಕಾಶವಿದೆ.
ಪ್ರಾಯೋಗಿಕವಾಗಿ ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ ದೇಶದ 30 ನಗರಗಳಲ್ಲಿ ಯೋಜನೆ ಜಾರಿಗೆ ಬರುತ್ತಿದೆ. ಯೋಜನೆಗೆ ಸಿಗುವ ಪ್ರತಿಕ್ರಿಯೆ ನಂತರ ದೇಶದ ಇತರ ನಗರಗಳಿಗೂ ಸೇವೆ ವಿಸ್ತರಣೆ ಮಾಡಲು ಪೆಟ್ರೋಲಿಯಂ ಇಲಾಖೆ ನಿರ್ಧರಿಸಿದೆ.
ಪೋರ್ಟಬಲಿಟಿ ಹೇಗೆ : ಈ ಯೋಜನೆ ಮೂಲಕ ವಿತರಕರು ಅಥವಾ ಕಂಪನಿ ಬದಲಾಯಿಸುವ ಗ್ರಾಹಕರು ನೇರವಾಗಿ ವಿತರಕರ ಬಳಿ ತೆರಳಿ ಈ ಕುರಿತು ಅರ್ಜಿ ನೀಡಬಹುದು. ಇಲ್ಲದೇ ಹೋದಲ್ಲಿ ಆನ್ಲೈನ್ ಮೂಲಕವೇ ಈ ಬೇಡಿಕೆ ಸಲ್ಲಿಸಬಹುದು.
ಆನ್ಲೈನ್ನಲ್ಲೂ ಡೀಲರ್ ಅಥವಾ ಕಂಪನಿ ಬದಲಿಸುವ ಆಯ್ಕೆಗಳನ್ನು ಒದಗಿಸಲಾಗುತ್ತದೆ. ಅಲ್ಲದೆ ಇಂತಹ ಬೇಡಿಕೆಗಳ ಕುರಿತು ಕಂಪನಿ ಅಥವಾ ಡೀಲರ್ ಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಆನ್ಲೈನ್ ಮೂಲಕವೇ ಮಾಹಿತಿ ಕಲೆ ಹಾಕಲು ಇಲಾಖೆ ನಿರ್ಧರಿಸಿದೆ.
ಗ್ರಾಹಕರು ಡೀಲರ್ ಅಥವ ಕಂಪನಿಯನ್ನು ಬದಲಾವಣೆ ಮಾಡಲು ಬಯಸಿ ಅರ್ಜಿ ಸಲ್ಲಿಸಿದರೆ, ಅದನ್ನು ತಿರಸ್ಕರಿಸುವಂತಿಲ್ಲ. ಈ ಕುರಿತ ಪ್ರತಿಯೊಂದು ಮಾಹಿತಿಯೂ ಇಲಾಖೆಗೆ ರವಾನೆಯಾಗುತ್ತಿರುತ್ತದೆ. ಹೆಚ್ಚಿನ ಮಾಹಿತಿಗಾರಿ ಪೆಟ್ರೋಲಿಯಂ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಬಹುದು.
-
LPG Crisis: ಭಾರತದ ಎಲ್ಪಿಜಿ ಬಿಕ್ಕಟ್ಟಿನ ಚರ್ಚೆಯ ಹಿಂದಿನ ವಾಸ್ತವ: ನೀತಿ ವೈಫಲ್ಯವಲ್ಲ, ಜಾಗತಿಕ ಇಂಧನ ಆಘಾತ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
ದೇಶದ ಆದ್ಯತೆ ವಲಯಗಳಿಗೆ ಅನಿಲ ಪೂರೈಕೆಗೆ ರಿಲಯನ್ಸ್ ನಿಂದ ಗರಿಷ್ಠ ಉತ್ಪಾದನೆ -
ಗ್ಯಾಸ್ ಸಿಲಿಂಡರ್ ಇಲ್ಲದೆ ಮದುವೆಗೂ ಎದುರಾಯ್ತು ಸಮಸ್ಯೆ, ಗಂಡಿನ ಮನೆಯವರ ಒದ್ದಾಟ... LPG Shortage -
ಹೋಟೆಲ್ ಬಂದ್ ಭೀತಿ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಗ್ಯಾಸ್ ಇಲ್ಲದೆ ಪರದಾಟ... LPG Shortage -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ?












Click it and Unblock the Notifications