ದೆಹಲಿ ಉಪಚುನಾವಣೆ: ಠೇವಣಿ ಕಳೆದುಕೊಂಡ ಆಮ್ ಆದ್ಮಿ ಪಕ್ಷ
ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ದೆಹಲಿಯ ರಜೌರಿ ಗಾರ್ಡನ್ ಉಪ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಮಂಜೀದರ್ ಸಿಗ್ ಸಿರ್ಸಾ ಜಯಭೇರಿ ಬಾರಿಸಿದ್ದಾರೆ.
ನವದೆಹಲಿ, ಏಪ್ರಿಲ್ 13: ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ದೆಹಲಿಯ ರಜೌರಿ ಗಾರ್ಡನ್ ಉಪ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ.
ಬಿಜೆಪಿಯ ಮಂಜೀದರ್ ಸಿಗ್ ಸಿರ್ಸಾ ಅವರು 40,602 ಮತಗಳನ್ನು ಗಳಿಸಿದರೆ. ಕಾಂಗ್ರೆಸ್ಸಿನ ಅಭ್ಯರ್ಥಿ ಮೀನಾಕ್ಷಿ ಚಾಂಡೆಲ ಅವರು 25,950 ಮತಗಳನ್ನು ಮಾತ್ರ ಗಳಿಸಿ ಸೋಲು ಕಂಡಿದ್ದಾರೆ. ಎಎಪಿ ಠೇವಣಿ ಕಳೆದುಕೊಂಡಿದೆ.

ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಎಎಪಿ ಗೆಲುವಿನ ಕನಸು ನುಚ್ಚುನೂರಾಗಿದೆ. ಎಎಪಿ ಅಭ್ಯರ್ಥಿ 10,243 ಮತಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿದೆ.
ಏಪ್ರಿಲ್ 23ರಂದು ಆರಂಭವಾಗುವ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆ ಹೊಂದಿರುವ ಎಎಪಿಗೆ ಈ ಸೋಲು ಆಘಾತಕಾರಿಯಾಗಿದೆ.
ಇತ್ತ ಕರ್ನಾಟಕದಲ್ಲಿ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಅಸ್ಸಾಂ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಕಂಡಿದೆ.












Click it and Unblock the Notifications