ರಾಗಿ ಮುದ್ದೆ ತಯಾರಿಗೂ ಬಂತು ಅತ್ಯಾಧುನಿಕ ಯಂತ್ರ
ಮೈಸೂರು, ಜುಲೈ 11: ಕರ್ನಾಟಕ ಮಣ್ಣಿನ ಸೊಗಡಿನ ರಾಗಿ ಮುದ್ದೆ ತಯಾರಿಗೂ ಯಂತ್ರ ಬಂದಿದೆ. ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಸಿಎಫ್ಟಿಆರ್ಐ) ಈ ಅತ್ಯಾಧುನಿಕ ಯಂತ್ರವನ್ನು ತಯಾರಿಸಿದ್ದು ಸೋಮವಾರ ಈ ಯಂತ್ರ ಲೋಕಾರ್ಪಣೆಗೊಂಡಿತು.
ರಾಗಿ ಮುದ್ದೆ ಅಂದ್ರೆ ಸಾಕು ನಮಗೆ ಥಟ್ಟನೆ ನೆನಪಾಗೋದು, ದೇವೇಗೌಡರು. ಹೀಗಾಗಿ ಅವರೇ ಈ ಯಂತ್ರವನ್ನು ಲೊಕಾರ್ಪಣೆಗೊಳಿಸಿದರು. ದೇಶದ ಪ್ರಥಮ ರಾಗಿ ಮುದ್ದೆ ತಯಾರಿಸುವ ಯಂತ್ರ ಇದಾಗಿದೆ.
ಎಚ್.ಡಿ.ದೇವೇಗೌಡ ಭಾರತದ ಪ್ರಧಾನಿಯಾಗಿದ್ದ ವೇಳೆ ಮುದ್ದೆಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಲಭಿಸಿತು. ದೇಶದ ಇತರೆ ರಾಜ್ಯಗಳ ಜನರು ಬೆರಗುಗಣ್ಣಿನಿಂದ ರಾಗಿಮುದ್ದೆಯನ್ನು ನೋಡಲು ಶುರು ಮಾಡಿದರು. ಪಂಚತಾರ ಹೋಟೆಲ್ ಗಳ ಮೆನುವಿನಲ್ಲೂ ಮುದ್ದೆಗೆ ಸ್ಥಾನ ಲಭಿಸಿತು.
ಆದರೆ ಇದರ ಮೇಕಿಂಗ್ ಸುಲಭವಾಗಿರದ ಕಾರಣ ಬಹುತೇಕರು ಮುದ್ದೆ ಮಾಡಲು ಮೂಗು ಮುರಿಯುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕಹಿ ಸತ್ಯ ಅರಿತ ಸಿಎಫ್ಟಿಆರ್ಐ ವಿಜ್ಞಾನಿಗಳನ್ನು ಮುದ್ದೆ ತಯಾರಿಸುವ ಯಂತ್ರದ ಶೋಧನೆಗೆ ಮುಂದಾಗಿ ಅದರಲ್ಲಿ ಯಶಸ್ವಿಯಾಗಿದ್ದಾರೆ.

ತಯಾರಿಸುವ ವಿಧಾನ ಹೇಗೆ?
ಮುದ್ದೆ ತಯಾರಿಸಲು ಬಳಸುವ ರಾಗಿ ಹಿಟ್ಟು, ನೀರು, ಉಪ್ಪು ಸೇರಿದಂತೆ ಮೂಲ ಕಚ್ಚಾ ಪದಾರ್ಥಗಳನ್ನು ಈ ಯಂತ್ರದಲ್ಲಿ ಹಾಕಿದರೆ ಮುದ್ದೆಯಾಗಿ ಯಂತ್ರದಿಂದ ಹೊರ ಬರುತ್ತದೆ. ಯಾವ ಗಾತ್ರಕ್ಕೆ ಬೇಕು ಎಂಬುದನ್ನೂ ಯಂತ್ರದಲ್ಲಿ ನಿರ್ಧರಿಸುವ ಅವಕಾಶವಿದೆ.

ಎಷ್ಟು ಮುದ್ದೆ ತಯಾರಾಗುತ್ತದೆ…?
ಇದರ ಸಾಮರ್ಥ್ಯಕ್ಕನುಗುಣವಾಗಿ ಗಂಟೆಗೆ 250 ಕ್ಕೂ ಹೆಚ್ಚು ಮುದ್ದೆಗಳು ಯಂತ್ರ. ಅದಕ್ಕನುಗುಣವಾದ ಹಿಟ್ಟು, ಉಪ್ಪು , ನೀರು ಬೆರಸಿದರೆ ಸಾಕು. 250 ಮುದ್ದೆ ತಯಾರಿಗೆ 25 ಕೆಜಿ ಹಿಟ್ಟು ಬೇಕಾಗುತ್ತದೆ.

ಮಷಿನ್ ಗೆ ತಗಲುವ ವೆಚ್ಚವೆಷ್ಟು…?
ಮುದ್ದೆ ತಯಾರಿಸುವ ನೂತನ ಮಷಿನ್ ಬೆಲೆ 3.5 ಲಕ್ಷ. ಇದನ್ನು ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಏಕಕಾಲದಲ್ಲಿ ಬಳಕೆಗಾಗಿ ಉಪಯೋಗಿಸಬಹುದಾಗಿದ್ದು, ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಎಂದು ಸಿಎಫ್ಟಿಆರ್ಐ ನಿರ್ದೇಶಕ ಪ್ರೊ.ರಾಮರಾಜಶೇಖರ್ ಒನ್ ಇಂಡಿಯಾಗೆ ತಿಳಿಸಿದರು.

ಮಷಿನ್ ತಯಾರಿಸಿದ ಹಿನ್ನಲೆ
ಚಪಾತಿ ಮೆಷಿನ್ ಹಾಗೂ ಸ್ವಯಂಚಾಲಿತ ದೋಸೆ ಮಷಿನ್ ನನ್ನು ಮಾರುಕಟ್ಟೆಗೆ ಪ್ರಪ್ರಥಮ ಬಾರಿಗೆ ಹೊರ ತಂದಂತಹ ಕೀರ್ತಿ ಇದೇ ಸಿಎಫ್ಟಿಆರ್ಐ ಗೆ ಸಲ್ಲುತ್ತದೆ. ಇದೇ ಹಿನ್ನಲೆಯಲ್ಲಿ ಹಲವು ದಿನಗಳಿಂದ ರಾಗಿ ಮುದ್ದೆಯ ಮಷಿನ್ ನನ್ನು ತಯಾರಿಸಬೇಕೆಂಬ ಒತ್ತಡ ಬಂದ ಹಿನ್ನೆಲೆ ತನ್ನ ಕಾರ್ಯ ಕ್ಷಮತೆಯನ್ನು ಒಳಗೊಂಡ ಒಂದು ತಂಡ ತಯಾರಿಸಿ, ಸುಮಾರು 1 ವರುಷದ ಅವಧಿಯೊಳಗಾಗಿ ಈ ಮಷಿನ್ ಸಿದ್ಧಪಡಿಸಿ ಯಶಸ್ವಿಯಾಗಿದೆ.

ಮುದ್ದೆ ರುಚಿ ಸವಿದು ಆನಂದಿಸಿದ ಮಣ್ಣಿನ ಮಗ
ದೇವೇಗೌಡ ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಗಿ ಮುದ್ದೆಯನ್ನು ಇಡೀ ದೇಶಕ್ಕೆ ಪರಿಚಯಿಸಿದ್ದರು. ಅದರಂತೆ ದೇವೇಗೌಡರ ಸ್ವತಃ ತಮ್ಮ ಕೈಯಿಂದಲೇ ರಾಗಿ ಮುದ್ದೆ ತಯಾರಿಸುವ ಯಂತ್ರವನ್ನು ಲೋಕಾಪರ್ಣೆಗೊಳಿಸಿದರು.
ಚಾಲನೆ ನೀಡಿದ ಬಳಿಕ ರಾಗಿ ಮುದ್ದೆಯ ರುಚಿ ನೋಡುವ ಮೂಲಕ ಎಲ್ಲರ ಗಮನ ಸೆಳೆದರು. ಮುದ್ದೆ ತಯಾರಿಸುವ ವಿಧಾನವನ್ನ ಪರಿಶೀಲಿಸಿದರು. ಈ ಯಂತ್ರದಿಂದ ತಯರಾದ ಮುದ್ದೆಯನ್ನ ಒಂದು ತುತ್ತು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications