ಚಾಮುಂಡಿಗೆ ಆಷಾಢ ಮಾಸದಲ್ಲಿ ದಾಖಲೆಯ ಆದಾಯ
ಮೈಸೂರು, ಜುಲೈ 28 : ವಿಶ್ವವಿಖ್ಯಾತ ಚಾಮುಂಡೇಶ್ವರಿ ದೇಗುಲ ಮುಂದಿನ ದಿನಗಳಲ್ಲಿ ಕರ್ನಾಟಕದ ಅತೀ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಕೇವಲ ಆಷಾಢ ಮಾಸದ 4 ಶುಕ್ರವಾರಗಳು ಸೇರಿ ಏಪ್ರಿಲ್ನಿಂದ ಜುಲೈ 26ರವರೆಗೆ ದೇವಸ್ಥಾನದ ಪ್ರವೇಶ ಶುಲ್ಕ, ಹುಂಡಿ ಗಳಿಕೆ ಹಾಗೂ ಇತರೆ ಸೇವಾ ಕಾಣಿಕೆಗಳಿಂದ 11.08 ಕೋಟಿ ರೂ.ಗಳ ದಾಖಲೆ ಆದಾಯ ಬಂದಿದೆ.

ಕಳೆದ ಮೂರು ವರ್ಷಗಳಿಂದ ದೇವಾಲಯದ ಆದಾಯ ಗಣನೀಯವಾಗಿ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಪ್ರವೇಶ ಶುಲ್ಕದ ಮೂಲಕವೇ 1 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.
2015ರಲ್ಲಿ ಇದೇ ಅವಧಿಯಲ್ಲಿ ಹುಂಡಿಯಲ್ಲಿ 1,62,92,707 ರೂ. ಸಂಗ್ರಹವಾಗಿದ್ದರೆ, 2016ರಲ್ಲಿ 3,51,39,248 ರೂ. ಶೇಖರಣೆಯಾಗಿತ್ತು. ಈ ವರ್ಷ ಇದನ್ನು ಮೀರಿ 3,86,30,365 ರೂ. ಸಂಗ್ರಹವಾಗಿದೆ. ಇದೇ ರೀತಿ ಕ್ರಮವಾಗಿ ಸೇವಾ ಕಾಣಿಕೆ ಮತ್ತು ಇತರೆ ಮೂಲಗಳಿಂದ 4,35,29,205 ರೂ., 4,35,08,507 ರೂ. ಹಾಗೂ 7,22,07, 104 ರೂ. ಆದಾಯ ಬಂದಿದ್ದು, ಒಟ್ಟಾರೆ 2017ರಲ್ಲಿ 11,08,37, 469 ರೂ. ಆದಾಯ ಬಂದಿದೆ.
ನಾಲ್ಕು ಆಷಾಢ ಶುಕ್ರವಾರ ಹಾಗೂ ಚಾಮುಂಡೇಶ್ವರಿ ವರ್ಧಂತಿ ಅವಧಿಯಲ್ಲಿ ಹುಂಡಿಯಲ್ಲಿ 1,74,32,412 ರೂ. ಸಂಗ್ರಹವಾಗಿದ್ದು, ಇದೂ ದಾಖಲೆಯಾಗಿದೆ. ನೆರೆ ರಾಜ್ಯಗಳ ಹಾಗೂ ರಾಜ್ಯಾದ್ಯಂತ ಸಾವಿರಾರು ಮಂದಿ ಹರಿದು ಬಂದಿದ್ದು, 50 ರೂ ಹಾಗೂ 300 ರೂ. ಟಿಕೆಟ್ ಮೂಲಕ ವಿಶೇಷ ದರ್ಶನ ಪಡೆದಿದ್ದಾರೆ.
ಮೊದಲ ಶುಕ್ರವಾರ 18,21,370ನ ರೂ. ಎರಡನೇ ಶುಕ್ರವಾರ 22,70,410 ರೂ., ಮೂರನೇ ಶುಕ್ರವಾರ 23,78,250 ರೂ., ಚಾಮುಂಡೇಶ್ವರಿ ವರ್ಧಂತಿಯಂದು 15,36,340 ರೂ. ಹಾಗೂ ನಾಲ್ಕನೇ ಶುಕ್ರವಾರ 23,76,660 ರೂ. ಪ್ರವೇಶದ ಮೂಲಕ ಹಣ ಸಂಗ್ರಹವಾಗಿ ದಾಖಲೆ ನಿರ್ಮಾಣವಾಗಿದೆ.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications