ಮೈಸೂರು ದಸರಾ ಕುರಿತ ಅತ್ಯಾಕರ್ಷಕ ಸಾಕ್ಷ್ಯಚಿತ್ರ
ಮೈಸೂರು, ಅ. 12 : ಮೈಸೂರಿನಲ್ಲಿ ಕನ್ನಡ ಪರಿಮಳ, ಮೈಸೂರು ಮಲ್ಲಿಗೆಯ ಘಮಲು, ರುಚಿ ನೆತ್ತಿಗೇರಿಸುವ ಮೈಸೂರು ಪಾಕು, ತಿಂದಿದ್ದನ್ನೆಲ್ಲ ಕರಗಿಸುವ ಮೈಸೂರು ವೀಳ್ಯದೆಲೆ, ಹೆಂಗಳೆಯರ ನೆಚ್ಚಿನ ಮೈಸೂರು ಸಿಲ್ಕ್, ಮದುವೆ ಮತ್ತಿತರ ಸಮಾರಂಭಗಳಲ್ಲಿ ತಲೆಗೇರುವ ಪೇಟ, ಮೈಸೂರು ಸ್ಯಾಂಡಲ್ ಊದಿನಕಡ್ಡಿಯ ಘಮಲು...
ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರೆಂದರೆ ಏನೆಲ್ಲ ನೆನಪಿಗೆ ಬರುತ್ತವೆ. ಆದರೆ, ವಿಜಯನಗರ ಅಧಿಪತ್ಯ ಅಳಿದ ನಂತರ 15ನೇ ಶತಮಾನದಲ್ಲಿ, ಅಂದರೆ 1610ರಲ್ಲಿ ಮೈಸೂರಿನ ಅರಸರಾಗಿದ್ದ ರಾಜ ಒಡೆಯರ್ ಅವರು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದ್ದ ಮೈಸೂರು ದಸರಾ ಸಂಭ್ರಮಕ್ಕೆ ಸರಿಸಮಾನವಾದದ್ದು ಯಾವುದಿದೆ?
ದೂಸರಾ ಇಲ್ಲದ ಮೈಸೂರು ದಸರಾ ಇಡೀ ನಾಡನ್ನು ಮಾತ್ರವಲ್ಲ, ಇಡೀ ಜಗತ್ತನ್ನು ತನ್ನತ್ತ ಸೆಳೆದಿದೆ. ದಸರಾ ಇಲ್ಲದ ಮೈಸೂರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮಲ್ಲಿಗೆ ಮುಡಿದ ಮದುವಣಗಿತ್ತಿಯಂತೆ ಸಿಂಗಾರಗೊಂಡ ಮೈಸೂರನ್ನು ನೋಡಲು ಜನಸಾಗರವೇ ಹರಿದುಬಂದಿದೆ. 750 ಕಿ.ಗ್ರಾಂ. ತೂಕದ ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡೇಶ್ವರಿಯನ್ನು ಹೊತ್ತ ಅರ್ಜುನ ಸೇರಿದಂತೆ ಇತರ ಆನೆಗಳ ಜಂಬೂ ಸವಾರಿಯ ವರ್ಣನೆ ಪದಗಳಲ್ಲಿ ಮಾಡುವುದು ಸಾಧ್ಯವಿಲ್ಲ.

ಐತಿಹಾಸಿಕ ಜಂಬೂ ಸವಾರಿಯ ಜೊತೆಗೆ ದಸರಾ ಕೆರೆ ಮೈದಾನದಲ್ಲಿ ಏರ್ಪಡಿಸಲಾಗಿರುವ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ರೀಡಾ ಸ್ಪರ್ಧೆ, ರಾತ್ರಿಯಲ್ಲಿ ಭವ್ಯವಾಗಿ ಕಂಗೊಳಿಸುವ ಮೈಸೂರು ಅರಮನೆ, ನಗರದಲ್ಲಿ ಹರಡಿಕೊಂಡಿರುವ ಪುರಾತನ ಕಟ್ಟಡಗಳು, ಮನಕ್ಕೆ ಮುದ ನೀಡುವ ಕೆರೆಗಳು, ಮಕ್ಕಳನ್ನು ಪುಳಕಿತಗೊಳಿಸುವ ಜಯಚಾಮರಾಜೇಂದ್ರ ಮೃಗಾಲಯ ನೋಡಿ ಆನಂದಿಸಲು ಎರಡು ಕಣ್ಣು ಮತ್ತು ಸಮಯ ಸಾಲದು.
ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಕಲಾಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ಇಲ್ಲಿ ಕಲಾಪ್ರದರ್ಶನ ನೀಡುವುದು ಕಲಾವಿದರಿಗೂ ಒಂದು ಪ್ರತಿಷ್ಠೆ. ಜೊತೆಗೆ ಸುತ್ತಮುತ್ತ ನೋಡಲು ನೋಡಲು ಚಾಮುಂಡಿಬೆಟ್ಟ, ಬೃಂದಾವನ ಗಾರ್ಡನ್, ಬಲಮುರಿ ಫಾಲ್ಸ್, ಮಾನಸ ಗಂಗೋತ್ರಿ, ಶ್ರೀರಂಗಪಟ್ಟಣ, ನಂಜನಗೂಡು, ರಂಗನತಿಟ್ಟು ಪಕ್ಷಿಧಾನ, ಶಿವನಸಮುದ್ರ, ತಲಕಾಡು, ಬೈಲುಕುಪ್ಪೆ ಇತ್ಯಾದಿ ಇತ್ಯಾದಿ. ಇವನ್ನೆಲ್ಲ ಸವಿಯಲು ದಸರಾ ರಜಾದಿನಗಳು ಸಾಲುವುದಿಲ್ಲ.
ಸಮಯ ಮಾಡಿಕೊಂಡು ಮೈಸೂರಿಗೆ ಪ್ರಯಾಣ ಬೆಳೆಸುವವರು ಇವುಗಳಲ್ಲಿ ಕೆಲವನ್ನಾದರೂ ನೋಡಿ ಆನಂದಿಸಬಹುದು. ಆದರೆ, ಸಮಯಾಭಾವದಿಂದ ಇದ್ದಲ್ಲಿಯೇ ಉಳಿಯುವ ಜನರಿಗಾಗಿ, ಇಡೀ ಮೈಸೂರು ದಸರಾ ಸಂಭ್ರಮದ ಸಾರವನ್ನು ಹಿಡಿದಿಡುವ ಡಾಕ್ಯುಮೆಂಟರಿಯನ್ನು ಜುವಾರಿ ಗಾರ್ಡನ್ ಸಿಟಿ ರಿಯಲ್ ಎಸ್ಟೇಟ್ ಏಜೆನ್ಸಿ ನಿರ್ಮಿಸಿದೆ. ಸುಮಾರು 1 ಗಂಟೆ ಇರುವ ಈ ಡಾಕ್ಯುಮೆಂಟರಿ ಆಂಗ್ಲ ಭಾಷೆಯಲ್ಲಿದ್ದು, ಯೂಟ್ಯೂಬ್ ನಲ್ಲಿ ನೋಡಿ, ಕೇಳಿ ಸಂಭ್ರಮಿಸಿ.
ಎಲ್ಲ ಓದುಗರಿಗೆ ನಾಡಹಬ್ಬ, ನವರಾತ್ರಿ, ವಿಜಯದಶಮಿ ಮತ್ತು ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications