ಮೈಸೂರಿನಲ್ಲಿ ಕೈ ಮಿಲಾಯಿಸಿದ ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರು
ಸರ್ಕಾರಿ ಕಾರ್ಯಕ್ರಮವಾದ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ವೇಳೆ ಕಾಂಗ್ರೆಸ್ ಪರ ಘೋಷಣೆ ಕೂಗಿದ ಹಿನ್ನೆಲೆ ಮೈಸೂರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಪರಸ್ಪರ ತಳ್ಳಾಟ ನೂಕಾಟ ನಡೆದಿದೆ.
ಮೈಸೂರು, ಅಕ್ಟೋಬರ್ 17 : ಸರ್ಕಾರಿ ಕಾರ್ಯಕ್ರಮವಾದ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ವೇಳೆ ಕಾಂಗ್ರೆಸ್ ಪರ ಘೋಷಣೆ ಕೂಗಿದ ಹಿನ್ನೆಲೆ ಮೈಸೂರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಪರಸ್ಪರ ತಳ್ಳಾಟ ನೂಕಾಟ ನಡೆದಿದೆ.
'ವಿಶ್ವನಾಥ್ ಗೆ ಕಾಂಗ್ರೆಸ್ ನಲ್ಲಿ ಕಿಮ್ಮತ್ತಿರಲಿಲ್ಲ' : ಸಿದ್ದರಾಮಯ್ಯ ವಾಗ್ದಾಳಿ
ಮೈಸೂರಿನ ಗಿರಿದರ್ಶಿನಿ ಬಡಾವಣೆಯ ಗಣಪತಿ ದೇವಸ್ಥಾನ ಬಳಿ ಒಳ ಚರಂಡಿ ಕಾಮಗಾರಿಗೆ ಗುದ್ದಲಿ ಪೊಜೆ ನೇರವೇರಿಸುವಾಗ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಭಿಮಾನಿಗಳು ಮತ್ತು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆಸಿದೆ. ಜಿಟಿಡಿ ಪರ ಘೋಷಣೆ ಕೂಗಿದ್ದಕ್ಕೆ ಗಲಾಟೆ ಶುರುವಾಗಿತ್ತು. ಡಾ.ಯತೀಂದ್ರ ಮತ್ತು ಮುಡಾ(ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ ಡಿ.ಧ್ರುವಕುಮಾರ್ ಅವರ ಅಭಿಮಾನಿಗಳಿಂದ ಜೆಡಿಎಸ್ ಕಾರ್ಯಕರ್ತರ ಘೋಷಣೆಗೆ ವಿರೋಧ ವ್ಯಕ್ತವಾಗಿದೆ.
ಈ
ನಡುವೆ
ಸಿಎಂ
ಪುತ್ರ
ಯತೀಂದ್ರ
ಅವರ
ಜತೆ
ಕಾಂಗ್ರೆಸ್
ಕಾರ್ಯಕರ್ತರ
ದಂಡು
ಆಗಮಿಸಿದ್ದು,
ಸರ್ಕಾರಿ
ಕಾರ್ಯಕ್ರಮದಲ್ಲಿ
ಸಾಂವಿಧಾನಿಕ
ಹುದ್ದೆಯಲ್ಲದವರು
ಭಾಗವಹಿಸಿರುವುದಕ್ಕೆ
ಜೆಡಿಎಸ್
ಜಿ.ಪಂ
ಸದಸ್ಯರು
ಹಾಗೂ
ತಾ.ಪಂ
ಸದಸ್ಯರು
ಆಕ್ಷೇಪ
ವ್ಯಕ್ತಪಡಿಸಿದ್ದಾರೆ
ಎನ್ನಲಾಗುತ್ತದೆ.
ಇದರಿಂದ
ಮಾತಿಗೆ
ಮಾತು
ಬೆಳೆದು
ಸಿಎಂ
ಪುತ್ರ
ಯತೀಂದ್ರ
ಹಾಗೂ
ಜೆಡಿಎಸ್
ಶಾಸಕ
ಜಿ.ಟಿ
ದೇವೇಗೌಡರ
ಸಮ್ಮುಖದಲ್ಲಿ
ಎರಡು
ಪಕ್ಷದ
ಕಾರ್ಯಕರ್ತರ
ಘರ್ಷಣೆಗಿಳಿದು
ಕೈಕೈ
ಮಿಲಾಯಿಸುವ
ಹಂತಕ್ಕೆ
ತಲುಪಿದ್ದರು.
ಈ
ವೇಳೆ
ತಮ್ಮ
ಕಾರ್ಯಕರ್ತರನ್ನ
ಜಿ.ಟಿ
ದೇವೇಗೌಡರು
ಸಮಾಧಾನಪಡಿಸಿದ್ದು,
ಪೊಲೀಸರು
ಆಗಮಿಸಿ
ಪರಿಸ್ಥಿತಿ
ಹತೋಟಿಗೆ
ತಂದಿದ್ದಾರೆ.