ಮೈಸೂರು ದಸರಾ ಉದ್ಘಾಟನೆ LIVE: ಇದು ನನ್ನ ಪೂರ್ವಜನ್ಮದ ಪುಣ್ಯ ಎಂದ ಸುಧಾಮೂರ್ತಿ
Recommended Video

Mysore Dasara 2018 : ಮೈಸೂರು ದಸರಾಗೆ ವಿಧ್ಯುಕ್ತ ಚಾಲನೆ ನೀಡಿದ ಸುಧಾ ಮೂರ್ತಿ ಹಾಗು ಎಚ್ ಡಿ ಕೆ
ಮೈಸೂರು, ಅಕ್ಟೋಬರ್ 10: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ.
ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಸಂಭ್ರಮದ ದಸರಾಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಸಾಹಿತಿ ಸುಧಾಮೂರ್ತಿ ಅವರು ವಿಧ್ಯುಕ್ತ ಚಾಲನೆ ಚಾಲನೆ ನೀಡಿದ್ದಾರೆ..

ಹತ್ತು ದಿನಗಳ ಕಾಲವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನಾಡಿನ ಸಾಂಸ್ಕೃತಿಕ ಸೊಗಡಿಗೆ ಕನ್ನಡಿ ಹಿಡಿಯಲಿವೆ. ದಸರಾ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಜನ ಆಗಮಿಸಲಸಿದ್ದು, ವಿಜಯ ದಶಮಿ ದಿನ ನಡೆಯುವ ಜಂಬೂ ಸವಾರಿ ವಿಶ್ವ ಪ್ರಸಿದ್ಧಿ ಗಳಿಸಿದೆ.

ನಾಡಹಬ್ಬದ ಮನಸೂರೆಗೊಳ್ಳುವ ಚಿತ್ರಗಳ ಆಲ್ಬಂ
ಈಗಾಗಲೇ ದಸರಾ ಉದ್ಘಾಟನೆಯಾಗಿದ್ದು, ಅದರ ಕ್ಷಣ ಕ್ಷಣದ ಮಾಹಿತಿಯನ್ನು 'ಒನ್ಇಂಡಿಯಾ ಕನ್ನಡ' ನೀಡಲಿದೆ.
ಹೊಸ ಬಸ್ ಗಳಿಗೆ ಸಿಎಂ ಕುಮಾರಸ್ವಾಮಿ ಮತ್ತು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಚಾಲನೆ ನೀಡಿದರು
ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಯಿಂದ 50 ಹೆಚ್ಚುವರಿ ಬಸ್ ಬಿಡಲು ವ್ಯವಸ್ಥೆ ಮಾಡಲಾಗಿದೆ. ದೇಶ ವಿದೇಶದಿಂದ ಬರುವ ಪ್ರವಾಸಿಗರಿಗೆ ನೆರವಾಗಲಿ ಎಂಬ ಉದ್ದೇಶ.
ಇಂದು ದಸರಾ ಆಚರಣೆ ಮಾಡುತ್ತಿದ್ದರೆ ಅದು ಮೈಸೂರು ಅರಸರ ಕೊಡುಗೆ. ಅಂತಹ ಕುಟುಂಬದ ರಕ್ತಪಾತಕ್ಕೆ ಕಾರಣವಾಗಿದ್ದು ಟಿಪ್ಪು, ಈ ಹೊತ್ತಿನಲ್ಲಾದರೂ ಮೈಸೂರು ಅರಸರಿಗೆ ಗೌರವ ನೀಡಿ. ನಿಮ್ಮ ಕಾಲದಲ್ಲಾದರೂ ಟಿಪ್ಪು ಜಯಂತಿ ಬಂದ್ ಮಾಡಿ: ಸಂಸದ ಪ್ರತಾಪ್ ಸಿಂಹ ಮನವಿ
ನಾನು ಸಂತೋಷದಿಂದ ಮುಖ್ಯಮಂತ್ರಿಯಾಗಿಲ್ಲ. ರಾಜಕೀಯ ಪ್ರವೇಶ ಆಕಸ್ಮಿಕ. ನಾಡಿನ ಜನರ ನೆಮ್ಮದಿಗೆ ಸಂಕಲ್ಪ ಮಾಡುತ್ತೇನೆ ಹಣದ ಕೊರತೆ ಇಲ್ಲ. ಸಂಪನ್ಮೂಲಗಳ ಸದ್ಬಳಕೆ ಸಮಗ್ರ ಯೋಜನೆಗಳ ರೂಪಿಸಲು ಬೆಂಬಲ ನೀಡಿ- ಎಚ್ ಡಿ ಕುಮಾರಸ್ವಾಮಿ
ಸಾಲದ ನೋಟಿಸ್ ಗೆ ಹೆದರಿ ಆತ್ಮಹತ್ಯೆಗೆ ಶರಣಾಗಬೇಡಿ. ಸರಕಾರವನ್ನು ನಂಬಿ ನಿಮ್ಮ ನೆಮ್ಮದಿಯಾಗಿ ಹಲವು ಯೋಜನೆಗಳನ್ನು ರೂಪಿಸುತ್ತೇನೆ. ಆತ್ಮಹತ್ಯೆ ಮಾಡಿಕೊಂಡು ನಿಮ್ಮನ್ನು ನಂಬಿದ ಕುಟುಂಬವನ್ನು ಅನಾಥರನ್ನಾಗಿ ಮಾಡಬೇಡಿ -ಎಚ್ ಡಿ ಕುಮಾರಸ್ವಾಮಿ
ಕೊಡಗು ಪ್ರವಾಹ ಸಂತ್ರಸ್ಥರಿಗೆ, ನಿರಾಶ್ರಿತರಿಗೆ ಇನ್ಫೋಸಿಸ್ ವತಿಯಿಂದ 25 ಕೋಟಿ ರೂ. ಘೋಷಿಸಿದ ಸುಧಾಮೂರ್ತಿ
ನಾಡಿನಲ್ಲಿ ನಾ ಕಂಡ ಅಪರೂಪದ ಮಹಿಳೆ ಸುಧಾ ಮೂರ್ತಿ. ನಾಡಿನ ಅಧಿದೇವತೆಗೆ ಸುಧಾಮೂರ್ತಿ ಪೂಜೆ ಸಲ್ಲಿಸಿದರೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬ ವಿಶ್ವಾಸ ನನಗಿದೆ. ಕೊಡಗಿನಲ್ಲಿ ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸುಧಾಮೂರ್ತಿ ಅವರು ದೇಣಿಗೆ ನೀಡಿದ್ದು ಸಮಾಜ ಸೇವೆಯ ಪ್ರತೀಕ-ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
ರಾಜ್ಯದ ಏಳಿಗೆಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ: ದಸರಾ ಉದ್ಘಾಟನೆ ಬಳಿಕ ಸುಧಾಮೂರ್ತಿ ಹೇಳಿಕೆ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸಚಿವರಾದ ಜಿಟಿ ದೇವೇಗೌಡ, ಎಸ್ ಮಹೇಶ್, ಜಯಮಾಲಾ ಮತ್ತು ಸಂಸದ ಪ್ರತಾಪ್ ಸಿಂಹ ಎಲ್ಲರಿಂದಲೂ ದೇವಿಗೆ ಪುಷ್ಪಾರ್ಚನೆ.
ಬೆಳಿಗ್ಗೆ 10. 55 ಕ್ಕೆ ಕಳಸ ಪೂಜೆ ಆರಂಭ. ಬಳಿಕ ಸಿಂಹಾಸನದಲ್ಲಿ ಆಸೀನರೂಢಲಾಗರಿರುವ ಯದುವೀರ್ ಒಡೆಯರ್
READ MORE












Click it and Unblock the Notifications