ಮೈಸೂರು; ವೇದಿಕೆ ಇಳಿದು ಸಾರ್ವಜನಿಕರೊಂದಿಗೆ ಮೋದಿ ಯೋಗಾಭ್ಯಾಸ

ಮೈಸೂರು, ಜೂನ್ 21: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಜಾನೆ 15 ಸಾವಿರ ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಯೋಗಾಸನ ಮಾಡುವ ಮೂಲಕ ಹೊಸದೊಂದು ಭಾಷ್ಯ ಬರೆದರು.

ಮಂಗಳವಾರ ಬೆಳಗ್ಗೆ 6.20ಕ್ಕೆ ರಾಡಿಸನ್‌ ಬ್ಲ್ಯೂ ಹೊಟೇಲ್‌ನಿಂದ ಹೊರಟ ಮೋದಿ 6.30ಕ್ಕೆ ಅರಮನೆ ಆವರಣಕ್ಕೆ ತಲುಪಿದರು. 8ನೇ ವಿಶ್ವ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತದನಂತರದಲ್ಲಿ ಯೋಗಾಸನ ಮಾಡಿದರು.

ಅರಮನೆ ಮೈದಾನದ ಮುಂಭಾಗದಲ್ಲಿ ಭವ್ಯ ವೇದಿಕೆಯ ಮೇಲೆ ಭಾಷಣ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ದಿಢೀರನೇ ವೇದಿಕೆಯಿಂದ ಇಳಿದು ಸಾರ್ವಜನಿಕರೊಂದಿಗೆ ಯೋಗ ಮಾಡುವ ಮೂಲಕ ಆಶ್ಚರ್ಯ ಮೂಡಿಸಿದರು. ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, 15 ಸಾವಿರ ಮಂದಿಯೊಂದಿಗೆ ಯೋಗಾಭ್ಯಾಸ ನಡೆಸಿದರು.

ವಿಶ್ವದ ಮೂಲೆ ಮೂಲೆಯಲ್ಲೂ ಯೋಗ

ವಿಶ್ವದ ಮೂಲೆ ಮೂಲೆಯಲ್ಲೂ ಯೋಗ

ಈ ಹಿಂದೆ ಯೋಗದ ಸಂಕೇತವು ಆಧ್ಯಾತ್ಮಿಕ ಸ್ಥಳಗಳು ಅಥವಾ ಸಾಂಪ್ರದಾಯಿಕ ಮನೆಗಳಂತಹ ಸ್ಥಳಗಳಲ್ಲಿ ಮಾತ್ರ ಕಾಣುತ್ತಿತ್ತು. ಆದರೆ ಇಂದು ಇದು ಜಗತ್ತಿನ ಮೂಲೆ ಮೂಲೆಯಲ್ಲಿ ಕಾಣುತ್ತಿದೆ. ಯೋಗವು ವಿಶ್ವ ಕರ್ಮವಾಗಿದೆ, ಪ್ರಪಂಚದ ಎಲ್ಲೆಡೆ ಯೋಗ ಕೆಲಸವಾಗುತ್ತಿದೆ. ಇಡೀ ವಿಶ್ವ ಸಮೂಹಕ್ಕೆ ನಾನು ನಮಸ್ಕರಿಸುತ್ತೇನೆ. ಯೋಗವು ನಮಗೆ, ನಮ್ಮ ದೇಶಕ್ಕೆ, ನಮ್ಮ ಜಗತ್ತಿಗೆ ಶಾಂತಿಯನ್ನು ತರುತ್ತದೆ ಎಂದರು.

ಸಂಸ್ಕೃತದಲ್ಲಿ ಯೋಗದ ಬಗ್ಗೆ ಪ್ರಧಾನಿ ಶ್ಲೋಕದ ಉಲ್ಲೇಖ

ಸಂಸ್ಕೃತದಲ್ಲಿ ಯೋಗದ ಬಗ್ಗೆ ಪ್ರಧಾನಿ ಶ್ಲೋಕದ ಉಲ್ಲೇಖ

ಯೋಗದ ಕುರಿತು ಸಂಸ್ಕೃತದ ಶ್ಲೋಕವೊಂದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉಲ್ಲೇಖಿಸಿದರು. "ಯೇತ್ ಪಿಂಡೆ ತತ್ ಬ್ರಹ್ಮಾಂಡೆ" ಎಂದರೆ, ಯೋಗವು ನಮ್ಮನ್ನು ಜಗತ್ತಿಗೆ ಹೊಂದಿಸಲು ಅಥವಾ ಜಗತ್ತನ್ನು ನಮಗೆ ಹೊಂದಿಸಲು ಬದಲಾಯಿಸುವಂತೆ ಮಾಡುತ್ತದೆ.‌ ಈ ಯೋಗವು ಜನರನ್ನು ಸಂಪರ್ಕಿಸುವ ವಾತಾವರಣವನ್ನು ಸೃಷ್ಟಿಸುತ್ತದೆ, ಯೋಗವು ದೇಶಗಳನ್ನು ಸಂಪರ್ಕಿಸುತ್ತದೆ, ಆ ರೀತಿಯಲ್ಲಿ ಅದು ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.

ನಿರ್ದಿಷ್ಟ ಸಮಯ ಮತ್ತು ಪ್ರದೇಶಕ್ಕೆ ಯೋಗ ಸೀಮಿತವಲ್ಲ

ನಿರ್ದಿಷ್ಟ ಸಮಯ ಮತ್ತು ಪ್ರದೇಶಕ್ಕೆ ಯೋಗ ಸೀಮಿತವಲ್ಲ

ಯೋಗವು ನಿರ್ದಿಷ್ಟ ಸಮಯ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಜನರು ಕೆಲಸದ ವೇಳಾಪಟ್ಟಿಯ ನಡುವೆ ದಂಡಾಸನವನ್ನೂ ಮಾಡುತ್ತಾರೆ ಮತ್ತು ಮತ್ತೆ ಕೆಲಸಕ್ಕೆ ಮರಳುತ್ತಾರೆ. ನಾವು ಸ್ವಾತಂತ್ರ್ಯಕ್ಕೆ 75 ವರ್ಷ ಬಂದ ಸಂಭ್ರಮದಲ್ಲಿ ಇದ್ದೇವೆ. ಇಂದು 75 ನಗರಗಳು, ಐತಿಹಾಸಿಕ ಸ್ಥಳಗಳು, ಸಾಂಸ್ಕೃತಿಕ ಕೇಂದ್ರಗಳಲ್ಲಿ ಯೋಗ ದಿನ ಆಚರಿಸಲಾಗುತ್ತದೆ. ಜ್ಞಾನಿಯಂತೆ, ತನ್ನ ಸೊಬಗು, ಸೌಹಾರ್ದಯುತವಾದ ಯೋಗದ ರಿಂಗ್‌ಗೆ ಹೆಸರುವಾಸಿಯಾದ ಮೈಸೂರು ಪ್ರಪಂಚದಾದ್ಯಂತ ಪಠಿಸಲ್ಪಡುತ್ತಿದೆ.

ಯೋಗಾಭ್ಯಾಸ ಮಾಡಿ ಜೀವನ ನಡೆಸಬೇಕು. ಯೋಗವು ಶಾಂತಿ ಮತ್ತು ಸಮಾಧಾನವನ್ನು ಪಡೆಯಲು ಮಾಧ್ಯಮವಾಗುತ್ತದೆ. ಯೋಗವು ಯೋಗಕ್ಕಾಗಿ ಹೊಸ ಯೋಜನೆಗಳು ಮತ್ತು ಯೋಜನೆಗಳೊಂದಿಗೆ ಬರುತ್ತಿದೆ. ಆಯುಷ್ ಸಚಿವಾಲಯವು ಮೈಸೂರಿನ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ವಿನೂತನ ಡಿಜಿಟಲ್ ಪ್ರದರ್ಶನವನ್ನು ಸ್ಥಾಪಿಸಿದೆ ಇದು ನಿಜಕ್ಕೂ ಖುಷಿಯ ಸಂಗತಿ ಎಂದು ಹೇಳಿದರು.

ಅರಮನೆಯಲ್ಲಿ ಪ್ರಧಾನಿ ಬೆಳಗ್ಗಿನ ಉಪಹಾರ

ಅರಮನೆಯಲ್ಲಿ ಪ್ರಧಾನಿ ಬೆಳಗ್ಗಿನ ಉಪಹಾರ

ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್‌ ನಿವಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಉಪಾಹಾರ ಸೇವಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌, ತ್ರಿಷಿಕಾ ಕುಮಾರಿ ಒಡೆಯರ್‌ ಮತ್ತು ಆದ್ಯವೀರ್ ಒಡೆಯರ್‌ ಸಹ ಇರಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+