ದಸರೆ ದೀಪಾಲಂಕಾರಕ್ಕೆ ಹೊಸ ಮೆರುಗು: ಝಗಮಗಿಸಲಿವೆ 23 ವೃತ್ತಗಳು
ಮೈಸೂರು, ಸೆಪ್ಟೆಂಬರ್. 28 : ನಾಡಹಬ್ಬ ದಸರಾಗೆ ಈ ಬಾರಿ ಒಂದಿಲ್ಲೊಂದು ಹೊಸತನ ನೀಡಲಾಗುತ್ತಿದ್ದು, ಈ ವರ್ಷ ಚಾಮುಂಡಿ ಬೆಟ್ಟದ ರಸ್ತೆಗೆ ವಿಶೇಷ ದೀಪಾಲಂಕಾರ ಮಾಡಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.
ಈ ಕುರಿತು ಈಗಾಗಲೇ ಕಾರ್ಯ ಪ್ರವೃತ್ತರಾಗಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಆಕರ್ಷಕ ಅಲಂಕಾರಕ್ಕೆ ಸಜ್ಜಾಗಿದೆ. ಸಾಮಾನ್ಯವಾಗಿ ಬೆಟ್ಟದ ಮೇಲ್ಭಾಗದಲ್ಲಿ ಕನ್ನಡದಲ್ಲಿ ಸುಸ್ವಾಗತ ಹಾಗೂ ಇಂಗ್ಲಿಷಿನಲ್ಲಿ ವೆಲ್ ಕಮ್ ಎಂಬ ಪದಗಳಿಗೆ ದೀಪಾಲಂಕಾರ ಮಾಡುವುದು ವಾಡಿಕೆ.
ಆದರೆ, ಈ ಬಾರಿ ಬೆಟ್ಟದ ತಪ್ಪಲಿಂದ ದೇವಸ್ಥಾನದವರೆಗಿನ ರಸ್ತೆಯನ್ನು ಬೆಳಗಿಸುವ ಪ್ರಯತ್ನ ನಡೆದಿದೆ. ನಗರದಲ್ಲಿನ ಹಲವು ರಸ್ತೆಗಳು, ವೃತ್ತಗಳನ್ನು ವಿಶೇಷವಾಗಿ ದೀಪಗಳಿಂದ ಸಿಂಗರಿಸಲಾಗುತ್ತಿದೆ. ವಿದ್ಯುತ್ ಸಮಸ್ಯೆ ಇಲ್ಲದ ಹಿನ್ನೆಲೆಯಲ್ಲಿ ಸುಮಾರು 35 ಕಿಮೀ ರಸ್ತೆ, 23 ವೃತ್ತಗಳನ್ನು ಝಗಮಗಿಸುವ ದೀಪಗಳಿಂದ ಅಲಂಕರಿಸಲಾಗುವುದು.
ಇದು ಇದೇ ಮೊದಲ ಪ್ರಯತ್ನವೇನಲ್ಲ. ಆದರೆ, ಎರಡು ವರ್ಷಗಳಿಂದ ಸರಳ ದಸರಾ ಎಂಬ ಕಾರಣ ನೀಡಿ ರಸ್ತೆಗೆ ದೀಪಾಲಂಕಾರ ಮಾಡಿರಲಿಲ್ಲ. ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿ ಬೆಟ್ಟಕ್ಕೆ ಸಾಗುವ ರಸ್ತೆಯವರೆಗೆ ಮಾತ್ರ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ಬಾರಿ ದೀಪಾಲಂಕಾರ ಹೇಗಿರುತ್ತೇ ಗೊತ್ತಾ? ಸದ್ಯ ಲೇಖನದಲ್ಲಿ ಓದಿ ತಿಳಿಯಿರಿ.

ಮಹಿಷಾಸುರ ಸಂಹಾರದ ಚಿತ್ರಣ
ಈ ಸಾರಿ ಚಾಮುಂಡಿ ಬೆಟ್ಟದ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯನ್ನು ಚಿತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ. ಚಾಮುಂಡೇಶ್ವರಿಯ ಪ್ರತಿಕೃತಿಯಿಂದ ಆರಂಭವಾಗಿ, ಮಹಿಷಾಸುರ, ಮಹಿಷಾಸುರ ಸಂಹಾರ ಇತ್ಯಾದಿ ಚಿತ್ರಣಗಳೂ ಇರಲಿವೆ.

ಹಲವು ಪ್ರತಿಕೃತಿಗಳ ಅಳವಡಿಕೆ
ಈ ವರ್ಷ ದೇವರಾಜ ಅರಸು ರಸ್ತೆ ಹಾಗೂ ನ್ಯಾಯಾಲಯ ಎದುರಿನ ಬುಲೆವಾರ್ಡ್ ರಸ್ತೆಗಳಿಗೆ ದೀಪಾಲಂಕಾರ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅರಸು ರಸ್ತೆಯಲ್ಲಿ ಪ್ರತಿವರ್ಷವೂ ದೀಪಾಲಂಕಾರ ಇದ್ದಿದ್ದೇ. ಆದರೆ, ಈ ವರ್ಷ ಕೇವಲ ದೀಪಾಲಂಕಾರ ಮಾತ್ರ ಇರದೇ ಹಲವು ಪ್ರತಿಕೃತಿಗಳನ್ನು ಅಳವಡಿಸಲಾಗುತ್ತಿದೆ.
ಇವೆರಡೂ ರಸ್ತೆಗಳಲ್ಲಿ ಈ ವರ್ಷ 'ವಾಕಿಂಗ್ ಪಾತ್' ಮಾಡಿರುವ ಕಾರಣ ಈ ರಸ್ತೆಗಳಲ್ಲಿ ನಡೆದಾಡುವ ಪ್ರವಾಸಿಗರು ದಸರೆಯ ಹಿನ್ನೆಲೆಯನ್ನು ತಿಳಿದುಕೊಳ್ಳುವುದೂ ಮುಖ್ಯ ಆಶಯ ಎಂದು ವಿಶ್ಲೇಷಿಸಲಾಗಿದೆ.

9 ದಿನಗಳು ಮಾತ್ರ ದೀಪಾಲಂಕಾರ
ಕಳೆದ ವರ್ಷ ದಸರೆಯ ಸಂದರ್ಭದಲ್ಲಿ ಸಾಲು ಸಾಲು ಸರ್ಕಾರಿ ರಜೆಗಳು ಬಂದಿದ್ದ ಕಾರಣ, ದೀಪಾಲಂಕಾರ ಅವಧಿಯನ್ನು ವಿಸ್ತರಿಸಲಾಗಿತ್ತು. ಈ ವರ್ಷ 9 ದಿನಗಳು ಮಾತ್ರ ದೀಪಾಲಂಕಾರ ಇರುವುದೇ ಅಥವಾ ವಿಸ್ತರಿಸುವುದೇ ಎಂಬುದು ತೀರ್ಮಾನವಾಗಬೇಕಿದೆ.

ಸೆಸ್ಕ್ ಅಧಿಕಾರಿಗಳು ಕೊಟ್ಟ ಮಾಹಿತಿ
ಈಗ ಎಲ್ಇಡಿ ದೀಪಗಳ ಬಳಕೆ ಆಗುತ್ತಿರುವ ಕಾರಣ ವಿದ್ಯುತ್ ಬಳಕೆ ಶೇ. 20ರಷ್ಟು ಕಡಿಮೆಯಾಗಿದೆ. ಹಾಗಾಗಿ, ಪ್ರವಾಸಿಗರಿಂದ ವ್ಯಕ್ತವಾಗುವ ಪ್ರತಿಕ್ರಿಯೆ ಹಾಗೂ ಬೇಡಿಕೆಯನ್ನು ನೋಡಿಕೊಂಡು ವಿಸ್ತರಿಸುವ ತೀರ್ಮಾನವನ್ನು ನಂತರ ಮಾಡಲಾಗುವುದು ಎಂದು ಸೆಸ್ಕ್ ಅಧಿಕಾರಿಗಳು ಮಾಹಿತಿ ನೀಡಿದರು.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications