Get Updates
Get notified of breaking news, exclusive insights, and must-see stories!

ಗೋಲ್ಡ್ ಕಾರ್ಡ್, ಪಾಸ್ ಇದ್ರೂ ನೂಕು ನುಗ್ಗಲು: ದಸರಾ ಆಯೋಜಕರು ಓದಲೇಬೇಕಾದ ಸುದ್ದಿ

ಮೈಸೂರು, ಅಕ್ಟೋಬರ್‌ 25: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ವೇಳೆ ಗೋಲ್ಡ್ ಕಾರ್ಡ್ ತೆಗೆದುಕೊಂಡರೂ ಸಹ ಮೆರವಣಿಗೆ ನೋಡಲಾಗದೇ ನೂಕು ನುಗ್ಗಲು ಉಂಟಾಗುತ್ತದೆ. ಹೀಗಾಗಿ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿ ಹಾಗೂ ದಸರಾ ವೇಳೆ ನಡೆಯುವ ಹಲವು ನ್ಯೂನತೆಗಳನ್ನು ಸರಿ ಪಡಿಸುವಂತೆ ಕೋರಿ ಮಾಜಿ ಮೇಯರ್‌ ಸಂದೇಶ್ ಸ್ವಾಮಿ ಸುಧೀರ್ಘ ಪತ್ರ ಬರೆದಿದ್ದಾರೆ.

ಮೈಸೂರು ದಸರಾ, ವಿಶ್ವವಿಖ್ಯಾತ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಪಾರಂಪರಿಕ ಹಾಗೂ ಐತಿಹಾಸಿಕ ದಸರಾ, ತಾಯಿ ಚಾಮುಂಡೇಶ್ವರಿ ಕೃಪೆಯಿಂದ ವೈಭವೋಪೇತವಾಗಿ ನಡೆದುಕೊಂಡು ಬಂದಿದೆ. ಈ ಬಾರಿ ದಾಖಲೆ ಸಂಖ್ಯೆಯ ಜನ ದಸರಾದಲ್ಲಿ ಪಾಲ್ಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಹೌದು, ಹೆಚ್ಚು ಸಂಖ್ಯೆಯ ಜನ ಈ ಬಾರಿ ದಸರಾ ಕಣ್ತುಂಬಿಕೊಂಡಿದ್ದಾರೆ. ಆದರೆ ಹಲವು ನ್ಯೂನತೆಗಳು, ವೈಫಲ್ಯಗಳಿಂದಾಗಿ ಜನರ ದಸರಾವಾಗಲು ಸಾಧ್ಯವಾಗಿಲ್ಲ.

Mysuru Dasara 2024 Former Mayor Requesting To Correct Many Defects That Happen During Dasara

ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ 40-50 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಆರೂವರೆ ಸಾವಿರ ಪಾವತಿಸಿ ಗೋಲ್ಡ್ ಕಾರ್ಡ್ ಪಡೆದವರು, ಭಾರೀ ದರದ ಟಿಕೆಟ್ ಕೊಂಡವರು, ಉಚಿತ ಪಾಸ್ ಗಳು ದಕ್ಕಿದವರಷ್ಟೇ ಅರಮನೆ ಆವರಣಕ್ಕೆ ಪ್ರವೇಶ ಸಿಗುತ್ತದೆ. ಈ ವ್ಯವಸ್ಥೆಯಲ್ಲಿನ ಗೊಂದಲಗಳಿಗಂತೂ ಇನ್ನೂ ಪರಿಹಾರ ಸಿಕ್ಕಿಲ್ಲ. ಟಿಕೆಟ್, ಗೋಲ್ಡ್ ಕಾರ್ಡ್, ಪಾಸ್ ಇದ್ದವರಿಗೂ ಆಸನ ಸಿಗುವುದಿಲ್ಲ. ಸ್ಥಳಾವಕಾಶಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಪಾಸ್ ವಿತರಣೆ ಆಗಿರುತ್ತದೆ. ಇಂತಹ ಹತ್ತಾರು ದೂರುಗಳು ಪ್ರತಿವರ್ಷ ಕೇಳಿ ಬರುತ್ತವೆ.

ಇನ್ನು ಸಾಮಾನ್ಯರಿಗೆ ಅರಮನೆ ಆವರಣದಲ್ಲಿ ದಸರಾ ನೋಡುವುದು ಕಷ್ಟ. ಮೆರವಣಿಗೆ ಸಾಗುವ ಮಾರ್ಗದಲ್ಲಾದರೂ ಕುಳಿತು ನೆಮ್ಮದಿಯಿಂದ ಜಂಬೂಸವಾರಿ ನೋಡಲಾಗದು. ಅದರಲ್ಲೂ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಶೇಷಚೇತನರು ನೂಕುನುಗ್ಗಲಲ್ಲಿ ಬೆಳಗ್ಗೆಯಿಂದ ಕಾದು ನಿಲ್ಲುತ್ತಾರೆ. ನೀರಿಲ್ಲದೇ, ಶೌಚಾಲಯಕ್ಕೂ ಹೋಗಲಾಗದೆ ಜಂಬೂಸವಾರಿ ಸಾಗುವವರೆಗೂ ನಿಂತಲ್ಲೇ ನಿಂತಿರುತ್ತಾರೆ.

Mysuru Dasara 2024 Former Mayor Requesting To Correct Many Defects That Happen During Dasara

ಅಂಬಾರಿ ಆನೆ ಹತ್ತಿರ ಬರುತ್ತಿದ್ದಂತೆ ನೂಕುನುಗ್ಗಲು ಹೆಚ್ಚಾಗುತ್ತದೆ. ಒಬ್ಬರ ಮೇಲೊಬ್ಬರು ಬೀಳುತ್ತಾರೆ. ಇದರಿಂದ ಹೆಣ್ಣುಮಕ್ಕಳು ನರಕಯಾತನೆ ಅನುಭವಿಸುತ್ತಾರೆ. ಜನದಟ್ಟಣೆಯಲ್ಲಿ ಸಿಲುಕಿ ಮಕ್ಕಳು ನರಳುತ್ತಾರೆ. ಕಳ್ಳತನ, ಜಗಳ, ಹೊಡೆದಾಟಗಳಾಗುತ್ತವೆ. ಆ ವೇಳೆ ರಸ್ತೆ ಭಾಗದಲ್ಲಿರುವ ಪೊಲೀಸರೂ ಅಸಹಾಯಕರಾಗಿರುತ್ತಾರೆ.

ನಮ್ಮ ನಾಡಹಬ್ಬ, ಪಾರಂಪರಿಕ ದಸರಾ ಮಹಾ ಉತ್ಸವದ ವೈಭವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಜನರಿಗೆ ಅಹಿತವಾಗುವ ವೈಫಲ್ಯಗಳನ್ನು ಸರಿಪಡಿಸಿಕೊಂಡು ಒಂದಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಜನರಾ ದಸರಾ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಿ, ಈಗಿನಿಂದಲೇ ಪರಿಹಾರ ಕ್ರಮಗಳಿಗೆ ಮುಂದಾಗಬೇಕು.

ಜಿಲ್ಲಾಸಚಿವರು, ಜಿಲ್ಲಾಧಿಕಾರಿಗಳು, ಜಿಪಂ, ಮುಡಾ, ಪಾಲಿಕೆ, ಪೊಲೀಸ್ ಸೇರಿದಂತೆ ದಸರಾದಲ್ಲಿ ಜವಾಬ್ದಾರಿ ನಿರ್ವಹಿಸುವ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಮಿಟಿ ರಚಿಸಿಕೊಂಡು ಈ ದಿನದಿಂದಲೇ ಸಿದ್ಧತೆ ನಡೆಸಬೇಕು. ದಸರಾವನ್ನು ಇನ್ನೂ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ, ಎಲ್ಲರೂ ಮೆಚ್ಚುವ ರೀತಿಯಲ್ಲಿ ಆಚರಿಸುವಂತಾಗಬೇಕು ಎಂಬುದು ನನ್ನ ಆಶಯ.

ಜನತೆ ಪರವಾಗಿ ಕೆಲವು ಸಲಹೆಗಳು

ಪುರಭವನ ಆವರಣ ಮಾದರಿಯಲ್ಲಿ ಕೆ.ಆರ್.ಆಸ್ಪತ್ರೆ ಆವರಣದಲ್ಲೂ ಹಲವು ಹಂತಗಳ ಆಸನ ವ್ಯವಸ್ಥೆ ಮಾಡಿ, ಹಿರಿಯನಾಗರಿಕರು, ಮಹಿಳೆಯರು, ಮಕ್ಕಳಿಗೆ ದಸರಾ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು.

ಚಾಮರಾಜ ಒಡೆಯರ್ ವೃತ್ತದಿಂದ ಬನ್ನಿಮಂಟಪದವರೆಗೂ ಫುಟ್ ಪಾತ್ ನಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವ್ಯವಸ್ಥಿತವಾಗಿ ಆಸನ ವ್ಯವಸ್ಥೆ ಮಾಡಬಹುದು. ಮಹಿಳೆಯರು-ಮಕ್ಕಳು, ಹಿರಿಯರು, ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ಗ್ಯಾಲರಿಯನ್ನೂ ಕಾಯ್ದಿರಿಸಬಹುದು. ಇದರಿಂದ ನೂಕುನುಗ್ಗಲು ಇಲ್ಲದಂತೆ 10 ಲಕ್ಷಕ್ಕೂ ಹೆಚ್ಚು ಜನ ಸುರಕ್ಷಿತವಾಗಿ ನೆಮ್ಮದಿಯಿಂದ ದಸರಾ ವೀಕ್ಷಣೆ ಮಾಡಬಹುದು.

ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಹಾಗೂ ಸಂಚಾರ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಈಗ ರಕ್ತದೊತ್ತಡ, ಮಧುಮೇಹ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ಹಾಗಾಗಿ ಅಲ್ಲಲ್ಲಿ ವೈದ್ಯರು, ಶುಶ್ರೂಷಕರನ್ನು ನಿಯೋಜಿಸಿ, ಅಗತ್ಯ ಔಷಧಿಗಳನ್ನು ಪೂರೈಸಬೇಕು.

ಪೊಲೀಸರು ಜಂಬೂಸವಾರಿ ಮೆರವಣಿಗೆ ಸಾಗುವ ರಸ್ತೆಯಲ್ಲಿ ನಿಂತು ಬ್ಯಾರಿಕೇಡ್ ನೊಳಗೆ ಜನ ಒಳನುಸುಳದಂತೆ ತಡೆಯುತ್ತಾರೆ. ವ್ಯವಸ್ಥಿತವಾಗಿ ಗ್ಯಾಲರಿಗಳನ್ನು ನಿರ್ಮಿಸಿ, ಗೋಜಲು ಆಗದಂತೆ ಜನರನ್ನು ಕೂರಿಸುವಂತಾದರೆ ಪೊಲೀಸರ ಕಾರ್ಯ ನಿರ್ವಹಣೆಗೂ ಸಹಕಾರವಾಗುತ್ತದೆ.

ವಿಜಯದಶಮಿಯಂದು ಬೆಳಗ್ಗೆ 10ರಿಂದ ರಾತ್ರಿ 10ರವರೆಗೂ ರಾಜಪಥದಲ್ಲಿ ಕಾರ್ಯಕ್ರಮ ಪ್ರದರ್ಶನಕ್ಕೂ ಚಿಂತನೆ ನಡೆಸಬಹುದು. ಜಂಬೂಸವಾರಿ ಬನ್ನಿಮಂಟಪ ತಲುಪಿ ಪಂಜಿನಕವಾಯತು ಮುಗಿದ ನಂತರ, ಗಜಪಡೆಯೊಂದಿಗೆ ಅಶ್ವಾರೋಹಿ ದಳ, ಮಿಲಿಟರಿ ಪೊಲೀಸರ ಬೈಕ್ ಸವಾರಿ ಇನ್ನಿತರ ಕಲಾತಂಡಗಳು ಅರಮನೆವರೆಗೆ ವಾಪಸ್ಸಾದರೆ ಇನ್ನೂ ಅದ್ಭುತವಾಗಿರುತ್ತದೆ. ಗಣರಾಜ್ಯೋತ್ಸವ ಪೆರೆಡ್ ಮಾದರಿಯಲ್ಲಿ ಜನ ವೀಕ್ಷಣೆ ಮಾಡಬಹುದು.

ದಸರಾ ಆರಂಭಕ್ಕೆ 15-20 ದಿನಗಳಿರುವಾಗ ತರಾತುರಿಯಲ್ಲಿ ಸಿದ್ಧತೆ ನಡೆಸುವ ಬದಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತೀ ತಿಂಗಳೂ ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸಬೇಕು. ಪ್ರವಾಸೋದ್ಯಮ, ವಾಣಿಜ್ಯೋದ್ಯಮದ ಮೂಲಕ ಒಂದು ತಿಂಗಳಲ್ಲಿ ವರ್ಷದ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು.

ಈ ರೀತಿಯಲ್ಲಿ ಜನಸಾಮಾನ್ಯರಿಗೂ ದಸರಾ ವೀಕ್ಷಣೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿದರೆ ಇನ್ನೂ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಪ್ರತ್ಯಕ್ಷವಾಗಿ ವಿಜಯದಶಮಿ ಮೆರವಣಿಗೆ ನೋಡಬೇಕೆಂಬ ಮಹಾದಾಸೆ ಉಳ್ಳವರಿಗೂ ಅವಕಾಶ ಸಿಗುತ್ತದೆ.

ರಾಜಮಹಾರಾಜರ ಕಾಲದ ಮೈಸೂರು ದಸರೆಗೆ ತನ್ನದೆ ಆದ ಘನತೆ ಮತ್ತು ಪಾವಿತ್ರ್ಯತೆ ಇದೆ. ಅದನ್ನು ಉಳಿಸುವ ಕೆಲಸ ಆಗಬೇಕು. ಇದಕ್ಕಾಗಿ ದಸರಾ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು ಎಂದು ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+