ತಾಯಂದಿರ ದಿನದಂದು 'ರಾಜಕುಮಾರ' ಸಿನಿಮಾ ವೀಕ್ಷಿಸಿದ ವೃದ್ಧೆಯರು
ತಾಯಿ ಹಾಗೂ ಮಕ್ಕಳ ಸಂಬಂಧ ಬೆಸೆಯುವ ಅಪರೂಪದ ಚಿತ್ರ ರಾಜಕುಮಾರ ಸಿನಿಮಾವನ್ನು ನೋಡುವ ಭಾಗ್ಯವನ್ನ ಮೈಸೂರಿನ ವೃದ್ದಾಶ್ರಮದಲ್ಲಿದ್ದ ತಾಯಂದಿರಿಗೆ ಪರಿವರ್ತನ ಟ್ರಸ್ಟ್ ವಿಶ್ವ ತಾಯಂದಿರ ದಿನದಂದು ಕಲ್ಪಿಸಿಕೊಟ್ಟಿತು.
ಮೈಸೂರು, ಮೇ 14: ವಿಶ್ವ ತಾಯಂದಿರ ದಿನ ಹಿನ್ನೆಲೆಯಲ್ಲಿ ಪರಿವರ್ತನ ಟ್ರಸ್ಟ್ ವತಿಯಿಂದ ಮೈಸೂರಿನಲ್ಲಿ ವೃದ್ದಾಶ್ರಮದ ತಾಯಂದಿರಿಗೆ ರಾಜಕುಮಾರ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ತಾಯಿ ಹಾಗೂ ಮಕ್ಕಳ ಸಂಬಂಧ ಬೆಸೆಯುವ ಅಪರೂಪದ ಚಿತ್ರ ರಾಜಕುಮಾರ ಸಿನಿಮಾವನ್ನ ನೋಡುವ ಭಾಗ್ಯವನ್ನ ವೃದ್ದಾಶ್ರಮದಲ್ಲಿದ್ದ ತಾಯಂದಿರಿಗೆ ಪರಿವರ್ತನ ಟ್ರಸ್ಟ್ ಕಲ್ಪಿಸಿಕೊಟ್ಟಿತು.
ಮೈಸೂರಿನ ಗಾಯಿತ್ರಿ ಟಾಕೀಸ್ ನಲ್ಲಿ ಐವತ್ತು ತಾಯಂದಿರು ಚಿತ್ರವನ್ನ ವೀಕ್ಷಿಸಿ ಖುಷಿ ಪಟ್ಟರು. ಪರಿವರ್ತನಂ ಟ್ರಸ್ಟ್ ವತಿಯಿಂದ ಗುಲಾಬಿ ಹಾಗೂ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ವೃದ್ದಾಶ್ರಮ ತಾಯಂದಿರಿಗೆ ವಿಶ್ವತಾಯಂದಿರ ದಿನದ ಶುಭಾಶಯ ಕೋರಲಾಯಿತು.

ನಗರ ಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಹಾಗೂ ಉಮಾ ಮಣಿ ಸೇರಿ ಮೈಸೂರಿನ ಯುವಕರು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮೈಸೂರಿಗೆ ಪುನೀತ್ ರಾಜ್ ಕುಮಾರ್ ಭೇಟಿ
ಸಾಂಸ್ಕೃತಿಕ ನಗರಿಗೆ ದಿಢೀರ್ ಭೇಟಿ ನೀಡಿದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ರಾಜಕುಮಾರ ಸಿನಿಮಾ ನಡೆಯುತ್ತಿರುವ ಥಿಯೇಟರ್ಗಳಿಗೆ ತೆರಳಿ ಅಭಿಮಾನಿಗಳ ಕೈ ಕುಲುಕಿದರು. ನಿನ್ನೆ ಸಂಜೆ ಲೀಡೋ, ಸರಸ್ವತಿ ಹಾಗೂ ಲಕ್ಷ್ಮೀ ಥಿಯೇಟರ್ಗಳಿಗೆ ಭೇಟಿ ನೀಡಿದ ಪುನೀತ್ ರಾಜ್ಕುಮಾರ್, ಕೆಲವು ಹೊತ್ತು ಅಭಿಮಾನಿಗಳೊಂದಿಗೆ ಕುಳಿತು ಸಿನಿಮಾ ನೋಡಿ, ಅಭಿಪ್ರಾಯ ಕೇಳಿ ಖುಷಿಪಟ್ಟರು.

ಅಪ್ಪುವಿನ ಅನಿರೀಕ್ಷಿತ ಭೇಟಿಯಿಂದ ಖುಷ್ ಅದ ಅಭಿಮಾನಿಗಳು ಸೆಲ್ಫಿ ತೆಗೆಯಲು ತಾ ಮುಂದು ನಾ ಮುಂದು ಎಂದು ಮುಗಿಬಿದ್ದು ಫೋಟೋ ಕ್ಲಿಕ್ಕಿಸಿಕೊಂಡರು.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications