ಮೈಸೂರು: ಗಣೇಶನ ಹಬ್ಬದಲ್ಲಿ ಇಲಿಯನ್ನು ಪೂಜಿಸುವ ಕುಟುಂಬ
ಮೈಸೂರು, ಆಗಸ್ಟ್ 22: ಇಡೀ ದೇಶವೂ ಗೌರಿ-ಗಣೇಶ ಹಬ್ಬಕ್ಕಾಗಿ ಸಿದ್ಧತೆ ನಡೆಸುತ್ತಿದೆ. ಗೌರಿ-ಗಣೇಶನ ಮೂರ್ತಿಯ ಖರೀದಿಯ ಭರಾಟೆ ಹೆಚ್ಚಾಗಿರುವ ಸಂದರ್ಭದಲ್ಲೇ ಮೈಸೂರಿನ ಕೆಲವು ಕುಟುಂಬದ ಜನರು ಇಲಿಯ ಮಣ್ಣಿನ ವಿಗ್ರಹ ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ!
ಮೈಸೂರಿನಲ್ಲಿರುವ ಆರ್ಯ ವ್ಯಾಸ ಸಮುದಾಯದ ಸುಮಾರು 25 ಕುಟುಂಬದ ಜನರು ಪ್ರತಿವರ್ಷ ಗೌರಿ-ಗಣೇಶನ ಹಬ್ಬದ ಸಂದರ್ಭದಲ್ಲಿ ಇಲಿಯನ್ನು ಪೂಜಿಸುತ್ತಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಎಂಬ ಊರಿನಿಂದ ಬಂದು ಮೈಸೂರಿನಲ್ಲಿ ನೆಲೆಸಿರುವ ಆರ್ಯ ವ್ಯಾಸ ಸಮುದಾಯದ ಜನರು ಪ್ರತಿವರ್ಷ ಚೌತಿಯಲ್ಲಿ ಗಣೇಶನ ಬದಲಾಗಿ ಆತನ ವಾಹನ ಮೂಷಿಕನನ್ನು ಪೂಜಿಸುತ್ತಾರೆ!

ಮೈಸೂರಿನ ಕುವೆಂಪುನಗರದಲ್ಲಿ ವಾಸವಿರುವ ಆರ್ಯ ವ್ಯಾಸ ಸಮುದಾಯದ ವ್ಯಕ್ತಿಯೊಬ್ಬರು ಹೇಳುವ ಪ್ರಕಾರ, ಮೊದಲು ಇವರ ಕುಟುಂಬದಲ್ಲಿ ಗಣೇಶನನ್ನು ಅದ್ಧೂರಿಯಾಗಿ ಪೂಜಿಸಲಾಗುತ್ತಿತ್ತಂತೆ. ಆದರೆ ಕುಟುಂಬಕ್ಕೆ ಮಾತ್ರ ಯಾವುದೇ ರೀತಿಯ ಒಳಿತಾಗಿರಲಿಲ್ಲ.
ಹೀಗಿರುವಾಗ ಮನೆಯ ಯಜಮಾನರೊಬ್ಬರ ಕನಸಿನಲ್ಲಿ ಬಂದ ಗಣೇಶ, ನನ್ನ ಬದಲಾಗಿ ನನ್ನ ವಾಹನ ಇಲಿಯನ್ನು ಪೂಜಿಸಿ, ನಿಮಗೆ ಒಳಿತಾಗುತ್ತದೆ ಎಂದನಂತೆ. ತದನಂತರ ಕಾಕತಾಳೀಯ ಎಂಬಂತೆ ಇವರ ಜೀವನದಲ್ಲಿ ಸುಧಾರಣೆ ಕಂಡುಬಂತಂತೆ. ಇವೆಲ್ಲ ಬಹಳ ವರ್ಷ ಹಳೆಯ ಮಾತು. ಆದರೆ ಇಂದಿಗೂ ಈ ಕುಟುಂಬ ಮಾತ್ರ ಗಣೇಶನ ಬದಲು ಇಲಿಯನ್ನೇ ಪೂಜಿಸುತ್ತಿದೆ.
ಈ ವರ್ಷವೂ ಈಗಾಗಲೇ ಮೂಷಿಕನ ಮೂರ್ತಿಯ ಖರೀದಿಗೆ ತೊಡಗಿರುವ ಕುಟುಂಬ, ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿಕೊಂಡಿದೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications