ಮೈಸೂರು ದಸರಾ ಕುರಿತ ಅತ್ಯಾಕರ್ಷಕ ಸಾಕ್ಷ್ಯಚಿತ್ರ
ಮೈಸೂರು, ಅ. 12 : ಮೈಸೂರಿನಲ್ಲಿ ಕನ್ನಡ ಪರಿಮಳ, ಮೈಸೂರು ಮಲ್ಲಿಗೆಯ ಘಮಲು, ರುಚಿ ನೆತ್ತಿಗೇರಿಸುವ ಮೈಸೂರು ಪಾಕು, ತಿಂದಿದ್ದನ್ನೆಲ್ಲ ಕರಗಿಸುವ ಮೈಸೂರು ವೀಳ್ಯದೆಲೆ, ಹೆಂಗಳೆಯರ ನೆಚ್ಚಿನ ಮೈಸೂರು ಸಿಲ್ಕ್, ಮದುವೆ ಮತ್ತಿತರ ಸಮಾರಂಭಗಳಲ್ಲಿ ತಲೆಗೇರುವ ಪೇಟ, ಮೈಸೂರು ಸ್ಯಾಂಡಲ್ ಊದಿನಕಡ್ಡಿಯ ಘಮಲು...
ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರೆಂದರೆ ಏನೆಲ್ಲ ನೆನಪಿಗೆ ಬರುತ್ತವೆ. ಆದರೆ, ವಿಜಯನಗರ ಅಧಿಪತ್ಯ ಅಳಿದ ನಂತರ 15ನೇ ಶತಮಾನದಲ್ಲಿ, ಅಂದರೆ 1610ರಲ್ಲಿ ಮೈಸೂರಿನ ಅರಸರಾಗಿದ್ದ ರಾಜ ಒಡೆಯರ್ ಅವರು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದ್ದ ಮೈಸೂರು ದಸರಾ ಸಂಭ್ರಮಕ್ಕೆ ಸರಿಸಮಾನವಾದದ್ದು ಯಾವುದಿದೆ?
ದೂಸರಾ ಇಲ್ಲದ ಮೈಸೂರು ದಸರಾ ಇಡೀ ನಾಡನ್ನು ಮಾತ್ರವಲ್ಲ, ಇಡೀ ಜಗತ್ತನ್ನು ತನ್ನತ್ತ ಸೆಳೆದಿದೆ. ದಸರಾ ಇಲ್ಲದ ಮೈಸೂರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮಲ್ಲಿಗೆ ಮುಡಿದ ಮದುವಣಗಿತ್ತಿಯಂತೆ ಸಿಂಗಾರಗೊಂಡ ಮೈಸೂರನ್ನು ನೋಡಲು ಜನಸಾಗರವೇ ಹರಿದುಬಂದಿದೆ. 750 ಕಿ.ಗ್ರಾಂ. ತೂಕದ ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡೇಶ್ವರಿಯನ್ನು ಹೊತ್ತ ಅರ್ಜುನ ಸೇರಿದಂತೆ ಇತರ ಆನೆಗಳ ಜಂಬೂ ಸವಾರಿಯ ವರ್ಣನೆ ಪದಗಳಲ್ಲಿ ಮಾಡುವುದು ಸಾಧ್ಯವಿಲ್ಲ.

ಐತಿಹಾಸಿಕ ಜಂಬೂ ಸವಾರಿಯ ಜೊತೆಗೆ ದಸರಾ ಕೆರೆ ಮೈದಾನದಲ್ಲಿ ಏರ್ಪಡಿಸಲಾಗಿರುವ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ರೀಡಾ ಸ್ಪರ್ಧೆ, ರಾತ್ರಿಯಲ್ಲಿ ಭವ್ಯವಾಗಿ ಕಂಗೊಳಿಸುವ ಮೈಸೂರು ಅರಮನೆ, ನಗರದಲ್ಲಿ ಹರಡಿಕೊಂಡಿರುವ ಪುರಾತನ ಕಟ್ಟಡಗಳು, ಮನಕ್ಕೆ ಮುದ ನೀಡುವ ಕೆರೆಗಳು, ಮಕ್ಕಳನ್ನು ಪುಳಕಿತಗೊಳಿಸುವ ಜಯಚಾಮರಾಜೇಂದ್ರ ಮೃಗಾಲಯ ನೋಡಿ ಆನಂದಿಸಲು ಎರಡು ಕಣ್ಣು ಮತ್ತು ಸಮಯ ಸಾಲದು.
ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಕಲಾಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ಇಲ್ಲಿ ಕಲಾಪ್ರದರ್ಶನ ನೀಡುವುದು ಕಲಾವಿದರಿಗೂ ಒಂದು ಪ್ರತಿಷ್ಠೆ. ಜೊತೆಗೆ ಸುತ್ತಮುತ್ತ ನೋಡಲು ನೋಡಲು ಚಾಮುಂಡಿಬೆಟ್ಟ, ಬೃಂದಾವನ ಗಾರ್ಡನ್, ಬಲಮುರಿ ಫಾಲ್ಸ್, ಮಾನಸ ಗಂಗೋತ್ರಿ, ಶ್ರೀರಂಗಪಟ್ಟಣ, ನಂಜನಗೂಡು, ರಂಗನತಿಟ್ಟು ಪಕ್ಷಿಧಾನ, ಶಿವನಸಮುದ್ರ, ತಲಕಾಡು, ಬೈಲುಕುಪ್ಪೆ ಇತ್ಯಾದಿ ಇತ್ಯಾದಿ. ಇವನ್ನೆಲ್ಲ ಸವಿಯಲು ದಸರಾ ರಜಾದಿನಗಳು ಸಾಲುವುದಿಲ್ಲ.
ಸಮಯ ಮಾಡಿಕೊಂಡು ಮೈಸೂರಿಗೆ ಪ್ರಯಾಣ ಬೆಳೆಸುವವರು ಇವುಗಳಲ್ಲಿ ಕೆಲವನ್ನಾದರೂ ನೋಡಿ ಆನಂದಿಸಬಹುದು. ಆದರೆ, ಸಮಯಾಭಾವದಿಂದ ಇದ್ದಲ್ಲಿಯೇ ಉಳಿಯುವ ಜನರಿಗಾಗಿ, ಇಡೀ ಮೈಸೂರು ದಸರಾ ಸಂಭ್ರಮದ ಸಾರವನ್ನು ಹಿಡಿದಿಡುವ ಡಾಕ್ಯುಮೆಂಟರಿಯನ್ನು ಜುವಾರಿ ಗಾರ್ಡನ್ ಸಿಟಿ ರಿಯಲ್ ಎಸ್ಟೇಟ್ ಏಜೆನ್ಸಿ ನಿರ್ಮಿಸಿದೆ. ಸುಮಾರು 1 ಗಂಟೆ ಇರುವ ಈ ಡಾಕ್ಯುಮೆಂಟರಿ ಆಂಗ್ಲ ಭಾಷೆಯಲ್ಲಿದ್ದು, ಯೂಟ್ಯೂಬ್ ನಲ್ಲಿ ನೋಡಿ, ಕೇಳಿ ಸಂಭ್ರಮಿಸಿ.
ಎಲ್ಲ ಓದುಗರಿಗೆ ನಾಡಹಬ್ಬ, ನವರಾತ್ರಿ, ವಿಜಯದಶಮಿ ಮತ್ತು ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications