ಕೆಎಸ್ಟಿಡಿಸಿ ವತಿಯಿಂದ ಮೈಸೂರು-ತಿರುಪತಿ ಪ್ರವಾಸ ಪುನರಾರಂಭ
ಮೈಸೂರು, ಫೆಬ್ರವರಿ 5: ಕೊರೊನಾ ಸೋಂಕಿನ ಭೀತಿಯಿಂದ ಕಳೆದ ಮಾರ್ಚ್ ಅಂತ್ಯದಿಂದಲೇ ಸ್ಥಗಿತಗೊಂಡಿದ್ದ ಮೈಸೂರು-ತಿರುಪತಿ ಪ್ಯಾಕೇಜ್ ಅನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಪುನರಾರಂಭಿಸಿದೆ. ಇದೇ ಫೆ.9ರಿಂದ ಮೊದಲ ಪ್ರವಾಸ ನಿಗದಿಯಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್ಟಿಡಿಸಿ)ದಿಂದ ಮೈಸೂರಿನಿಂದ ತಿರುಪತಿಗೆ 2 ದಿನಗಳ ಪ್ರವಾಸಕ್ಕೆ 2,585 ರೂ. ಹಾಗೂ 3 ದಿನಗಳ ಪ್ರವಾಸಕ್ಕೆ 3,960 ರೂ. ದರ ನಿಗದಿ ಮಾಡಲಾಗಿದೆ. 2 ದಿನಗಳ ಪ್ಯಾಕೇಜ್ನಲ್ಲಿ ತಿರುಪತಿ, ಮಂಗಾಪುರ ಹಾಗೂ 3 ದಿನಗಳ ಪ್ಯಾಕೇಜ್ನಲ್ಲಿ ತಿರುಪತಿ, ಮಂಗಾಪುರ, ಕಾಳಹಸ್ತಿ ಮತ್ತು ಸ್ಥಳೀಯ ದೇವಾಲಯಗಳ ದರ್ಶನ ಪಡೆಯಬಹುದಾಗಿದೆ.
ಉಪಹಾರ, ಊಟ ಹೊರತುಪಡಿಸಿ ದರ್ಶನಕ್ಕೆ ಟಿಕೆಟ್ ಹಾಗೂ ತಂಗಲು ಕೊಠಡಿಗಳ ವ್ಯವಸ್ಥೆ ಎಲ್ಲವನ್ನೂ ಅಭಿವೃದ್ಧಿ ನಿಗಮವೇ ನೋಡಿಕೊಳ್ಳಲಿದೆ.

ಸದ್ಯ 2 ಬಸ್ಗಳನ್ನು ಸಂಚಾರಕ್ಕೆ ಬಿಡಲಾಗುತ್ತಿದ್ದು, ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಬಸ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು. ಸದ್ಯ ಈಗಾಗಲೇ 20 ಮಂದಿ ಮುಂಗಡ ಕಾಯ್ದಿರಿಸಿದ್ದಾರೆ. 39 ಮಂದಿ ಕಾಯ್ದಿರಿಸಿದರೆ ಒಂದು ಟ್ರಿಪ್ ಹೊರಡಲಿದೆ. ನಂತರ ಬಳಿಕ ಮತ್ತೆ ಮುಂಗಡ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೈಸೂರು ವಿಭಾಗದ ವ್ಯವಸ್ಥಾಪಕ ಚೇತನ್ ಹೇಳಿದ್ದಾರೆ.
ʻಮೈಸೂರು-ತಿರುಪತಿ ಸಂಚಾರ ಪುನರಾರಂಭಿಸುವಂತೆ ಕಳೆದ 4 ತಿಂಗಳುಗಳಿಂದರೂ ಪ್ರವಾಸಿಗರಿಂದ ಒತ್ತಡ ಬರುತ್ತಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ನಂತರ ಪ್ಯಾಕೇಜ್ ಟೂರ್ ಆರಂಭಿಸುವಂತೆ ಅನುಮತಿ ದೊರೆತಿದ್ದು, ಫೆ.4ರಿಂದ ನಿರಂತರ ಪ್ರವಾಸ ಆರಂಭವಾಗಲಿದೆ' ಎಂದರು.
ಸಾರ್ವಜನಿಕರು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವೆಬ್ಸೈಟ್ ಮೂಲಕ ಅಥವಾ ಜೆಎಲ್ಬಿ ರಸ್ತೆಯಲ್ಲಿರುವ ಪ್ರವಾಸೋದ್ಯಮ ಕಚೇರಿಗೆ ಬಂದು ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹಿರಿಯ ನಾಗರಿಕರಿಗೆ ಶೇ.20ರಷ್ಟು ರಿಯಾಯಿತಿ ಇದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2423652, ಮೊ. 8970650070 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮೈಸೂರು ವಿಭಾಗದ ವ್ಯವಸ್ಥಾಪಕ ಚೇತನ್ ಅವರು ತಿಳಿಸಿದ್ದಾರೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ












Click it and Unblock the Notifications